ಜಿಲ್ಲಾ ಸುದ್ದಿ

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ  ಹಣ ಮತ್ತು ಅವಲಕ್ಕಿ ಸರ ಕಳುವು

ಶಿವಮೊಗ್ಗ : ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ದಲ್ಲಿ ಬಹುತೇಕ ಲ್ಯಾಪ್‌ ಟ್ಯಾಪ್‌ ಕಳುವು ಪ್ರಕರಣ ದಾಖಲಾಗು ತ್ತದೆ. ಆದರೆ ಈ ಬಾರಿ  ಪ್ರಯಾ ಣಿಕರ 1,47,000/- ರೂ ಮೌಲ್ಯದ ನಗದು ಮತ್ತು ಅವಲಕ್ಕಿ ಸರ ಕಳುವಾಗಿರ ಘಟನೆ ವರದಿ ಯಾಗಿದೆ.

ಹಾವೇರಿ ಜಿಲ್ಲೆಯ ಹಿರೇಕೆ ರೂರು ತಾಲೂಕಿನ ಹಂಸಭಾವಿ ಗ್ರಾಮದಿಂದ ಪದ್ಮಾವತಿ ಮತ್ತು ಮುರುಳೀಧರ್‌ ರಾವ್‌ ಎಂಬ ವೃದ್ಧ ದಂಪತಿಗಳು ಉಡುಪಿಗೆ ಹೋಗಿ ಪೂಜಾ ಕಾರ್ಯ ಮುಗಿಸಿ ವಾಪಸ್‌ ಹಂಸಭಾವಿಗೆ ವಾಪಾಸ್‌ ಹೋಗುವಾಗ ಶಿವಮೊಗ್ಗದ ಕೆಎಸ್‌ ಆರ್‌ಟಿ ಸಿ ಬಸ್‌ ನಿಲ್ದಾಣಕ್ಕೆ ಬಂದಿದ್ದರು.

ಮಾ. 25 ರಂದು ಉಡುಪಿಗೆ ಹೋಗಿದ್ದ ಅವರು ಏ.3 ರಂದು ವಾಪಾಸ್‌ ಶಿವಮೊಗ್ಗಕ್ಕೆ ಬಂದಿರು ತ್ತಾರೆ ಏ.3 ರಂದು ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ದಿಂದ ಹಂಸಭಾವಿ ಬಸ್‌ ಹತ್ತಿ ಟಿಕೇಟ್‌ ಕೊಳ್ಳಲು ಮುಂದಾದಾಗ ವ್ಯಾನಿಟಿ ಬ್ಯಾಗ್‌ ನಲ್ಲಿದ್ದ 15 ಸಾವಿರ ರೂ. ಮತ್ತು 33 ಸಾವಿರ ರೂ. ಮೌಲ್ಯದ ಅವಲಕ್ಕಿ ಸರ ಕಳುವಾಗಿರುತ್ತದೆ.