ಜಿಲ್ಲಾ ಸುದ್ದಿ

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ  ಅ+ ಶ್ರೇಣಿಯ ನ್ಯಾಕ್‌ ಮಾನ್ಯತೆ

ಶಿಕಾರಿಪುರ : ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಇದೇ ಏ.12 ಮತ್ತು 13 ರಂದು ಎರಡನೇ ಅವಧಿಗೆ ನ್ಯಾಕ್‌ ತಂಡವು ಭೇಟಿ ನೀಡಿ ಮಹಾವಿದ್ಯಾಲ ಯದ ಎಲ್ಲಾ ಚಟುವಟಿಕೆಗಳನ್ನು ಪರಿಶೀ ಲಿಸಿ ಗುಣಾತ್ಮಕತೆಯನ್ನು ಆಧರಿಸಿ ಅ+ ಶ್ರೇಣಿಯನ್ನು ನೀ ಡಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿರುವ ಕಾಲೇಜಿನ ಪ್ರಾಚಾರ್ಯ ಡಾ.ಶಿವಕುಮಾರ್‌ ಜಿ.ಎಸ್‌ ರವರು, ನ್ಯಾಕ್‌ ಮಾನ್ಯತೆಯು ಕುಮದ್ವತಿ ಶಿಕ್ಷಣ ಮಹಾವಿ ದ್ಯಾಲಯದ ಗುಣಮಟ್ಟವನ್ನು ಸೂಚಿಸುತ್ತದೆ.ಕಳೆದ ಎರಡೂವರೆ ದಶಕ ಗಳಿಂದ ಗುಣಮಟ್ಟದ ಶಿಕ್ಷಕರ ತರಬೇತಿ ನೀಡುತ್ತಾ ಬಂದು ನ್ಯಾಕ್‌ ಈ ಶ್ರೇಣಿಯ ಮೂಲಕ ಕುಮದ್ವತಿ ಶಿಕ್ಷಣ ಮಹಾವಿದ್ಯಾಲ ಯ ಮಲೆ ನಾಡಿನ ಶಿಕ್ಷಕರ ಶಿಕ್ಷಣ ಕಾಲೇಜುಗಳಲ್ಲಿ  ಮತ್ತಷ್ಟು ಹೆಸರು ವಾಸಿಯಾಗಿದೆ.ಈ ಮಟ್ಟದ ಸಾಧ ನೆಗೆ ಸಂಪೂರ್ಣ ಸಹಕಾರ ನೀಡಿದ ಆಡಳಿತ ಮಂಡಳಿಯ ಸರ್ವ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರ ಸತತ ಶ್ರದ್ಧಾಪೂರ್ವಕ ಕೆಲಸವೂ ಕೂಡ ಈ ಪ್ರಮಾಣದ ಶ್ರೇಣಿ ಯನ್ನು ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಕಾಲೇಜಿನ ಐಕ್ಯೂಎಸಿ ಸಂ ಯೋಜಕ ಡಾ.ಕಿರಣ್‌ ಕುಮಾರ್‌ ಕೆ ಎಸ್‌,ಐದಾರು ವರ್ಷಗಳ ಸತತ ಪರಿಶ್ರಮ ಈ ಮಟ್ಟದ ಲಿತಾಂಶ ಬರಲು ಸಾಧ್ಯ ವಾಗಿದೆ.ನ್ಯಾಕ್‌ ಮಾನದಂಡಗಳಿಗೆ ಅನುಸರಿಸಿ ಕಾಲೇಜಿನಲ್ಲಿ ಎಲ್ಲಾ ಚಟುವಟಿಕೆ ಗಳನ್ನು ಹಮ್ಮಿಕೊಳ್ಳುತ್ತಿದ್ದೆವು ಹಾಗೂ ಸಾಮಾಜಿಕವಾಗಿ ಹಲವಾ ರು ಕಾರ್ಯಕ್ರಮಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೆವು. ಹಾಗಾಗಿ ನಿರೀಕ್ಷೆಯಂತೆ ಲಿತಾಂಶ ಬಂದಿ ದೆ.ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಚೊಚ್ಚಿಲ ಸಂಸ್ಥೆ ಯಾದ ಕುಮದ್ವತಿ ಶಿಕ್ಷಣ ಮಹಾ ವಿದ್ಯಾ ಲಯ ಎಂದಿಗೂ ಗುಣಾತ್ಮ ಕತೆಯನ್ನು ಕಾಯ್ದುಕೊಂಡು ಬಂ ದಿದೆ,ಅದಕ್ಕೆ ಕಳಸಪ್ರಾಯವೆಂ ಬಂತೆ ನ್ಯಾಕ್‌ ನೀಡಿರುವ ಈ ಶ್ರೇಣಿ ಹೆಚ್ಚು ಪುಷ್ಟಿ ನೀಡಿದೆ.ಹಾಗೆಯೇ ಈ ಶ್ರೇಣಿಯ ಲಿತಾಂಶ ಪಡೆ ಯಲು ಸಹಕರಿಸಿದ ಆಡಳಿತ ಮಂಡಳಿಗೆ, ಬೋಧಕ- ಬೋಧ ಕೇತರ ಸಿಬ್ಬಂದಿಯವರಿಗೆ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರಿಗೆ, ಪೋಷಕರಿಗೆ ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿ ಗಳಿಗೆ ಧನ್ಯ ವಾದಗಳನ್ನು ಸಲ್ಲಿಸು ತ್ತೇನೆ ಎಂದರು.

ಅದೇರೀತಿ  ಅ+ ಶ್ರೇಣಿಯ ಮಾನ್ಯತೆ ಪಡೆಯಲು ಕಾರಣರಾದ ಎಲ್ಲರಿಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.