ಶಿವಮೊಗ್ಗಶಿವಮೊಗ್ಗ ನಗರ

ಮಹಾನ್‌ ವ್ಯಕ್ತಿಗಳ ತತ್ವಾದರ್ಶವನ್ನು ಪ್ರತಿಯೊಬ್ಬರೂಅಳವಡಿಸಿಕೊಂಡರೆ ಅದೇ ಸಂವಿಧಾನ: ಮಧು ಬಂಗಾರಪ್ಪ

ಶಿವಮೊಗ್ಗ : ಕನಕದಾಸರ ಕೀರ್ತನೆಗಳು ಸೇರಿದಂತೆ ಮಹಾನ್‌ ವ್ಯಕ್ತಿಗಳ ತತ್ವಾ ದರ್ಶಗಳನ್ನು ಅಳವಡಿಸಿಕೊಂಡು ನಡೆದರೆ ಅದೇ ನಮ್ಮ ಸಂವಿಧಾನ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನುಡಿದರು.
ಜಿಲ್ಲಾಡಳಿತ, ಜಿ. ಪಂ., ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುರುಬರ ಸಂಘ, ಶಿವಮೊಗ್ಗ ಇವರುಗಳು ಸಂಯು ಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾ ಗಿದ್ದ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತ್ಯಾತೀತ, ಪಕ್ಷಾತೀತ ಆಡಳಿತಕ್ಕೆ ಸ್ಪೂರ್ತಿ ಕನಕದಾಸರಂತ ಹವರು. 16 ನೇ ಶತಮಾನದಲ್ಲೇ ಜಾತಿ ಮತ, ಧರ್ಮವನ್ನು ದೂರ ತಳ್ಳಿ, ಸಮಾನತೆ ಸಾರಿದ ಇವರಿಗೆ ಮುಂದಾಲೋಚನೆ ಹೆಚ್ಚಿತ್ತು. ಅವರ ಕುಲ ಕುಲವೆಂದು ಹೊಡೆ ದಾಡದಿರಿ, ನಿಮ್ಮ ಕುಲದ ನೆಲೆಯ ನೇನಾದರೂ ಬಲ್ಲಿರಾ ಎಂಬ ಪದ್ಯ ಇಂದಿಗೂ ಪ್ರಸ್ತುತ ವಾಗಿದೆ. ನಾವ್ಯಾರೂ ಇಂತಹ ಜಾತಿಯ ಲ್ಲಿಯೇ ಹುಟ್ಟುತ್ತೇ ವೆಂದು ಅರ್ಜಿ ಹಾಕಿರುವುದಿಲ್ಲ ಎಂದರು.
ದೈವಭಕ್ತಿಯಿಂದ ಶ್ರೀಕೃಷ್ಣ ನನ್ನೇ ಒಲಿಸಿಕೊಂಡ ಕನಕದಾಸರ ಕೊಡುಗೆ ಅಪಾರವಾಗಿದ್ದು, ಅವರು ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ. ಮಾನ್ಯ ಮುಖ್ಯಮಂತ್ರಿಗಳು ಸಹ ಕಾಗಿನೆಲೆ ಕನಕಪೀಠದಲ್ಲಿ ಇದನ್ನೇ ಹೇಳಿ ದ್ದಾರೆ. ಯಾವುದೇ ಜಾತಿ ಇರಲಿ ಅದು ಒಂದು ತಾಯಿಯಂತೆ. ನಾವು ಬೇರೆ ಜಾತಿಗಳನ್ನು ಗೌರವಿಸಿದರೆ ನಮ್ಮ ತಾಯಿಯನ್ನು ಗೌರವಿಸಿ ದಂತೆ. ಅತಿಯಾದ ಜಾತಿ-ಧರ್ಮ ಮಾಡಬಾರದು. ಕನಕದಾಸರು, ಬಸವಣ್ಣ, ನಾರಾಯಣಗುರು ಹೀಗೆ ಹಿರಿಯರ ಜೀವನಾದರ್ಶ ಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತೇನೆ ಎಂದರು.
ಶಿಕ್ಷಣ ನೀಡುವುದು ದೇವರ ಕೆಲಸವಿದ್ದಂತೆ, ಎಲ್ಲರಿಗೂ ಸಮಾನವಾದ ಶಿಕ್ಷಣ ನೀಡುವುದು ನಮ್ಮ ಕರ್ತವ್ಯವಾಗಿದ್ದು, ಅಂತಹ ಶಿಕ್ಷಣವನ್ನು ನೀಡುತ್ತೇವೆ ಎಂದ ಅವರು ಶಿವಮೊಗ್ಗದಲ್ಲಿ ಕುರುಬರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ತರಲು ಸಮಾಜದವರೇ ಆದ ನಗರಾ ಭಿವೃದ್ದಿ ಸಚಿವರು ಹಾಗೂ ತಾವು ಶ್ರಮಿಸುತ್ತೇವೆ. ಹಾಗೆಯೇ ಸಮಾಜದ ಮುಖಂಡರು ಸಹ ಪ್ರಯತ್ನಿಸಬೇಕೆಂದು ತಿಳಿಸಿದರು.
ಶಾಸಕರಾದ ಎಸ್‌.ಎನ್‌. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡು ಕಂಡ ಶ್ರೇಷ್ಟ ಸಂತ ಶ್ರೀಕನಕದಾಸರು. ಅವರು ಭಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಭಗವಂತನನ್ನೇ ಸಾಕ್ಷಾತ್ಕರಿಸಿದ ಮಹಾನ್‌ ಭಕ್ತರು ಎಂಬುದಕ್ಕೆ ಉಡುಪಿಯ ಕನಕನ ಕಿಂಡಿಯೇ ಸಾಕ್ಷಿ.
ಇವರು ಜಾತ್ಯಾತೀತ ಸಂತರಾ ಗಿದ್ದು ಜಾತಿ ಬದಲು ವ್ಯಕ್ತಿತ್ವದ ಬಗ್ಗೆ ಹೆಚ್ಚು ಯೋಚಿಸುತ್ತಿದ್ದರು. ಮೌಲ್ಯ ಗಳ ಮೂಲಕ ಶಕ್ತಿಯನ್ನು ಧಾರೆ ಎರೆಯುತ್ತಿದ್ದ ಇವರು ನುಡಿ ದಂತೆ ನಡೆದವರು. ಕೀರ್ತನೆಗ ಳನ್ನು ರಚಿಸಿ ತಾವೇ ಹಾಡುವ ಮೂಲಕ ಪ್ರತಿ ಮನಸ್ಸುಗಳನ್ನು ತಲುಪಿದ್ದಾರೆ ಎಂದು ಹೇಳಿದರು.
ಡಿವಿಎಸ್‌ ಪದವಿಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪ ನ್ಯಾಸಕರಾದ ಕೆ.ಭಾಸ್ಕರ್‌ ಕನಕ ದಾಸರ ಜೀವನ, ತತ್ವ, ಕೀರ್ತನೆ, ಗಾಯನದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಾಗೂ ವೇದಿಕೆಯಲ್ಲಿ ಶ್ರೀಕನಕ ದಾಸರ ಜೀವನಚರಿತ್ರೆ ಆಧರಿಸಿದ ಯಕ್ಷ ಗಾನ ಪ್ರದರ್ಶನ ನಡೆಯಿತು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಿ ಮೈಲಾರಪ್ಪ, ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್‌, ಸಮಾ ಜದ ಮುಖಂಡರಾದ ನರೇಂದ್ರ ಬಾಬು, ಎಸ್‌.ಕೆ.ಮರಿಯಪ್ಪ ಜಿಲ್ಲಾಽ ಕಾರಿ ಡಾ.ಸೆಲ್ವಮಣಿ ಆರ್‌, ಜಿ.ಪಂ. ಸಿಇಓ ಲೋಖಂಡೆ ಸ್ನೇಹಲ್‌ ಸುಧಾಕರ್‌, ಪೊಲೀಸ್‌ ಅಽೕಕ್ಷಕ ಜಿ.ಕೆ.ಮಿಥುನ್‌ ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್‌ ಹೆಚ್‌. ಸಮಾಜದ ಮುಖಂಡರು, ಉಪಸ್ಥಿತರಿದ್ದರು. ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್‌. ಪ್ರಸನ್ನ ಕುಮಾರ್‌ ವಂದಿಸಿದರು.