ಭದ್ರಾವತಿಶಿವಮೊಗ್ಗ

ಸಿಂಗನಮನೆ ಗ್ರಾಪಂ ಉಪಾಧ್ಯಕ್ಷರಾಗಿ ಅಶ್ವಿನಿ ಶಶಿಕುಮಾರ್‌

ಭದ್ರಾವತಿ: ತಾಲೂಕಿನ ಸಿಂಗನಮನೆ ಗ್ರಾಪಂ  ಉಪಾಧ್ಯಕ್ಷ ರಾಗಿ ಅಶ್ವಿನಿ ಶಶಿಕುಮಾರ್‌ ಶಂಕರ ಘಟ್ಟ ಶುಕ್ರವಾರ ನಡೆದ ಚುನಾ ವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಅಶ್ವಿನಿ ಶಶಿಕುಮಾರ್‌ 16 ಮತಗಳು ಹಾಗು ಇವರ ಪ್ರತಿಸ್ಪರ್ಽ ಕವಿತಾ ಪುಟ್ಟಸ್ವಾಮಿ 4 ಮತ ಗಳನ್ನು ಪಡೆದುಕೊಂಡರು. 21 ಸದಸ್ಯ ಬಲ ಹೊಂದಿರುವ ಪಂಚಾ ಯಿತಿಯಲ್ಲಿ ಕಾಂಗ್ರೆಸ್‌ ಬೆಂಬಲಿ ತರು ಅಽ ಕಾರದ ಚುಕ್ಕಾಣಿ ಹಿಡಿ ದಿದ್ದು, ಒಪ್ಪಂದದಂತೆ ಆಂತರಿಕ ವಾಗಿ ಅಽ ಕಾರ ಹಂಚಿಕೆ ಮಾಡಿ ಕೊಂಡಿದ್ದು, ಉಪಾಧ್ಯಕ್ಷರಾಗಿದ್ದ ಕವಿತಾ ರುದ್ರೇಶ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆ ಯಲ್ಲಿ ಚುನಾವಣೆ ನಡೆಯಿತು. ಓರ್ವ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಪಶುಸಂಗೋಪನಾ ಇಲಾಖೆಯ ಹಿರಿಯ ಪಶು ವೈದ್ಯಾಽ ಕಾರಿ ಡಾ. ಬಸವರಾಜ್‌ ಚುನಾವಣಾಽ ಕಾರಿ ಯಾಗಿ ಕರ್ತವ್ಯ ನಿರ್ವಹಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌, ಬ್ಲಾಕ್‌ ಕಾಂಗ್ರೆ ಸ್‌ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಹಿಂದುಳಿದ ವರ್ಗಗಳ ಗ್ರಾಮಾಂತರ ಅಧ್ಯಕ್ಷ ಎಂ. ರಮೇಶ್‌, ವಿಜಯ್‌ ಕುಮಾ ರ್‌, ಲೋಕೇಶ್‌, ಎಂ.ವಿ ಮುರು ಗೇಶ್‌, ವೀರೇಶ್‌, ಶ್ರೀಕಾಂತ್‌ ಗ್ರಾಮದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ನೂತನ ಉಪಾಧ್ಯಕ್ಷ ಅಶ್ವಿನಿ ಶಶಿ ಕುಮಾರ್‌ರನ್ನು ಅಭಿನಂದಿಸಿದ್ದಾರೆ.