ಕ್ರೈಂಜಿಲ್ಲಾ ಸುದ್ದಿ

ರಾತ್ರೋರಾತ್ರಿ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿ

ಶಿವಮೊಗ್ಗ : ನಗರದ ಸೂಳೇ ಬೈಲಿನ ಗ್ಯಾಸ್‌ ಗೋದಾಮಿನ ಎದುರಿನ ಶೆಡ್‌ ನಲ್ಲಿದ್ದ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿ ಯಾಗಿವೆ. ಪಾರ್ಕ್‌ ಮಾಡಲಾಗಿದ್ದ ಏಳರಲ್ಲಿ ಐದು ದ್ವಿಚಕ್ರ ವಾಹನ ಸಂಪೂರ್ಣ ಉರಿದು ಬೂದಿ ಯಾಗಿದೆ.

ಗೋದಾಮು ಎದುರಿನ ಮನೆ ಯವರೆಲ್ಲಾ ಸೇರಿ ಶೆಡ್‌ ಒಂದರಲ್ಲಿ ಏಳು ಬೈಕ್‌ ಗಳನ್ನ ಪಾರ್ಕ್‌ ಮಾಡಿ ದ್ದರು. ರಾತ್ರೋರಾತ್ರಿ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾ ಗಿವೆ.ಇದು ಕಿಡಿಗೇಡಿಗಳ ಕೃತ್ಯ ವೋ ಅಥವಾ ಶಾರ್ಟ್‌ ಸರ್ಕ್ಯೂ ಟ್‌ ನಿಂದ ಆದ ಅನಾಹುತವೋ ಎಂಬುದು ಪೊಲೀಸ್‌ ತನಿಖೆ ಯಿಂದ ತಿಳಿದು ಬರುತ್ತಿದೆ. ಆದರೆ ಇಲ್ಲಿಯ ಸಿಸಿ ಟಿವಿಯಲ್ಲಿ ಯಾರ ಚಲನವಲನಗಳು ಪತ್ತೆಯಾಗಿಲ್ಲ ವೆಂದು ಹೇಳಲಾಗುತ್ತಿದೆ.

ಇಮಾಮ್‌, ಅಹ್ಮದ್‌, ರಾಜಾ ಹಾಗೂ ಮದರಸದಲ್ಲಿ ಶಿಕ್ಷಕರಾಗಿ ರುವರೊಬ್ವರ ದ್ವಿಚಕ್ರ ವಾಹನಗಳು ಉರಿದು ಬೂದಿಯಾಗಿದೆ. ದ್ವಿಚ ಕ್ರವಾಹನದಲ್ಲಿ ಆಕ್ಸಸ್‌, ಹೀರೋ ಹೊಂಡ ಹಾಗೂ ಡಿಸ್ಕವರ್‌ ಬೈಕ್‌ ಗಳ ಜೊತೆ ಏಳು ಬೈಕುಗಳಿದ್ದವು ಎನ್ನಲಾಗಿದೆ.

ಏಳರಲ್ಲಿ 5 ವಾಹನಗಳು ಸಂಪೂರ್ಣ ಕರಕಲಾಗಿದೆ. ಇಡೀ ಶೆಡ್ಡೇ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಿಂದಿಸುವ ಪ್ರಯತ್ನ ಪಟ್ಟಿವೆ. ತುಂಗ ನಗರ ಪೊಲೀಸರು ಬೆಳಿಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.