ಜಿಲ್ಲಾ ಸುದ್ದಿ

ತೀರ್ಥಹಳ್ಳಿಯಲ್ಲಿ ಹೊಸಗಾಳಿ ಬೀಸಲಿದೆ: ಜೆಡಿಎಸ್‌ ಅಭ್ಯರ್ಥಿ ರಾಜಾರಾಂ ಹೆಗ್ಡೆ

ಶಿವಮೊಗ್ಗ: ತೀರ್ಥಹಳ್ಳಿ ಯಲ್ಲಿ ಶಾಂತವೇರಿ ಗೋಪಾಲ ಗೌಡರ ತತ್ವಸಿದ್ಧಾಂತಗಳ ಮೇಲೆ ರಾಜಕಾರಣ ಮಾಡುವ ಉದ್ದೇಶ ದಿಂದ ಈ ಬಾರಿ ಸ್ಪರ್ಧೆ ಮಾಡಿ ದ್ದು, ಮಾದರಿ ಕ್ಷೇತ್ರಕ್ಕಾಗಿ ಪಣ ತೊಟ್ಟಿದ್ದೇನೆ. ಬುದ್ದಿವಂತ ಮತ ಕ್ಷೇತ್ರದ ಜನರು ಘಟಾನುಘಟಿ ನಾಯಕರ ನಡುವೆ ಹೊಸ ಮುಖಕ್ಕೆ ಅವಕಾಶ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರಾಜಾರಾಂ ಹೆಗ್ಡೆ ಹೇಳಿದರು.

ಶಿವಮೊಗ್ಗ ಪ್ರೆಸ್‌ ಟ್ರಸ್ಟ್ ಮತ್ತುಶಿವಮೊಗ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಿಕಾಭವನ ದಲ್ಲಿ ಮಂಗಳವಾರ ನಡೆದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾ ಡಿದರು. ಭೌಗೋಳಿಕವಾಗಿ ವಿಸ್ತಾರವಾಗಿರುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ವಿಭಿನ್ನ ಭಾಗದಲ್ಲಿ ವಿಭಿನ್ನ ಸಮಸ್ಯೆಗಳಿವೆ. ಪ್ರಮುಖ ವಾಣಿಜ್ಯಬೆಳೆಯಾದ ಅಡಕೆ ಈಗ ಸಂಕಷ್ಟದಲ್ಲಿದೆ. ದಿನಕ್ಕೊಂದು ರೋಗ ಮತ್ತು ಸರಕಾರದ ಪಾಲಿಸಿಗಳಿಂದ ಬೆಳೆಗಾರ ಆತಂಕದಲ್ಲಿ ದ್ದಾನೆ ಅವರಲ್ಲಿ ಆತ್ಮವಿಶ್ವಾಸ ತುಂಬುದ ಕೆಲಸ ಮಾಡಬೇಕಿದೆ ಎಂದರು.

ತೀರ್ಥಹಳ್ಳಿ ಕ್ಷೇತ್ರದ ಚಕ್ರಾ,ವರಾಹಿ ಹಾಗೂ ಶರಾವತಿ ಸಂತ್ರಸ್ತರ ಸಮಸ್ಯೆ ಇನ್ನೂ ಹಾಗೇ ಇದೆ. ವಿದ್ಯುತ್‌ ಯೋಜನೆಗಳಿಗೆ ಮನೆಮಠ ಕಳೆದುಕೊಂಡವರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರಕಾರಗಳಿಗೆ ಆಗಿಲ್ಲ ಈ ಎಲ್ಲಾ ಸಮಸ್ಯೆಗಳ ಬಗ್ಗೆ ನನಗೆ ಅರಿವಿದ್ದು, ಆ ಜನರ ನಡುವೆ ಇದ್ದು ಬಗೆಹರಿಸುವೆ ಎಂದರು.

ಉದ್ಯೋಗ ಸೃಷ್ಠಿ:

ತೀರ್ಥಹಳ್ಳಿಯ ಯುವ ಜನರು ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಿದರೆ ನಮ್ಮ ಹುಡುಗರು ಬೇರೆ ಕಡೆ ಹೋಗುವುದು ತಪ್ಪುತ್ತದೆ. ಅಡಕೆ ಉತ್ಪನ್ನಗಳ ಕೈಗಾರಿಕೆ, ಗುಡಿ ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಇಲ್ಲಿಯೇ ಉದ್ಯೊ ೕಗ ಸೃಷ್ಟಿಮಾಡಿದರೆ ಯುವಜನರು ವಲಸೆ ತಪ್ಪುತ್ತದೆ. ಮಲೆನಾಡಿನಲ್ಲಿ ಈಗ ವೃದ್ಧ ದಂಪತಿಗಳು ಮಾತ್ರ ಇದ್ದು, ಅವರನ್ನು ನೋಡಿಕೊ ಳ್ಳಬೇಕಾದ ಮಕ್ಕಳು ಹೊಟ್ಟೆಪಾಡಿ ಗಾಗಿ ನಗರಗಳಿಗೆ ಹೋಗಿದ್ದಾರೆ. ಇದರಿಂದ ಮಲೆನಾಡಿನ ಸಂಸ್ಕೃತಿ ಯ ಮೇಲೆಯೇ ಪೆಟ್ಟು ಬಿದ್ದಿದೆ. ಆದ್ದರಿಂದ ಸ್ಥಳೀಯವಾಗಿ ಉದ್ಯ ಮ ಸೃಷ್ಟಿಗೆ ಆದ್ಯತೆ ನೀಡುವೆ ಎಂದು ಹೇಳಿದರು.

ಶಾಂತವೇರಿ ಗೋಪಾಲ ಗೌಡರ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ತೀರ್ಥ ಹಳ್ಳಿ ಕ್ಷೇತ್ರದ ರಾಷ್ಟ್ರೀಯ ಪಕ್ಷಗಳ ಮುಖಂಡರು ಅವರ ಸಿದ್ಧಾಂತ ಗಳನ್ನು ಗಾಳಿಗೆ ತೂರಿದ್ದಾರೆ. ಹಣಬಲದ ಮೇಲೆ ರಾಜಕಾರಣಕ್ಕೆ ಮುಂದಾಗಿದ್ದಾರೆ. ಅವರ ನಡುವೆ ಹೊಸ ಮುಖಕ್ಕೆ ಅವಕಾಶ ಕೊಡಲು ತೀರ್ಥಹಳ್ಳಿಯ ಜನರು ತೀರ್ಮಾನ ಮಾಡಿದ್ದಾರೆ.

ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಅಭಿವೃದ್ಧಿ ಎಂಬುದು ನೆರೆಯ ಕೇರಳ, ತಮಿಳು ನಾಡು ,ಆಂಧ್ರಗಳಲ್ಲಿ ಸಾಬೀತಾ ಗಿದೆ.

ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್‌ ಮತ್ತೆ ಅಕಾರಕ್ಕೆ ಬರಲಿದೆ. ಕುಮಾರಣ್ಣ ಸರಕಾರದ ಯೋಜ ನೆಗಳು ನಮ್ಮ ಕೈ ಹಿಡಿಯಲಿವೆ ಎಂದರು.

ಯುವಕರ, ಕೃಷಿಕರ ಮತ್ತು ಸಾಮಾನ್ಯರ ಪ್ರತಿನಿಯಾಗಿರುವ ನನಗೆ ಈ ಬಾರಿ ತೀರ್ಥಹಳ್ಳಿ ಕ್ಷೇತ್ರದ ಮತದಾರರು ಕೈಹಿಡಿಯ ಲಿದ್ದಾರೆ.ಮಾದರಿ ಕ್ಷೇತ್ರಕ್ಕಾಗಿ ನನ್ನನ್ನು ಬೆಂಬಲಿಸಲಿದ್ದಾರೆ ಎಂದು ರಾಜಾರಾಂ ಹೇಳಿದರು. ಶಿವ ಮೊಗ್ಗ ಪ್ರೆಸ್‌ ಟ್ರಸ್ಟ್ ಅಧ್ಯಕ್ಷ ಎನ್‌. ಮಂಜುನಾಥ್‌, ಕಾರ್ಯದರ್ಶಿ ನಾಗರಾಜ್‌ ನೇರಿಗೆ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್‌ ಯಡಗೆರೆ, ಪ್ರಧಾನ ಕಾರ್ಯ ದರ್ಶಿ ಸಂತೋಷ್‌ ಕಾಚಿನಕಟ್ಟೆ ಉಪಸ್ಥಿತರಿದ್ದರು.