ಜಿಲ್ಲಾ ಸುದ್ದಿ

ಮತದಾರರ ಜಾಗೃತಿ ಕಾರ್ಯಕ್ರಮ

ಶಿವಮೊಗ್ಗ: ಈ ಬಾರಿ ಅತಿ ಹೆಚ್ಚು ಮತದಾನ ನಡೆಯ ಬೇಕು ಈ ಹಿನ್ನೆಲೆಯಲ್ಲಿ ಮತ ದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊ ಳ್ಳಲಾಗಿದೆ ಎಂದು ಸ್ವೀಪ್‌ ಸಮಿ ತಿಯ ಅನುಪಮ ತಿಳಿಸಿದರು.

ಅವರು  ರಾಮಣ್ಣ ಶೆಟ್ಟಿ ಪಾರ್ಕ್‌ನಲ್ಲಿ ಮತದಾರರ ಜಾಗೃತಿ ಗಾಗಿ ಆಯೋಜಿಸಿದ್ದ ಸೈಕಲ್‌ ಜಾಥಾ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿ, ಈ ಬಾರಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಅತಿ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮತದಾನ ಹೆಚ್ಚಾಗುವ ನಿರೀಕ್ಷೆ ಕೂಡ ಇದೆ ಎಂದರು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಸ್ವೀಪ್‌ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಡೆದ ಈ ಸೈಕಲ್‌ ಜಾಥಾ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಆರಂಭವಾಗಿ, ಕೋಟೆ ರಸ್ತೆ, ಬೆಕ್ಕಿನ ಕಲ್ಮಠ, ಶಿವಪ್ಪ ನಾಯಕ ಸರ್ಕಲ್‌, ಗೋಪಿವೃತ್ತದ ಮೂಲಕ ಸಾಗಿ ಅಂಬೇಡ್ಕರ್‌ ಭವ ನ ತಲುಪಿತು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಪ್ರಮುಖರಾದ ಗೀತಾ, ರೇಣುಕ, ಲೋಕೇಶ್‌, ಚಿರಂಜೀವಿ ಬಾಬು, ವಿಜಯಕುಮಾರ್‌, ಶೇಖರ್‌ ಗೌಳೇರ್‌, ಸೈಕಲ್‌ ಕ್ಲಬ್‌ ಅಧ್ಯಕ್ಷರು, ಕಾರ್ಯದರ್ಶಿಗಳು ಸದಸ್ಯರು  ಹಲವರಿದ್ದರು.