ಜಿಲ್ಲಾ ಸುದ್ದಿ

ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಖಚಿತ

ಶಿವಮೊಗ್ಗ: ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆದ್ದೇ ಗೆಲ್ಲುತ್ತದೆ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹೆಚ್‌.ಎಸ್‌. ಸುಂದರೇಶ್‌ ಹೇಳಿದರು.

ಅವರು  ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಬೆಂಬಲವಿದೆ. ಶಿವಮೊಗ್ಗ ಸೇರಿದಂತೆ ಕೆಲವು ಕಡೆ ಟಿಕೆಟ್‌ ಹಂಚಿಕೆಯಲ್ಲಿ ಗೊಂದಲವಿದ್ದದ್ದು ನಿಜ. ಆದರೆ ಈಗ ಯಾವ ಗೊಂದಲವೂ ಇಲ್ಲ. ಶೇ.80ರಷ್ಟು ಅಸಮಾಧಾನಗಳು ಬಗೆಹರಿದಿದೆ. ಟಿಕೆಟ್‌ ಪ್ರಕಟ ವಾದಾಗ ಆಕಾಂಕ್ಷಿಗಳ ಅಭಿಮಾನಿಗಳಿಗೆ ಒಂದಿಷ್ಟು ಬೇಸರವಾಗುವುದು ಸಹಜ ಆದರೆ ಆ ಬೇಸರ ಒಂದೆರಡು ದಿನ ಮಾತ್ರ. ಈಗ ಎಲ್ಲವೂ ಬಗೆಹರಿದಿದೆ. ಕೆಲವರು ಮಾತ್ರ ಇನ್ನೂ ಅಸಮಾಧಾನ ದಿಂದ ಇದ್ದಾರೆ. 20ನೇ ತಾರೀಖಿನ ಒಳಗೆ ಎಲ್ಲವೂ ಸರಿಹೋಗುತ್ತದೆ. ನಂತರ ಎಲ್ಲರೂಒಟ್ಟಾಗಿ ಚುನಾವಣೆ ನಡೆಸುತ್ತೇವೆ. ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವು ಸಾಸುತ್ತದೆ ಎಂದರು.

ಕಾಂಗ್ರೆಸ್‌ ಈಗಾಗಲೇ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ನಾಲ್ಕು ಗ್ಯಾರಂಟಿಗಳನ್ನು ನೀಡಿದೆ. ಜೊತೆಗೆ ಬಿಜೆಪಿಯ ಭ್ರಷ್ಟ ಆಡಳಿತ ಮತ್ತು ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದಾರೆ. ಕಾಂಗ್ರೆಸ್‌ ಅನ್ನು ಮತ್ತೆ ಬಯಸುತ್ತಿದ್ದಾರೆ. ಶಿವ ಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ. ಈಗಾಗಲೇ ಬಿಜೆಪಿಯ ಅನೇಕರು ಆ ಪಕ್ಷದ ಗೊಂದಲಗಳಿಂದ ಕಾಂಗ್ರೆಸ್ಸಿಗೆ ಸೇರಿದ್ದಾರೆ. ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ ಗೆಲ್ಲಿಸುವುದೇ ಈಗ ನಮ್ಮ ಮುಂದಿರುವ ಗುರಿ. ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ಮುಖಂಡರು ನಮ್ಮೊಂದಿಗಿದ್ದಾರೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಎಸ್‌.ಕೆ. ಮರಿಯಪ್ಪ, ಎಸ್‌.ಪಿ. ದಿನೇಶ್‌, ಎಲ್‌. ಸತ್ಯನಾರಾಯಣ, ಕಾಂಗ್ರೆಸ್‌ ಅಭ್ಯರ್ಥಿ ಹೆಚ್‌.ಸಿ. ಯೋಗೀಶ್‌, ಪ್ರಮುಖರಾದ ಆರ್‌. ಪ್ರಸನ್ನಕುಮಾರ್‌, ಇಸ್ಮಾಯಿಲ್‌ ಖಾನ್‌, ಹೆಚ್‌.ಎಂ. ಚಂದ್ರ ಶೇಖರಪ್ಪ, ಚಂದ್ರಶೇಖರ್‌, ಚಂದ್ರ ಭೂಪಾಲ್‌, ಹೆಚ್‌.ಪಿ. ಗಿರೀಶ್‌, ಶಿವಾನಂದ, ದೀಪಕ್‌ ಸಿಂಗ್‌, ನರಸಿಂಹಮೂರ್ತಿ, ಶಮೀರ್‌ಖಾನ್‌, ನಯಾಜ್‌ ಅಹ್ಮದ್‌, ವಿಜಯ್‌, ಎನ್‌.ಡಿ. ಪ್ರವೀಣ್‌, ಚಂದನ್‌ ಇದ್ದರು.