ಜಿಲ್ಲಾ ಸುದ್ದಿ

ಕೆ.ಬಿ. ಅಶೋಕ ನಾಯ್ಕ ಗೆಲುವು ಖಚಿತ

ಶಿವಮೊಗ್ಗ: ಶಾಸಕರಾಗಿ ಕಳೆದ ಐದು ವರ್ಷದಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಮಾದರಿ ಕ್ಷೇತ್ರವನ್ನಾಗಿ ಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶಾಸಕ ಕೆ.ಬಿ. ಅಶೋಕ ನಾಯ್ಕ ಅವರು ಮೇ 10ರಂದು ನಡೆಯಲಿ ರುವ ಚುನಾವಣೆಯಲ್ಲಿ ಅತ್ಯಕ ಮತಗಳನ್ನು ಗಳಿಸಿ ಗೆಲುವು ಸಾಸಲಿದ್ದಾರೆ ಎಂದು ಉತ್ತರಾಖಂಡ ರಾಜ್ಯದ ಬಿಜೆಪಿ ಉಪಾಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲ ಚುನಾ ವಣಾ ಉಸ್ತುವಾರಿ ಕುಲದೀಪ್‌ ಸಿಂಗ್‌ ತಿಳಿಸಿದರು.

ಅವರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಕಾರ್ಯ್ಲಯದಲ್ಲಿ   ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಹಾಗೂ ದೇಶದ ಡಬಲ್‌ ಇಂಜಿನ್‌ ಸರ್ಕಾರ ಜನಪರ ಯೋಜನೆಗಳಿಂದ ಜನಪ್ರಿಯತೆ ಗಳಿಸುತ್ತಿದ್ದು, ಚುನಾ ವಣೆ ಸಂದರ್ಭದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿ ಸುತ್ತಿದೆ ಎಂದರು.

ಈ ಹಿಂದೆ ದೇಶದಲ್ಲಿ ಇದ್ದ ರಸ್ತೆಗಳನ್ನು ಗಮನಿಸಿದರೆ ಈಗಿನ ರಸ್ತೆಗಳು ಅತ್ಯುತ್ತಮವಾಗಿವೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಹೆಸರು ಗಳಿಸಿದ್ದು, ಕೋವಿಡ್‌ ಸಂದರ್ಭದಲ್ಲಿ ತೆಗೆದು ಕೊಂಡ ಕ್ರಮದಿಂದ ಜಗತ್ತಿನಲ್ಲೇ ಸಾವಿನ ಸಂಖ್ಯೆ ಕಡಿಮೆ ಇದೆ. ದೇಶದಲ್ಲಿ ಉತ್ಪಾದಿಸಲಾದ ಕೋವಿಡ್‌ ವ್ಯಾಕ್ಸಿನ್‌ನಿಂದಾಗಿ ಮುಂದುವರೆದ ದೇಶಗಳೂ ಸಹ ಮೆಚ್ಚುಗೆ ವ್ಯಕ್ತಪಡಿಸಿವೆ ಎಂದರು.

ಹಲವಾರು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಡಬಲ್‌ ಇಂಜಿನ್‌ ಸರ್ಕಾರದಿಂದ ಲಕ್ಷಾಂತರ ರೈತರು ಇದರ ಲಾಭ ಪಡೆದಿದ್ದಾರೆ. ಬಡವರಿಗಾಗಿ ಉಜ್ವಲ ಯೋಜನೆಯಡಿ ಉಚಿತ ವಾಗಿ ಗ್ಯಾಸ್‌ ಸಿಲಿಂಡರ್‌ ನೀಡಲಾ ಗುತ್ತಿದೆ. ಕೇಂದ್ರ ಸರ್ಕಾರದ ಸಾಧನೆಯಿಂದಾಗಿ ಜಗತ್ತಿನಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು.

ಕಳೆದ 20 ವರ್ಷದ ಹಿಂದೆ ಇದ್ದ ಶಿವಮೊಗ್ಗ ಜಿಲ್ಲೆಯ ಚಿತ್ರಣವೇ   ಬದಲಾಗಿದೆ. ಆರ್ಥಿಕ ಸ್ಥಿತಿಯೂ ಉತ್ತಮವಾಗಿದೆ. ಹಲ ವಾರು ಏತ ನೀರಾವರಿ ಯೋಜ ನೆಗಳಿಂದ ಕೆರೆಗಳಿಗೆ ನೀರು ಹರಿದು ರೈತರಿಗೆ ಅನುಕೂಲವಾಗಿದೆ. ಅದರಲ್ಲೂ ಶಿವಮೊಗ್ಗ ಗ್ರಾಮಾ ಂತರ ಕ್ಷೇತ್ರದಲ್ಲಿ ಶಾಸಕರ ಶ್ರಮ ದಿಂದಾಗಿ ಹಲವಾರು ಯೋಜನೆ ಗಳು ಅನುಷ್ಠಾನಗೊಂಡಿರುವುದು ಕ್ಷೇತ್ರದ ಜನತೆ ಕೊಂಡಾಡುತ್ತಿ ದ್ದಾರೆ. ಇದನ್ನು ಗಮನಿಸಿದರೆ ಶಾಸಕ ಕೆ.ಬಿ. ಅಶೋಕ್‌ ನಾಯ್ಕ ಅವರು ಮತ್ತೊಮ್ಮೆ ಶಾಸಕ ರಾಗುವುದು ಖಚಿತ ಎಂದರು.

ಶಾಸಕ ಕೆಬಿ. ಅಶೋಕ್‌ ನಾಯ್ಕ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಐದು ಏತನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಇದರಿಂದ ಸುಮಾರು 165 ಕೆರೆಗ ಳಿಗೆ ನೀರು ಹರಿಸಿ ರೈತರ ಬದು ಕನ್ನು ಹಸನು ಮಾಡಲಾಗುತ್ತಿದೆ. 128 ದೇವಸ್ಥಾನಗಳ ಅಭಿವೃದ್ಧಿ, ವಿದ್ಯುತ್‌ ಯೋಜನೆ, ಕುಡಿಯುವ ನೀರಿನ ಯೋಜನೆ, ಬಡವರಿಗೆ ಮನೆ, ನಿವೇಶನ ಸೌಲಭ್ಯ, ರಸ್ತೆಗಳ ಅಭಿವೃದ್ಧಿ, ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೊಂಡು ಶಾಶ್ವತ ಪರಿಹಾರ ನೀಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಕ್ಷೇತ್ರದ ಪ್ರವಾಸಿ ಪ್ರಭಾರಿ ಉತ್ತರಾಖಂಡದ ಮಾಜಿ ಶಾಸಕ ಮುಖೇಶ್‌ ಕೂಲಿ, ಮುಖಂಡರಾದ ಎಸ್‌.ದತ್ತಾತ್ರಿ, ರತ್ನಾಕರ ಶೆಣೈ, ವಿರೂಪಾಕ್ಷಪ್ಪ, ಸಿಂಗನಹಳ್ಳಿ ಸುರೇಶ್‌ ಮತ್ತಿತರರಿದ್ದರು.