ಜಿಲ್ಲಾ ಸುದ್ದಿತಾಜಾ ಸುದ್ದಿ

ಜೆಸಿಐ ಶಿವಮೊಗ್ಗ ಮಲ್ನಾಡ್‌ ಘಟಕದ ವತಿಯಿಂದ ಅರ್ಥಪೂರ್ಣ, ಯಶಸ್ವಿ ಬೇಸಿಗೆ ಶಿಬಿರ

ಶಿವಮೊಗ್ಗ : ಜೆಸಿಐ ಶಿವ ಮೊಗ್ಗ ಮಲ್ನಾಡ್‌ ಘಟಕದ ಜೂನಿ ಯರ್‌ ಜೇಸಿ ವಿಭಾಗದ ವತಿ ಯಿಂದ ಶಿವಮೊಗ್ಗದ ರೋಟರಿ ಬ್ಲಡ್‌ ಬ್ಯಾಂಕ್‌ ನ ಮೊದಲನೇ ಮಹಡಿಯ ಸಭಾಂಗಣದಲ್ಲಿ ಏ.3ರಿಂದ ಏ.8 ರ ವರೆಗೆ 6 ದಿನಗಳ ಕಾಲ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದ ಉದ್ಘಾಟನೆಯನ್ನು ವಿಶೇಷವಾಗಿ ಕ್ಯಾನ್ವಾಸ್‌ ಮೇಲೆ ಮಕ್ಕಳ ಹಸ್ತ ಮುದ್ರೆ ಹಾಕುವುದ ರೊಂದಿಗೆ ಉದ್ಘಾಟಿಸಲಾಯಿತು ಮತ್ತು ಅತ್ಯಂತ ವರ್ಣರಂಜಿತ ವಾಗಿ ಮೂಡಿಬಂದಿತು.

ಸಮಾರಂಭದಲ್ಲಿ ಜೆಸಿಐ ವಲಯ -24 ರ ಅಧ್ಯಕ್ಷರಾದ ಜೇಸಿ ಅನುಷ್‌ ಗೌಡ ರವರು ಜೆಸಿಐ ಶಿವಮೊಗ್ಗ ಮಲ್ನಾಡ್‌ ಘಟಕದ ವತಿಯಿಂದ ಪ್ರತೀ ವರ್ಷ ವಿನೂತನ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದ್ದು, ಹಾಗೂ ಈ ಬಾರಿಯ ಬೇಸಿಗೆ ಶಿಬಿರವು ವಿಶೇಷವಾಗಿ ಆಯೋಜಿ ಸಲಾಗಿದೆ, ಇದಕ್ಕೆ ನಮ್ಮ ವಲ ಯದ ಬೆಂಬಲ ಸದಾ ಇರುತ್ತದೆ. ಇದೇ ರೀತಿ ಇನ್ನೂ ಹೆಚ್ಚಿನ , ವಿನೂತನ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಮಕ್ಕಳಲ್ಲಿ ಉತ್ತಮ ನಾಯಕತ್ವ ಗುಣ ಬೆಳೆಸಿ,  ಭಾರತದ ಜೆಸಿಐ ಘಟಕಗಳಲ್ಲಿ ವಿಶೇಷ ಸ್ಥಾನ ದೊರಕಲಿ ಎಂದು ಆಶಿಸಿದರು.

ಉದ್ಘಾಟನಾ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಜೂನಿ ಯರ್‌ ಜೇಸಿ ವಿಭಾಗದ ವಲಯ ನಿರ್ದೇಶಕರಾದ ಜೇಸಿ ವಾಣಿ ಜಗದೀಶ್‌ ರವರು ಉಪಸ್ಥಿತರಿ ದ್ದರು.

ಶಿಬಿರದಲ್ಲಿ ಪ್ರತೀ ದಿನ ಭಗವ ದ್ಗೀತೆ ಪಠಣ, ಚಿತ್ರಕಲೆ, ಕರಕುಶಲ ತರಬೇತಿ, ಪ್ರತಿದಿನ ಕಥೆ ಹೇಳು ವುದು,  ರೊಬೋಟಿಕ್ಸ, ನೃತ್ಯ ಮತ್ತು ವಿಶೇಷವಾಗಿ ರೂಪುಗೊಳಿ ಸಿದ್ದ ಆಟಗಳು, ಸ್ಪರ್ಧೆಗಳು ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾ ಗಿದ್ದವು.

ಶಿಬಿರದಲ್ಲಿ ಭಗವದ್ಗೀತೆ ಪಠಣವನ್ನು ಶ್ರೀಮತಿ ವಿಮಲಾ ರೇವಣಕರ್‌, ಚಿತ್ರಕಲೆ ಮತ್ತು ಕರಕುಶಲ ಕಲೆಯನ್ನು ಶ್ರೀಮತಿ ನಾಗರತ್ನ ಜನ್ನು ರವರು, ಕಥೆ ಹೇಳುತ್ತಿದ್ದ ನಿವೃತ್ತ ಶಿಕ್ಷಕರಾದ ಶ್ರೀ ರಂಗನಾಥ ರವರು,  ಶಿವಮೊಗ್ಗದ ಡು ಇಟ್‌ ಮೈಂಡ್ಸ ಖ್ಯಾತಿಯ ವಿಶೇಷ ಎಲೆಕ್ಟ್ರಾನಿಕ್ಸ ಮತ್ತು ನೂತನ ಆವಿಷ್ಕಾರ ಕಾರ್ಯನಿರ್ವ ಹಿಸುವ ವಿಧಾನಗಳನ್ನು ಶ್ರೀ ನವೀನ್‌ ರವರು ಮತ್ತು ಸ್ಟೆಪ್‌ ಹೋಲ್ಡರ್ಸ್‌ ಡಾನ್‌್ಸ ಅಕಾಡೆಮಿ ಖ್ಯಾತಿಯ ಅರುಣ್‌ ರಾಜ್‌ ಶೆಟ್ಟಿ ರವರ ತಂಡ ಮಕ್ಕಳಿಗೆ ಯಶಸ್ವಿ ಯಾಗಿ ತರಬೇತಿ ನೀಡಿದರು.

ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಡಾಕ್ಟರ್‌ ಸುನಿಲ್‌ ಮತ್ತು ತಂಡದವರಿಂದ ಉಚಿತ ದಂತ ತಪಾಸಣೆ ಮತ್ತು ಬಾಯಿ ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು.

ಕೊನೆಯ ದಿನದ ಆಕರ್ಷಣೆ: ಶಿಬಿರದ ಮುಕ್ಯ ಆಕರ್ಷಣೆಯಾ ಗಿದ್ದ ಲಕ್ಕಿನಕೊಪ್ಪ ಸಮೀಪದ ಅಮುಲ್ಯಶೋಧ ವಸ್ತು ಸಂಗ್ರಹಾಲಯ ಭೇಟಿ. ಮಕ್ಕಳನ್ನು ಬೆಳಿಗ್ಗೆ ಅಮೂಲ್ಯಶೋಧ ವಸ್ತು ಸಂಗ್ರಹಾಲಯಕ್ಕೆ ಕರೆದು ಕೊಂಡು ಹೋಗಿ ಅಲ್ಲಿನ ಸಂಗ್ರಹಿಸಲಾಗಿ ರುವ ನಾಣ್ಯಗಳು, ಹಿಂದೆ ಬಳಸು ತ್ತಿದ್ದ ವಸ್ತುಗಳು, ಶಿವಮೊಗ್ಗದ ವೈಶಿಷ್ಟ್ಯತೆ ಎಲ್ಲವನ್ನೂ ಕಂಡು ಮಕ್ಕಳು ಬೆರಗಾಗಿ ಕುತೂಹಲ ದಿಂದ ವೀಕ್ಷಿಸಿದರು.

ಒಟ್ಟಾರೆ ಈ ಬೇಸಿಗೆ ಶಿಬಿರವು ಮಕ್ಕಳ ಕಲಿಕೆ ಮತ್ತು ಜ್ಞಾನ ಅಭಿ ವೃದ್ದಿ, ಮೊಬೈಲ್‌ ಪ್ರಪಂಚದಿಂದ ಆಚೆ ಉತ್ತಮ ಚಟುವಟಿಕೆಯುಕ್ತ ಜೀವನ ಇದೆ ಎಂದು ಸಾರಿ ಸಾರಿ ಹೇಳಿತು.

ಸಮಾರೋಪ ಸಮಾರಂಭ ದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳಾದ ಶ್ರೀಮತಿ ಕಿರಣ್‌ ದೇಸಾಯಿ ರವರು ಮಕ್ಕಳಿಗೆ ವಿಭಿನ್ನವಾದ ಕಥೆಗಳ ಮುಖಾಂ ತರ ಯಾವುದೇ ಪರಿಸ್ಥಿತಿ ಬಂದರೂ ಪ್ರಾಮಾಣಿಕವಾಗಿ, ಎದೆಗುಂದದೆ ಎದುರಿಸುವ ಛಲ  ರೂಢಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ಜೇಸಿ ಗೌರೀಶ್‌ ಭಾರ್ಗವ ರವರು ಮಕ್ಕಳಿಗೆ ನೀತಿ ಕಥೆಯ ಮೂಲಕ ಹೊಸ ಸಂಪ್ರ ದಾಯಕ್ಕೆ ಬದ್ದವಾಗಿ ನಾವು ವಿಶೇಷ ಆಸಕ್ತಿ ರೂಢಿಸಿಕೊಂಡು ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ವಿಶೇಷ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಪೋಷಕರಾದ ಶ್ರೀ ಸುದೀಪ್‌ ಮಾತನಾಡಿ ಒಟ್ಟಾರೆ ಕಾರ್ಯ ಕ್ರಮವು ಮೊದಲ ದಿನದಿಂದ ಕೊನೆಯ ದಿನದವರೆಗೂ ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಶಿಬಿರ ನಡೆಸಿದ ತಂಡಕ್ಕೆ ಕೃತಜ್ಞತೆ ಸಲ್ಲಸುತ್ತೇನೆ ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ದಿನದ ಶಿಬಿರ ಆಯೋಜಿಸಲು ಕೋರಿ ತಾವು ಸಹ ಸಹಕಾರ ನೀಡುವುದಾಗಿ ತಿಳಿಸಿ ದರು.ಸಮಾರೋಪ ಸಮಾರಂಭ ದಲ್ಲಿ ಮಕ್ಕಳೇ ಕಾರ್ಯಕ್ರಮವನ್ನು ನಿರೂಪಿಸಿ, ನಡೆಸಿಕೊಟ್ಟಿದ್ದು ವಿಶೇ ಷವಾಗಿತ್ತು.ಶಿಬಿರದಲ್ಲಿ  ಉತ್ತಮ ವಾಗಿ ಭಾಗವಹಿಸಿದ ಅರ್ಜುನ್‌ ಭಾರ ದ್ವಾಜ್‌, ಪ್ರಣತಿ, ದೇವಾಂ ಶ್‌ ಗೌಡ ಮತ್ತು ಸುರಭಿ ರವರಿಗೆ ಪ್ರಶಸ್ತಿ ನೀಡಲಾಯಿತು ಮತ್ತು ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ಮತ್ತು ಭಗವದ್ಗೀತೆ ಪುಸ್ತಕವನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜೆಸಿಐ ಶಿವಮೊಗ್ಗ ಮಲ್ನಾಡ್‌ ಘಟಕದ ಜೂನಿಯರ್‌ ಜೇಸಿ ವಿಭಾಗದ ಅಧ್ಯಕ್ಷರಾದ ಜೇ ಜೇ ಸಿ ವೈಷ್ಣವಿ ಕೆ ಎನ್‌ ರವರು ವಹಿಸಿದ್ದರು ಹಾಗೂ ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸುತ್ತಾ ಶಿಬಿರದ ಆರಂಭದಿಂದ ಕೊನೆಯ ವರೆಗೂ ತನ್ನ ಬೆಂಬಲಕ್ಕೆ ನಿಂತ ತನ್ನ ತಂದೆ ಜೇಸಿ ನರೇಂದ್ರ ಹಾಗೂ ತಾಯಿ ಜೇಸಿ ದೀಪಾ ನರೇಂದ್ರ ರವರಿಗೆ  ಕೃತಜ್ಞತೆ ತಿಳಿಸಿದರು.

ವೇದಿಕೆಯಲ್ಲಿ ಘಟಕದ ಅಧ್ಯಕ್ಷರಾದ ಜೇಸಿ ಕಿರಣ್‌ ಎನ್‌ ಪಿ, ಮಹಿಳಾ ವಿಭಾಗದ ಅಧ್ಯಕ್ಷ ರಾದ ಜೇಸಿ ಶೃತಿ ಅಶೋಕ್‌ ಹಾಗೂ ಕಾರ್ಯಕ್ರಮ ನಿರ್ದೇಶಕ ರಾದ ಜೇಸಿ ಉತ್ಕಲಾ ಪ್ರದೀಪ್‌ ಮತ್ತಿತರರು ಉಪಸ್ಥಿತರಿದ್ದರು.