ಜಿಲ್ಲಾ ಸುದ್ದಿ

ಪಕ್ಷೇತರ ಅಭ್ಯರ್ಥಿಯಾಗಿ ಬಿ.ಎನ್‌ ನಾಗರಾಜ 2ನೇ ಬಾರಿಗೆ ನಾಮಪತ್ರ ಸಲ್ಲಿಕೆ

ಭದ್ರಾವತಿ: ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ 3ನೇ ದಿನವಾದ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್‌ ನಾಗರಾಜ (ಬಿ.ಎನ್‌ ರಾಜು) 2ನೇ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ನ ಮಿನಿವಿಧಾನಸೌಧ ತಾಲೂಕು ಕಛೇರಿಯಲ್ಲಿ ಬಿ.ಎನ್‌ ನಾಗರಾಜ ತಾಯಿ ಸರೋಜಮ್ಮ ಹಾಗು ಸಮಿತಿ ಪ್ರಧಾನ ಕಾರ್ಯ ದರ್ಶಿ ಅಕ್ರಮ್‌ ಖಾನ್‌ ಅವರೊಂ ದಿಗೆ ಚುನಾವಣಾಧಿಕಾರಿಯಾಗಿ ರುವ ಉಪವಿಭಾಗಾಧಿಕಾರಿ ರವಿ ಚಂದ್ರನಾಯಕ ಅವರಿಗೆ ನಾಮ ಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್‌ ಸುರೇಶ್‌ ಆಚಾರ್‌ ಇದ್ದರು.

ಬಿ.ಎನ್‌ ನಾಗರಾಜ ಬಳಿ 30 ಸಾವಿರ ನಗದು:

ಸುಮಾರು 30 ವರ್ಷಗಳಿಂದ ಹೋರಾಟಗಾರರಾಗಿ ಗುರುತಿಸಿ ಕೊಂಡಿರುವ 53 ವರ್ಷದ ಬಿ. ಎನ್ ನಾಗರಾಜ(ಬಿ.ಎನ್‌ ರಾಜು) ಅವರ ಬಳಿ 30 ಸಾವಿರ ನಗದು ಇದ್ದು, ಬ್ಯಾಂಕ್‌ ಖಾತೆ ಯಲ್ಲಿ 1 ಸಾವಿರ ಹಣವಿದೆ. ಯಾ ವುದೇ ಆಸ್ತಿ ಹೊಂದಿಲ್ಲ. ಎಸ್‌ಎ ಸ್‌ಎಲ್‌ಸಿ ವ್ಯಾಸಂಗ ಮಾಡಿದ್ದಾರೆ.