ಶಿವಮೊಗ್ಗಶಿವಮೊಗ್ಗ ನಗರ

ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೋಲಾಹಲ: ಪಾಲಿಕೆ ಸಭೆಯಲ್ಲಿ ಖಾಲಿ ಕೊಡದ ಪ್ರದರ್ಶನ

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಸಾಮಾ ನ್ಯ ಸಭೆಯಲ್ಲಿ ಸೋಮವಾರ ಮಾಮೂಲಿಯಂತೆ ಮೂಲಭೂತ ಸೌಲಭ್ಯಗಳಾದ ನೀರು, ವಿದ್ಯುತ್‌ ಮತ್ತು ಸ್ವಚ್ಚತೆಯ ಅವ್ಯವಸ್ಥೆಗೆ ಭಾರಿ ಪ್ರತಿಭಟನೆ, ಕೋಲಾಹಲ ನಡೆಯಿತು.

ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್‌ ಅವರು, ಸಿಟಿ ಸೆಂಟ್ರಲ್‌ ಮಾಲ್‌ ವಿಚಾರಕ್ಕೆ ಸಂಬಂಸಿದಂತೆ ಪ್ರಸ್ತಾಪ ಮಾಡಿ ದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್‌ ಅವರು, ಇದು ಮುಗಿದ ಅಧ್ಯಾ ಯ ಮತ್ತೆ ಮತ್ತೆ ಚರ್ಚೆಬೇಡ ಎಂದಾಗ ವಿಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮೇಯರ್‌ ಮಧ್ಯ ಪ್ರವೇಶಿಸಿ ಈಗಾಗಲೇ ಮಾಲ್‌ ಸಂಬಂಧ ಪಟ್ಟ ಹಾಗೆ ಕಡತ ಜಿಲ್ಲಾಕಾರಿ ಕಚೇರಿಗೆ ಹೋಗಿದೆ. ಅವರು ನೀಡುವ ವರದಿ ಆಧರಿಸಿ ತಪ್ಪಿತಸ್ಥ ಅಕಾರಿ ವಿರುದ್ಧ ಕ್ರಮ ಜರುಗಿಸು ವುದಾಗಿ ತಿಳಿಸಿದರು. ಪ್ರತ್ಯುತ್ತರ ನೀಡಿದ ವಿಪಕ್ಷದವರು ಮೇಯರ್‌ ಅವರು ಆಡಳಿತ ಪಕ್ಷದ ನಿರ್ದೇಶ ನದ ಮೇರೆಗೆ ಹೇಳಿಕೆ ಕೊಡುತ್ತಿ ದ್ದಾರೆ ಎಂದು ಕಟಕಿಯಾಡಿದರು. ಕಾಂಗ್ರೆಸ್‌ನವರಿಗೆ ಭ್ರಷ್ಟಾಚಾರ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸೋ ಉದ್ದೇಶವೇಯಿಲ್ಲ. ನೂರಾರು ಸಮಸ್ಯೆಗಳಿದ್ದರೂ ಕಲಾಪವನ್ನು ವಿನಾಕಾರಣ ವ್ಯರ್ಥಮಾಡುತ್ತಾರೆ ಎಂದು ಮಾಜಿ ಉಪಮೇಯರ್‌ ಶಂಕರ್‌ಗನ್ನಿ ತೀವ್ರ ವಾಗ್ದಾಳಿ ನಡೆಸಿದರು.

ಇನ್ನೋರ್ವ ಸದಸ್ಯ ವಿಶ್ವ ನಾಥ್‌ ಅವರು ಕೂಡ ವಿಪಕ್ಷಗಳ ಬಗ್ಗೆ ಟೀಕಾ ಪ್ರಹಾರ ಮಾಡಿ ಅಭಿವೃದ್ಧಿ ಬಗ್ಗೆ ಚರ್ಚಿಸೋಣ ಎಂದರು. ಚನ್ನಬಸಪ್ಪ ಹಾಗೂ ಸುರೇಖಾ ಮುರುಳೀಧರ್‌ ಮಾತ ನಾಡಿ, ಕಾಂಗ್ರೆಸ್‌ ಆಡಳಿತದ ಅವ ಕಾಲದಲ್ಲಿ ಪಾಲಿಕೆ ಆಸ್ತಿ ಯನ್ನು ವಕ್‌ಬೋರ್ಡಿಗೆ ಖಾತೆಮಾಡಿ ಕೊಡಲಾಗಿದೆ. ಈಗ ದೇವಸ್ಥಾನದ ಆಸ್ತಿಗಳ ಬಗ್ಗೆ ಅಕಾರಿಗಳು ವಿಳಂಬ ಮಾಡು ತ್ತಿದ್ದಾರೆ. ಬಾಪೂಜಿ ನಗರದಲ್ಲಿ ದೇವಾಲಯದ ಜಾಗವನ್ನು ಇನ್ನು ಅಕಾರಿಗಳು ಅಳತೆಮಾಡಿಕೊ ಟ್ಟಿಲ್ಲ. ಯಾಕೆ ಈ ರೀತಿಯ ನಿರ್ಲಕ್ಷ್ಯ ಎಂದು ಗೊತ್ತಾಗುತ್ತಿಲ್ಲ ಎಂದಾಗ ವಿಪಕ್ಷಗಳು ಚುನಾವಣೆ ಹತ್ತಿರ ಬಂದಾಗ ನಿಮಗೆ ದೇವಾಲಯಗಳ ಬಗ್ಗೆ ವಿಶೇಷ ಆಸಕ್ತಿ ಬರುತ್ತದೆ ಎಂದು ಟೀಕಿಸಿ ದರು.

ಪ್ರಮುಖವಾಗಿ ತೀವ್ರ ಬೇಸಿಗೆಯಿಂದ ಜನ ಬಳಲುತ್ತಿದ್ದು, ಪ್ರತಿಯೊಂದು ವಾರ್ಡ್‌ನಲ್ಲೂ ಬೀದಿದೀಪ, ಸ್ವಚ್ಚತೆ ಹಾಗೂ ಪ್ರಮುಖವಾಗಿ ಕುಡಿಯುವ ನೀರಿನ ಅವ್ಯವಸ್ಥೆಯಿದೆ. ಅನೇಕ ವಾರ್ಡ್‌ಗಳಲ್ಲಿ ವಾರಗಟ್ಟಲೆ ನೀರು ಬರುತ್ತಿಲ್ಲ. ಒಡೆದ ಪೈಪ್‌ಗಳನ್ನು ಅಕಾರಿಗಳು ಸರಿಪಡಿಸುತ್ತಿಲ್ಲ. ಕೆಲವೊಂದು ರಸ್ತೆಯಲ್ಲಿ ಧಾರಕಾ ರವಾಗಿ ನೀರು ಹರಿದು ಹೋಗು ತ್ತಿದ್ದು, ಗಮನಕ್ಕೆ ತಂದರೂ ವಾಟರ್‌ ಬೋರ್ಡ್‌ ಅಕಾರಿಗಳು ಹತ್ತಿರ ಸುಳಿಯುತ್ತಿಲ್ಲ. ಜನರು ಜನಪ್ರತಿನಿಗಳು ಹಿಗ್ಗಾಮುಗ್ಗಾ ಬೈಯುತ್ತಿದ್ದು ನಾವು ಓಡಾಡುವುದು ಕಷ್ಟವಾಗಿದೆ ಎಂದು ೕರರಾಜ್‌ ಹೊನ್ನವಿಲೆ ಆಕ್ರೋಶ ವ್ಯಕ್ತಪಡಿಸಿದರು.

ವಿಪಕ್ಷಗಳ ಸದಸ್ಯರು ಕೂಡ ಒಕ್ಕೊರಲಿನಿಂದ ಇದಕ್ಕೆ ಧ್ವನಿಗೂ ಡಿಸಿದರು. ವಿಪಕ್ಷ ಸದಸ್ಯ ಹೆಚ್‌. ಸಿ.ಯೋಗೀಶ್‌ ಖಾಲಿ ಕೊಡಗಳ ಪ್ರದರ್ಶನ ಮಾಡಿ ಸದನದ ಬಾವಿಗೆ ವಿಪಕ್ಷ ಸದಸ್ಯರೊಂದಿಗೆ ತೆರಳಿ ನೀರಿನ ಅಸಮರ್ಪಕ ವಿತರಣೆಗೆ ಸಂಬಂಸಿದಂತೆ ಅಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

ನೀರಿನ ಸಮಸ್ಯಗೆ ಸಂಬಂಸಿದಂತೆ ಅಕಾರಿಗಳನ್ನು ಎಲ್ಲಾ ಸದಸ್ಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಹಲವಾರು ಲೇಔಟ್‌ಗಳು ನಿರ್ಮಾಣವಾಗಿ ಹಸ್ತಾಂತರಗೊಳ್ಳುವ ಸಂದರ್ಭ ದಲ್ಲಿ ಲೇಔಟ್‌ಗಳ ಮಾಲೀಕರು ಬಿಲ್‌ ಬಾಕಿ ಉಳಿಸಿಕೊಂಡಿರು ತ್ತಾರೆ. ಪಾಲಿಕೆ ಹಸ್ತಾಂತರವಾಗುವ ಮುನ್ನವೇ ಮೆಸ್ಕಾಂನವರು ವಿದ್ಯುತ್‌ ಕಡಿತಗೊಳಿಸುತ್ತಾರೆ. ಲೇಔಟ್‌ಗಳಿಗೆ ಎನ್‌ಒಸಿ ಕೊಡುವ ಮುನ್ನ ಅಕಾರಿಗಳು ಪರಿಶೀಲನೆ ಮಾಡದೆ ಕೊಡುವುದರಿಂದ ಪಾಲಿಕೆಗೆ ನಷ್ಟ ಅಲ್ಲದೆ ಲೇಔಟ್‌ ನಿವಾಸಿಗಳು ಕತ್ತಲೆಯಲ್ಲಿ ಇರುವಂ ತಾಗಿದೆ. ಪಾಲಿಕೆ ಸದಸ್ಯರಿಗೆ ಸ್ಥಳೀ ಯರು ಅಕಾರಿಗಳ ಧೋರಣೆ ಯಿಂದ ಬೈಸಿಕೊಳ್ಳುವಂತಾಗಿದೆ. ಎನ್‌ಒಸಿ ನೀಡಿದ ಅಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ೕರರಾಜ್‌ ಹೊನ್ನವಿಲೆ ಆಗ್ರಹಿಸಿ ದರು.

ಆಯುಕ್ತರು ಈ ಸಂಬಂಧ ಅಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಈ ರೀತಿಯ ತಪ್ಪು ಮರುಕಳಿಸದಂತೆ ಸೂಚಿಸಿದರು. ಇಂದಿನ ಸಭೆಯಲ್ಲಿ ವ್ಯಾಪಕವಾಗಿ ಎಲ್ಲಾ ಸದಸ್ಯರು ಪಕ್ಷ ಭೇದ ಮರೆತು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಸಭೆಯ ಬಹುಪಾಲು ಗದ್ದಲದಲ್ಲೇ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮೇಯರ್‌ ಶಿವ ಕುಮಾರ್‌ ಅವರು ವಹಿಸಿದರು.

ಉಪಮೇಯರ್‌ ಲಕ್ಷ್ಮೀ ಶಂಕರ್‌ನಾಯ್‌್ಕ, ಆಯುಕ್ತರಾದ ಮಾಯಣ್ಣಗೌಡ ಹಾಗೂ ಪಾಲಿಕೆಯ ಸದಸ್ಯರು, ಅಕಾರಿಗಳು ಪಾಲ್ಗೊಂಡಿದ್ದರು.