ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಏ.17: ಭದ್ರಾವತಿ ಜೆಡಿಯು ಅಭ್ಯರ್ಥಿ ಶಶಿಕುಮಾರ್‌ ಗೌಡ ನಾಮಪತ್ರ

ಶಿವಮೊಗ್ಗ : ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ತಾನು ಜೆಡಿಯು ಉಮೇದುವಾರನಾಗಿ ಚುನಾವಣಾ ಕಣಕ್ಕಿಳಿಯಲಿದ್ದು, ಸೋಮವಾರ ಏ. 17ರಂದು ನಾಮಪತ್ರ ಸಲ್ಲಿಸುವುದಾಗಿ  ಶಶಿಕುಮಾರ ಗೌಡ ಹೇಳಿದರು.

ಪ್ರೆಸ್‌ ಟ್ರಸ್‌್ಟನಲ್ಲಿ  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಎರಡು ಬಾರಿ ತಾನು ಸ್ಪರ್ಧೆ ಮಾಡಿದ್ದೇನೆ. ಜನಪರ ನಿಲುವು ಮತ್ತು ಸಮಸ್ಯೆ ಗಳ ಬಗ್ಗೆ ಸದಾ ಕಾಳಜಿ ವಹಿಸಿ ಅವುಗಳ ಪರಿಹಾರಕ್ಕಾಗಿ ಹೋರಾಟ ಮಾಡುವ ಮನೋ ಭಾವ ತನ್ನದಾಗಿದೆ. ಭದ್ರಾವತಿಯ ಸಮಸ್ಯೆಗಳನ್ನು ಇತ್ಯರ್ಥಪಡಿಸು ವಲ್ಲಿ ಸಾಕಷ್ಟು ಯತ್ನ ಮಾಡಿದ್ದೇನೆ. ಜನರ ಬೆಂಬಲ ಇದಕ್ಕೆ ಸಿಕ್ಕಿದೆ.  ಇನ್ನೂ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲು ಮತ್ತು ಜನಪರ ಕೆಲಸ ಮಾಡಲು ತನ್ನನ್ನು ಮತದಾರರು ಬೆಂಬಲಿಸಬೇಕೆಂದು  ಮನವಿ ಮಾಡಿದರು.

 ಪ್ರತಿ ಸಮಸ್ಯೆಯನ್ನು ಜಿಲ್ಲಾಕಾರಿ ಕಚೇರಿಗೆ ತಂದೇ ಪರಿಹರಿ ಸುವ ಪರಿಸ್ಥಿತಿ ಭದ್ರಾವತಿಯಲಿದೆ. ಸಮಸ್ಯೆಯನ್ನು ಅಲ್ಲಿಯೇ ಪರಿಹರಿಸುವ ಕೆಲಸವಾಗಬೇಕು. ಜನರ ಶ್ರಮ, ಪ್ರಯಾಣ ಮತ್ತು ವೇಳೆ ಇವುಗಳನ್ನು ಗಮನದಲ್ಲಿಟ್ಟು ಅಲಿಯೇ ಪರಿಹರಿಸಲು ತಾನು ಯತ್ನಿಸುವುದಾಗ ಹೇಳಿದ ಅವರು, ರಾಜ್ಯದಲ್ಲಿ 9 ಕ್ಷೇತ್ರಗಳಲ್ಲಿ ಜೆಡಿಯು ತನ್ನ ಉಮೇದುವಾರ ರನ್ನು ಘೋಷಿಸಿದೆ. ಅದರಲ್ಲಿ ತನ್ನ ಹೆಸರು ಸಹ ಸೇರಿದೆ. ಇನ್ನೂ ಹಲವೆಡೆ ಉಮೇದುರವಾರರ ಆಯ್ಕೆ ನಡೆೆಯುತ್ತಿದೆ. ಶಿವಮೊಗ್ಗ, ಶಿಕಾರಿಪುರ ಮತ್ತು ತೀರ್ಥಹಳ್ಳಿಯ ಲ್ಲಿಯೂ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ  ಎಂದರು.

ಸೋಮವಾರ ತಾನು ನಾಮ ಪತ್ರ ಸಲ್ಲಿಸಲಿದ್ದು, ಹೆಚ್ಚಿನ ಸಂಖ್ಯೆ ಯಲ್ಲಿ ಮತದಾರರು ಆಗಮಿಸಿ ಆಶೀರ್ವದಿಸಬೇಕೆಂದು ಕೋರಿ ದರು.ಪತ್ರಿಕಾಗೋಷ್ಠಿಯಲ್ಲಿ ದೇವರಾಜ ಶಿಂಧೆ ಹಾಜರಿದ್ದರು.