ಜಿಲ್ಲಾ ಸುದ್ದಿಶಿವಮೊಗ್ಗಸಾಗರ

ಗಣಪತಿ ಕೆರೆ ಅಭಿವೃದ್ದಿ ಹೆಸರಿನಲ್ಲಿ ಕೆರೆಯನ್ನು ಕಿರಿದುಗೊಳಿಸಿದ್ದೇ ಶಾಸಕ ಹಾಲಪ್ಪ ಅವರ ಸಾಧನೆ : ಕೆ.ಎನ್‌.ಶ್ರೀಧರ್‌

ಸಾಗರ : ನಿಷ್ಟಾವಂತ ಬಿಜೆಪಿ ಕಾರ್ಯಕರ್ತರ ವಿರೋಧದ ನಡುವೆಯೂ ಹೈಕಮಾಂಡ್‌ ಹಾಲಿ ಶಾಸಕ ಹರತಾಳು ಹಾಲಪ್ಪ ಅವರನ್ನು ಕಣಕ್ಕೆ ಇಳಿಸಿದೆ. ಇದನ್ನು ಖಂಡಿಸಿ ನಿಷ್ಟಾವಂತ ಬಿಜೆಪಿ ಕಾರ್ಯಕರ್ತರು ಶಾಸಕ ಹಾಲಪ್ಪ ಹರತಾಳು ಅವರನ್ನು ಸೋಲಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾ ಗುತ್ತದೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎನ್‌.ಶ್ರೀಧರ್‌ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ. ಲಂಚ ಕೊಡದೆ ಯಾವುದೇ ಕೆಲಸವಾಗುತ್ತಿಲ್ಲ. ಗಣಪತಿ ಕೆರೆ ಅಭಿವೃದ್ದಿ ಹೆಸರಿನಲ್ಲಿ ಕೆರೆಯನ್ನು ಕಿರಿದುಗೊಳಿಸಿದ್ದೇ ಶಾಸಕ ಹಾಲಪ್ಪ ಅವರ ಸಾಧನೆ ಯಾಗಿದೆ ಎಂದು ಹೇಳಿದರು.

ಕಳೆದ ಐದು ವರ್ಷದಲ್ಲಿ ಹಿಂದುತ್ವವನ್ನು ಸಂಪೂರ್ಣ ಮೂಲೆಗುಂಪು ಮಾಡಿದ ಹೆಗ್ಗಳಿಕೆ ಹಾಲಪ್ಪ ಅವರದ್ದಾಗಿದೆ. ಗಾಂಜಾ, ಓಸಿ ಹಾವಳಿ ಜಾಸ್ತಿಯಾಗಿದ್ದು, ಓಸಿ ದಂಧೆ ನಡೆಸುವವನನ್ನು ಶಕ್ತಿ ಕೇಂದ್ರದ ಅಧ್ಯಕ್ಷರನ್ನಾಗಿ ಮಾಡ ಲಾಗಿದೆ. ಮರಳು ಮಾಫಿಯಾ ದೊಡ್ಡಮಟ್ಟದಲ್ಲಿದೆ. ಮತಾಂತರ, ಲವ್‌ ಜಿಹಾದ್‌, ಗೋಹತ್ಯೆ ವಿರುದ್ದ ಕ್ರಮ ಕೈಗೊಂಡಿಲ್ಲ. ಐದು ವರ್ಷದಲ್ಲಿ ಒಂದೂ ಗೋಶಾಲೆ ಯನ್ನು ತೆರೆದಿಲ್ಲ. ನಗರಸಭೆ ಆಡಳಿತ ಸಂಪೂರ್ಣ ವೈಲ್ಯವಾ ಗಿದ್ದು, ಮಾರ್ಕೇಟ್‌ ರಸ್ತೆ ಅಗಲೀ ಕರಣ ಹೆಸರಿನಲ್ಲಿ ಸ್ಥಳೀಯರಿಗೆ ತೊಂದರೆ ನೀಡಲಾಗಿದೆ. ಆಡಳಿ ತದ ಮೇಲೆ ನಿಯಂತ್ರಣ ಸಾಸಲು ಸಾಧ್ಯವಾಗದವರು ಇನ್ನೊ ಮ್ಮೆ ಶಾಸಕರಾಗಬೇಕು ಎಂದು ಮತದಾರರು ಯೋಚಿಸಬೇಕು ಎಂದರು.

ಶಾಸಕ ಹಾಲಪ್ಪ ಅವರ ಐದು ವರ್ಷದ ಸಾಧನೆ ಎಂದರೆ ಸಂಸ್ಥೆ ಗಳನ್ನು ಒಡೆದದ್ದು. ಎಂಡಿಎ್‌‍ ಗಲಾಟೆ, ಮಾರಿಕಾಂಬಾ ವ್ಯವಸ್ಥಾ ಪಕ ಸಮಿತಿ, ಕಾಗೋಡು ತಿಮ್ಮಪ್ಪ ಅವರ ಕುಟುಂಬ ಒಡೆದದ್ದು, ಸಚಿವ ಅರಗ ಜ್ಞಾನೇಂದ್ರ ಕುಟುಂ ಬದಲ್ಲಿ ಹಸ್ತಕ್ಷೇಪ ಹಾನಗಲ್‌ ಕುಮಾರಸ್ವಾಮಿ ಶಿವಯೋಗಿ ಸ್ವಾಮಿಗಳು ಸ್ಥಾಪಿಸಿದ ವೀರಶೈವ ಮಹಾಸಭಾ ವಿಭಜನೆ ಹೀಗೆ ಅನೇಕ ಸಂಸ್ಥೆಗಳ ಅಸ್ಥಿರತೆಗೆ ಶಾಸಕ ಹಾಲಪ್ಪ ನೇರ ಕಾರಣವಾಗಿದ್ದಾರೆ. ಭಾರತೀಯ ಜನತಾ ಪಕ್ಷದ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ, ಊರಿನ ತುಂಬಾ ಎಂ.ಎಸ್‌.ಐ. ಎಲ್‌. ಮದ್ಯದಂಗಡಿ ತೆರೆಯಲು ಅನುವು ಮಾಡಿಕೊಟ್ಟಿರುವ ಶಾಸಕ ಹಾಲಪ್ಪ ಹರತಾಳು ಅವರ ವೈಲ್ಯವನ್ನು ಕರಪತ್ರ ಮೂಲಕ ಮನೆಮನೆಗೆ ತಲುಪಿಸುವ ಕೆಲಸ ನೊಂದ ನಿಷ್ಟಾವಂತ ಕಾರ್ಯ ಕರ್ತರ ಪಡೆ ಮಾಡಲಿದೆ ಎಂದು ಹೇಳಿದರು.

ಗೋಷ್ಟಿಯಲ್ಲಿ ಎಸ್‌.ವಿ. ಕೃಷ್ಣಮೂರ್ತಿ, ಕಸ್ತೂರಿ ಸಾಗರ್‌, ಜಗದೀಶ್‌ ಗೌಡ, ಚಂದ್ರಶೇಖರ್‌, ಶ್ರೀಧರ್‌, ಪ್ರಶಾಂತ್‌ ಹೆಗಡೆ, ನಾಗರಾಜ್‌ ಮೊಗವೀರ ಇನ್ನಿತರರು ಹಾಜರಿದ್ದರು.