ಕ್ರೈಂಜಿಲ್ಲಾ ಸುದ್ದಿ

ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವಪತ್ತೆ

ಶಿವಮೊಗ್ಗ : ನಗರದ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಗ್ರಾಮಾಂ ತರ ಪೊಲೀಸ್‌ ಠಾಣ ವ್ಯಾಪ್ತಿಯಲ್ಲಿ ತೋಟದ ಬೇಲಿಯಲ್ಲಿದ್ದ ನೇರಳೆ ಮರಕ್ಕೆ ವ್ಯಕ್ತಿಯೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ.

ನೇಣಿಗೆ ಶರಣಾದ ವ್ಯಕ್ತಿಯನ್ನು ಮಲ್ಲಿಕಾ (42) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಪುರಲೆ- ಹಸೂಡಿ ರಸ್ತೆಯಲ್ಲಿ ಬರುವ ವೆಂಕಟೇಶ್‌ ನಗರದ  ವೀರಯ್ಯ ಎಂಬುವರ ತೋಟದಲ್ಲಿ ನೇಣಿಗೆ ಶರಣಾಗಿದ್ದಾನೆ.

ಮಲ್ಲಿಕಾ 15 ವರ್ಷದ ಹಿಂದೆ ಪುರಲೆ ನಿವಾಸಿ ನಾಗರತ್ನಮ್ಮ ಎಂಬುವರನ್ನ ಮದುವೆಯಾಗಿ ದ್ದನು. ಕಳೆದ 8 ವರ್ಷದಿಂದ  ಪತ್ನಿಯೊಂದಿಗೆ ಸಂಸಾರ ನಡೆಸದೆ ಮಲ್ಲಿಕಾ  ಚನ್ನಗಿರಿ ಬಿಲ್ಲಳ್ಳಿ ಎಂಬ ಗ್ರಾಮದಲ್ಲಿ ಇದ್ದನು.  ಪತ್ನಿ ಮನೆಗೆ ಎರಡು ತಿಂಗಳಿಗೊಮ್ಮೆ ಬರುತ್ತಿ ದ್ದನು. ಬಂದಾಗಲೆಲ್ಲ ಮದ್ಯ ನಶೆಯಲ್ಲಿ ಜಗಳ ವಾಡುತ್ತಿದ್ದನು ಎಂದು ಪತ್ನಿ ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಪತ್ನಿ ಮನೆಗೆ ಬಂದ  ಮಲ್ಲಿಕಾ ಭಾನುವಾರ ಸಂಜೆ ನೇರಲೆ ಮರಕ್ಕೆ ನೇಣು ಬಿಗಿದಸ್ಥಿತಿಯಲ್ಲಿ ಪತ್ತೆಯಾ ಗಿದ್ದನು. ಆದರೆ ಸ್ಥಳೀಯರು ಇದನ್ನ ಅನುಮಾನದಿಂದ ನೋಡುತ್ತಿದ್ದಾರೆ. ಸಾರ್ವೇ ಹಗ್ಗಕ್ಕೆ ನೇಣು ಬಿಗಿದುಕೊಂಡಿರುವುದು ಅನುಮಾನವಿದೆ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.

ಇದನ್ನ ತನಿಖೆ ನಡೆಸಬೇಕಿರುವ ಸ್ಥಳೀಯರು ಮದ್ಯ ಸೇವನೆಗಾಗಿ ಅನೇಕ ಜನ ಇಲ್ಲಿಗೆ ಬರುತ್ತಾರೆ. ಅವರಿಗೆ ಬುದ್ದಿ ಹೇಳಲು ಕಷ್ಟವಾಗಿದೆ. ಅಲ್ಲಿ ಅನೈತಿಕ ಚಟುವಟಿಕೆ ಅಕವಾಗುತ್ತಿದೆ ಎಂಬ ಮಾಹಿತಿಯನ್ನ ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರ ಬೀಟ್‌ ಹೆಚ್ಚುಸಲು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮಾಂತರ ಪೊಲೀಸರು ಸ್ಥಳಕ್ಕೆಧಾವಿಸಿದ್ದಾರೆ.