ಜಿಲ್ಲಾ ಸುದ್ದಿ

ಜೆಡಿಎಸ್‌ ಪಕ್ಷದ ಅಭ್ಯರ್ಥಿ ಬಾಸೂರು ಚಂದ್ರೇಗೌಡ ನಾಮಪತ್ರ ಸಲ್ಲಿಕೆ

ಸೊರಬ:ಸೊರಬ ವಿಧಾನ ಸಭಾ ಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾದ ಬಾಸೂರು ಚಂದ್ರೇಗೌಡ ಮಂಗಳವಾರ ಪಟ್ಟಣದ ಶ್ರೀ ರಂಗನಾಥ ಸ್ವಾಮಿಗೆ ಕುಟುಂಬ ಸಮೇತರಾಗಿ ಬಂದು  ಪೂಜೆ ಸಲ್ಲಿಸಿ  ರೋಡ್‌ ಶೋ ಮೂಲಕ ಅಪಾರ ಸಂಖ್ಯೆಯ  ಕಾರ್ಯಕರ್ತರು ಹಾಗೂ  ಮುಖಂಡರ ಮೂಲಕ ತಾಲೂಕು ಕಛೇರಿ ವರಗೆ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ನಂತರ  ಮಾಧ್ಯಮದವರೋಂದಿಗೆ  ಮಾತನಾಡಿದ ಅವರು ಹಿಂದುಳಿದ  ತಾಲ್ಲೂಕು ಎಂಬ ಹಣೆಪಟ್ಟಿಗೆ ಒಳಗಾಗಿರುವ ಸೊರಬ ತಾಲ್ಲೂಕ  ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದ  ಕುಮಾರಸ್ವಾಮಿಯವರು  ಮುಖ್ಯಮಂತ್ರಿಯಾದ ಅಧಿವಯಲ್ಲಿ ಹಲವು ಜನಪರ ಯೋಜನೆಗಳನ್ನು ತಂದಿದ್ದಾರೆ

ರೈತರ  ಸಾಲಮನ್ನಾ.  ಏತ ನೀರಾವರಿ  ಹಲವಾರು ಯೋಜನೆಗಳನ್ನು ರೂಪಿಸಿದ್ದರು ಎಂದು ತಿಳಿಸಿದರು.

ತಾಲೂಕಿನ  ಅಭಿವೃದ್ಧಿ ಪರ ಚಿಂತನೆ ಹೊಂದಿದ ನಾನು ನಿರುದ್ಯೋಗ ನಿವಾರಣೆ ಮಾಡುವ ಉದ್ದೇಶದಿಂದ ಬೃಹತ್‌ ಕೈಗಾರಿಕೆಗಳನ್ನ ಸ್ಥಾಪಿಸುವ  ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

ರಸ್ತೆ. ನೀರಾವರಿ.   ಶಿಕ್ಷಣ, ಆರೋಗ್ಯ.ಮುಂತಾದ ಮೂಲ ಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು ಎಂದರು .

ಈ ಸಂದರ್ಭದಲ್ಲಿ ರಾಜ್ಯ  ಕಾರ್ಯದರ್ಶಿ ಎನ್‌.ಕುಮಾರ, ಜೆಡಿಎಸ್‌ ಪಕ್ಷದ ತಾಲೂಕು ಅಧ್ಯಕ್ಷ ಶಿವಪ್ಪ ವಕೀಲ, ಶ್ರೀಧರ್‌ ಶೇಟ್‌, ಅಬ್ದುಲ್‌ ಅಜೀಜ್‌ ಸಾಬ್‌, ಸುನಿಲ್‌, ಶಿವಾಜಪ್ಪ, ಸಂತೋಷ್‌, ಸಂಪತ್‌, ಚಂದ್ರಪ್ಪ, ರಾಜುಗೌಡ, ವಿಷ್ಣು, ಆನಂದಪ್ಪ, ಸೇರಿದಂತೆ ಮೊದಲಾದವರಿದ್ದರು.