ಜಿಲ್ಲಾ ಸುದ್ದಿ

ಸಂಸ್ಕಾರಯುತ ಜೀವನ ನಡೆಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ನಿರ್ದೇಶಕ ಡಿ.ವಿ.ಸತೀಶ್‌

ಶಿವಮೊಗ್ಗ : ಸಂಸ್ಕಾರಯುತ ಜೀವನ ನಡೆಸು ವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಆದಿ ಚುಂಚ ನಗಿರಿ ವಿದ್ಯಾ ಸಂಸ್ಥೆಯ ನಿರ್ದೇಶಕ ಸತೀಶ್‌ ಬೇಸರ ವ್ಯಕ್ತಪಡಿಸಿದರು.

ಶ್ರೀ ಆದಿ ಚುಂಚನಗಿರಿ ಶಾಖಾ ಮಠದ ವತಿ ಯಿಂದ ನಗರದ ಶ್ರೀ ಕಾಲಭೈರವೇಶ್ವರ ದೇವಸ್ಥಾನ ದಲ್ಲಿ 12ದಿನಗಳ ಕಾಲ 12ರಿಂದ 15 ವಯೋ ಮಾನದ ಬಾಲಕರಿಗೆ ಏರ್ಪಡಿಸಲಾಗಿದ್ದ ಉಚಿತ ಪೂಜಾ ವಿಧಾನ ಅಭ್ಯಾಸ ತರಬೇತಿ ಕಾರ್ಯ್ ಗರವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಪ್ರತಿಯೊಬ್ಬರೂ ಸಂಸ್ಕಾರಯುತ ಜೀವನವನ್ನು ಸಾಗಿ ಸಿದರೆ ನಮ್ಮ ಸಮಾಜ ಉತ್ತಮ ಹಾದಿಯಲ್ಲಿ ಸಾಗುತ್ತಿದೆ ಎಂದರು.

ಸಂಸ್ಕಾರವು ಮಾನವ ಜೀವ ನದ ವಿವಿಧ ಘಟ್ಟಗಳನ್ನು ಗುರುತು ಮಾಡುತ್ತದೆ. ಧರ್ಮ ಮಾರ್ಗಗ ಳಲ್ಲಿ ನಡೆಯಲು ಅರ್ಹತೆಯನ್ನು  ನೀಡುತ್ತದೆ. ಉತ್ತಮ ಜೀವನ ನಡೆಸಲು ಕೆಲ ವೊಂದು ಧಾರ್ಮಿಕ ವಿ ವಿಧಾನಗ ಳನ್ನು ಅನುಸರಿಸು ವುದರಿಂದ ಸಾಧ್ಯವಾಗುತ್ತದೆ. ಸಂಸ್ಕಾರಗಳನ್ನು  ಯಾವುದೋ ಒಂದು ವರ್ಗಕ್ಕೆ ಮೀಸಲಿಡದೆ ಸರ್ವಜನಾಂಗಕ್ಕೂ ಲಭಿಸಬೇಕು ಎಂಬ ಆಶಯದಿಂದ ಶ್ರೀ ಪ್ರಸನ್ನ ನಾಥ ಸ್ವಾಮೀಜಿಯ ವರ ಕನಸಿ ನಂತೆ ಈ ಕಾರ್ಯ್ಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು, ಪುಟ್ಟ ಮಕ್ಕಳಲ್ಲಿ ಧಾರ್ಮಿಕ ವಿ ವಿಧಾನಗಳನ್ನು ಬಿತ್ತಿದಾಗ ಆ ಮಕ್ಕಳು ಮನೆಯವ ರಿಗೆಲ್ಲಾ ಮಾದರಿಯಾಗುತ್ತಾರೆ. ಪ್ರಾತಃ ಕಾಲದಲ್ಲಿ ಧಾರ್ಮಿಕ ವಿ ವಿಧಾನಗಳನ್ನು ಮನೆಗಳಲ್ಲಿ ಆರಂಭಿಸಿದರೆ ಆ ಮನೆಯ ಎಲ್ಲಾ ಕೆಲಸ ಕಾರ್ಯಗಳು ಕುಟುಂಬದ ಸದಸ್ಯರ ಕನಸಿನಂತೆ ಈಡೇರಲು ಭಗವಂತನ ಪ್ರೇರಣೆಯಾಗುತ್ತದೆ, ಅಲ್ಲದೇ ಭಗವಂತನ ರಕ್ಷಣೆಯೂ ಕೂಡ ಕುಟುಂಬದ ಸದಸ್ಯರ ಮೇಲೆ ಇರುತ್ತದೆ ಎಂದ ಅವರು, ನಮ್ಮ ಹೃದಯಾಂತರಾಳದಲ್ಲಿ ಇವುಗಳ ಬಗ್ಗೆ ಆಸಕ್ತಿಯ ಬೀಜ ಮೊಳಕೆ ಯೊ ಡೆಯುವಂತಾಗಬೇಕು ಎಂದರು.

ಪ್ರತಿಯೊಂದು ಕುಟುಂಬದಲ್ಲಿ ಓರ್ವ ಸದಸ್ಯ ಸಂಸ್ಕಾರವನ್ನು ಕಲಿತರೆ ಇಡೀ ಕುಟುಂಬ ಸಂಸ್ಕಾರ ವಂತ ಕುಟುಂಬವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಾಖಾ ಮಠ ಮತ್ತು ಶ್ರೀಗಳ ಕೃಪಾಶೀರ್ವಾದ ದೊಂದಿಗೆ ಕಾರ್ಯ್ಗಾರವನ್ನು ಏರ್ಪಡಿಸಲಾಗಿದ್ದು, ಈ ಸುವ ರ್ಣಾವಕಾಶವನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಧಾರ್ಮಿಕ ಹಾಗೂ ಸಂಸ್ಕಾರಯುತ ಜೀವನಕ್ಕೆ ನಾಂದಿ ಹಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶು ಪಾಲ ಹೇಮಾ ಎಸ್‌.ಆರ್‌, ಆಡಳಿತಾಧಿಕಾರಿ ಅಮಿಷ್‌ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

 12 ರಿಂದ 15 ವಯಸ್ಸಿನ  ಬಾಲಕರಿಗೆ ಅವಕಾಶ ಕಲ್ಪಿಸಿಕೊಡ ಲಾಗಿದೆ. ಮೊದಲು ಬಂದವರಿಗೆ ಆದ್ಯತೆ . ಈ ಕೂಡಲೇ ಹೆಸರನ್ನು ನೋಂದಾಯಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ದೂರ ವಾಣಿ ಸಂಖ್ಯೆ- 9686349534, 9739744430, 9902410112.