ಜಿಲ್ಲಾ ಸುದ್ದಿ

ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪನಿಗೆ ಮತ ನೀಡಬೇಡಿ ಎಂದು ಮಲೆನಾಡು ಕುರುಬರ ಯುವ  ವೇದಿಕೆ ಕರೆ

ಶಿವಮೊಗ್ಗ: ಜನರಲ್ಲಿ ದ್ವೇಷಭಾವನೆ ಬಿತ್ತುವಂತಹ ಮನೋಪ್ರವೃತ್ತಿಯ ಬಿಜೆಪಿ ಅಭ್ಯರ್ಥಿ ಎಸ್‌.ಎನ್‌. ಚನ್ನಬಸಪ್ಪ ಅವರಿಗೆ ಕುರುಬ ಸಮಾಜದ ಬಂಧುಗಳು ಮತ ಚಲಾಯಿಸಬಾರದು ಎಂದು ಮಲೆನಾಡು ಯುವ ಕುರುಬರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಜಿ. ಮಧುಸೂದನ್‌ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ಎಸ್‌.ಎನ್‌.ಚನ್ನಬಸಪ್ಪ ಅವರು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಅಂದಿನ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನವರ ತಲೆ ಕಡಿಯಿರಿ ಎಂದು ಉದ್ರೇಕಕಾರಿ ಭಾ?ಣ ಮಾಡಿದ್ದಲ್ಲದೆ, ಅದನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಇಂತಹ ವ್ಯಕ್ತಿ ಶಾಸಕನಾ ಗುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಜನ ಶಾಂತಿಯ ವಾತಾವರಣ ಬಯಸುತ್ತಿದ್ದಾರೆ. ಆದರೆ, ಸಂಘ ಪರಿವಾರದಲ್ಲಿ ಗುರುತಿಸಿಕೊಳ್ಳುವುದಕ್ಕಾಗಿ ಎಲ್ಲ ಸಂದರ್ಭಗಳನ್ನೂ ಕೋಮುದ್ವೇಷಕ್ಕೆ ತಿರುಗಿಸುವ ಮೂಲಕ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವಂತಹ ಮನೋಪ್ರವೃತ್ತಿಯ ವ್ಯಕ್ತಿಗಳು ಶಾಸಕರಾಗುವುದಕ್ಕೆ ಅನರ್ಹರು ಎಂದಿದ್ದಾರೆ.

ಹಿಂದುತ್ವದ ಮೇಲೆಯೇ ರಾಜಕಾರಣ ಮಾಡುತ್ತಿರುವ ಬಿಜೆಪಿ ಇಂತಹ ವ್ಯಕ್ತಿಗೆ ಟಿಕೆಟ್‌ ನೀಡಿರುವುದು ಶಿವಮೊಗ್ಗದ ಜನತೆಯ ದುರಂತವಲ್ಲದೇ ಮತ್ತೇನು ಎಂದು ಪ್ರಶ್ನಿಸಿರುವ ಅವರು, ಕುರುಬ ಸಮಾಜದ ಬಂಧುಗಳು ಬಿಜೆಪಿ ಅಭ್ಯರ್ಥಿ ಎಸ್‌.ಎನ್‌. ಚನ್ನಬಸಪ್ಪ ಅವರಿಗೆ ಮತ ಹಾಕಬಾರದು ಎಂದು ಮನವಿ ಮಾಡಿದ್ದಾರೆ.