ನಡು ರಸ್ತೆಯಲ್ಲಿ ಗನ್ ತೋರಿಸಿ ಧಮ್ಕಿ
ಶಿವಮೊಗ್ಗ : ನಗರದಲ್ಲಿ ಇದು ವರೆಗೂ ತಲವಾರು, ಚಾಕು ತೋರಿಸಿ ಹೆದರಿಸುತ್ತಿದ್ದ ಜನ ಅಪ್ ಗ್ರೇಡ್ ಆಗಿದ್ದಾರೆ. ಶಿವಮೊಗ್ಗದಲ್ಲಿ ಗನ್ ತೋರಿಸಿ ಧಮ್ಕಿ ಹಾಕಿರುವ ಘಟನೆ ನಡೆದಿದೆ.
ಇಲಿಯಾಜ್ ನಗರದಲ್ಲಿ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಮಾರುವ ಉದ್ದಿಮಿ ಮೊಹ್ಮದ್ ರಿಯಾಬ್ ಎಂಬಾತನ ಬಳಿ ಅಜರ್ ಎಂಬಾತ ಯುವಕ ವಾಹನ ಖರೀದಿಸಿ ಹಣವನ್ನ 2 ತಿಂಗಳ ಬಳಿಕ ಕೊಡುವುದಾಗಿ ತಿಳಿಸಿರುತ್ತಾನೆ.ಆದರೆ ಅಜರ್ ರಿಯಾಬ್ ಗೆ ಸರಿಯಾದ ಸಮಯ ದಲ್ಲಿ ಹಣ ಕೊಡದೆ ಆಟವಾಡಿ ಸುತ್ತಿದ್ದನು. ಶನಿವಾರ ನ್ಯಾಮತ್ ಶಾದಿ ಮಹಲ್ ಬಳಿ ನಿಂತಿದ್ದ ಅಜರ್ ಗೆ ಬೈಕ್ ಕೊಡು ಇಲ್ಲ ಹಣ ಕೊಡು ಎಂದು ರಿಯಾಬ್ ಕೇಳು ತ್ತಾನೆ.ಹಣ ಕೊಡಲ್ಲ ಎನು ಮಾಡಿ ಕೊಳ್ತ್ಯಾ ಮಾಡಿಕೊ ಎಂದು ಅಜರ್ ರಿಯಾಬ್ ಎದುರು ಸೆಟೆದು ನಿಂತು ಬಡ್ತಾನೆ. ಆತನ ಮೇಲೆ ಹಲ್ಲೆ ನಡೆಸುತ್ತಾನೆ. ಬೆನ್ನಿನ ಹಿಂದೆ ಸಿಗಸಿಕೊಂಡಿದ್ದ ಗನ್ ನ್ನ ತೋರಿಸಿ ಶೂಟ್ ಮಾಡುವುದಾಗಿ ಬೆದರಿಸುತ್ತಾನೆ.
ಅಷ್ಟರಲ್ಲಿ ಮೌಸೀನ್ ಮತ್ತು ಅ್ರೇಜ್ ಬರುವುದನ್ನ ನೋಡಿ ಇವತ್ತು ಬಜಾವ್ ಆಗಿದ್ದೀಯ ಎಂದು ಹೇಳಿ ಅಜರ್ ಪರಾರಿಯಾಗಿಬಿಡ್ತಾರೆ. ಈ ಕುರಿತು ಮೊಹ್ಮದ್ ರಿಯಾಜ್ ದೊಡಗಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.