ಎನ್.ಇ.ಎಸ್ ನೌಕರರಿಗಾಗಿ ಅಮೃತ ಕ್ರೀಡೋತ್ಸವ ಕ್ರಿಕೆಟ್ : ನ್ಯಾಷನಲ್ ಕೋಣಂದೂರು ಕಾಲೇಜಿನ ತಂಡ ಗೆಲುವು
ಶಿವಮೊಗ್ಗ : ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದ ಪ್ರಯುಕ್ತ ನೌಕರರಿಗಾಗಿ ಜೆಎನ್ಎನ್ ಎಂಜಿ ನಿಯರಿಂಗ್ ಕಾಲೇಜಿನ ಕ್ರೀಡಾಂ ಗಣದಲ್ಲಿ ಭಾನುವಾರ ಏರ್ಪಡಿ ಸಿದ್ದ ಅಮೃತ ಕ್ರೀಡೋತ್ಸವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೋಣಂದೂ ರಿನ ನ್ಯಾಷನಲ್ ಕಾಲೇಜಿನ ತಂಡ ಗೆಲುವು ಸಾಸಿದ್ದು, ಎಸ್.ಆರ್. ಎನ್.ಎಂ ಕಾಲೇಜಿನ ತಂಡ ರನ್ನರ್ ಅಪ್ ಗಳಾಗಿ ಸಂಭ್ರಮಿ ಸಿದರು.
ಪುರುಷ ವಾಲಿಬಾಲ್ ಸ್ಪರ್ಧೆ ಯಲ್ಲಿ ಜೆ.ಎನ್.ಎನ್.ಸಿ.ಇ ಟ್ರಾನ್್ಸಪೋರ್ಟ್ ವಿಭಾಗ (ಪ್ರಥಮ) ಹಾಗೂ ಎನ್ಇಎಸ್ ಅಡ್ವಾನ್್ಸ್ಡ ಸ್ಟಡೀಸ್ ಕಾಲೇಜು (ದ್ವಿತೀಯ), ಶಟಲ್ ಬ್ಯಾಡ್ಮಿಂ ಟನ್ ಸ್ಪರ್ಧೆಯಲ್ಲಿ ನ್ಯಾಷನಲ್ ಾರ್ಮಸಿ ಕಾಲೇಜು (ಪ್ರಥಮ) ಹಾಗೂ ಜೆ.ಎನ್.ಎನ್.ಸಿ.ಇ ತಂಡ (ದ್ವಿತೀಯ), ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಹುಂಚಾದ ರಾಷ್ಟ್ರೀ ಯ ಪ್ರೌಢಶಾಲೆ (ಪ್ರಥಮ), ಜೆ.ಎನ್.ಎನ್.ಸಿ.ಇ ಟ್ರಾನ್್ಸ ಪೋರ್ಟ್ ವಿಭಾಗದ ತಂಡ (ದ್ವಿತೀಯ) ಸ್ಥಾನ ಪಡೆದಿದೆ.
ಮಹಿಳಾ ಥ್ರೋಬಾಲ್ ಸ್ಪರ್ಧೆಯಲ್ಲಿ ಜೆ.ಎನ್.ಎನ್.ಸಿ.ಇ ಮಹಿಳಾ ತಂಡ (ಪ್ರಥಮ), ನ್ಯಾಷನಲ್ ಪಬ್ಲಿಕ್ ಶಾಲೆ ಮಹಿಳಾ ತಂಡ (ದ್ವಿತೀಯ), ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಬಿಆರ್ ಪ್ರಾಜೆಕ್್ಟ ನ್ಯಾಷನಲ್ ಹೈಸ್ಕೂಲ್ (ಪ್ರಥಮ), ಜೆ.ಎನ್.ಸಿ.ಇ ತಂಡ (ದ್ವಿತೀಯ), ಶಟಲ್ ಬ್ಯಾಡ್ಮಿಂ ಟನ್ ಸ್ಪರ್ಧೆಯಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆ (ಪ್ರಥಮ), ಕಸ್ತೂ ರಬಾ ಪಿಯು ಕಾಲೇಜು (ದ್ವಿತೀ ಯ), ಟೆನಿಕಾಯಿಟ್ ಸ್ಪರ್ಧೆಯಲ್ಲಿ ಕಸ್ತೂರಬಾ ಹೈಸ್ಕೂಲ್ (ಪ್ರಥಮ), ಹೆಚ್.ಎಸ್.ರುದ್ರಪ್ಪ ಪಿಯು ಕಾಲೇಜು (ದ್ವಿತೀಯ) ಸ್ಥಾನ ಪಡೆದಿದೆ.
ಇದರೊಂದಿಗೆ ಅಥ್ಲೆಟಿಕ್್ಸ ಸ್ಪರ್ಧೆಗಳಾದ ನೂರು ಮತ್ತು ಇನ್ನೂರು ಮೀಟರ್ ಓಟದ ಸ್ಪರ್ಧೆ, ಉದ್ದ ಜಿಗಿತ, ಗುಂಡು ಎಸೆತ ಸ್ಪರ್ಧೆಗಳು ನಡೆಯಿತು. ಎಲ್ಲಾ ವಯೋಮಾನದವರಿಗೆ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕ್ರೀಡೋತ್ಸವಕ್ಕೆ ಚಾಲನೆ ನೀಡಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಹಿರಿಯರ ಆದರ್ಶದ ಹಾದಿಯಲ್ಲಿ ನಾವೂ ನಡೆಯಬೇಕಿದೆ. ಕ್ರೀಡೆಗಳಲ್ಲಿ ಭಾಗವಹಿಸುವಿಕೆಗೆ ವಯಸ್ಸಿನ ಮಿತಿಯಿಲ್ಲ. ಕ್ರೀಡಾತ್ಮಕ ಮನೊ ೕಭಾವ ನಿಮ್ಮದಾಗಲಿ ಎಂದು ಆಶಿಸಿದರು.
ಎನ್ಇಎಸ್ ಕಾರ್ಯದರ್ಶಿ ಗಳಾದ ಎಸ್.ಎನ್.ನಾಗರಾಜ ಸ್ವಾಗತಿಸಿದರು, ಸಹ ಕಾರ್ಯ ದರ್ಶಿಗಳಾದ ಡಾ.ಪಿ.ನಾರಾ ಯಣ್ ಪ್ರಮಾಣ ವಚನ ಬೋಸಿದರು. ಉಪಾಧ್ಯಕ್ಷರಾದ ಸಿ. ಆರ್.ನಾಗರಾಜ, ಖಜಾಂಚಿಗ ಳಾದ ಡಿ.ಜಿ.ರಮೇಶ್, ನಿರ್ದೇಶ ಕರಾದ ಟಿ.ಆರ್.ಅಶ್ವಥನಾರಾ ಯಣ ಶೆಟ್ಟಿ, ಅನಂತದತ್ತಾ, ಎನ್. ಟಿ.ನಾರಾಯಣರಾವ್, ಹೆಚ್. ಸಿ.ಶಿವಕುಮಾರ್, ಮಧುರಾವ್, ಸೀತಾಲಕ್ಷ್ಮೀ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮನಸೂರಗೊಂಡ ಪಥ ಸಂಚಲನ
ಸಂಸ್ಥೆಯ 37 ಶಾಲಾ ಕಾಲೇಜುಗಳಿಂದ ಭಾಗವಹಿಸಿದ್ದ ನೌಕರರ ತಂಡಗಳು, ವಿದ್ಯಾ ಸಂಸ್ಥೆಯ ಧ್ವಜದೊಂದಿಗೆ ಕ್ರೀಡಾಂ ಗಣದಲ್ಲಿ ಪಥ ಸಂಚಲನ ನಡೆಸಿ ದ್ದು ನೋಡುಗರ ಮನಸೂರಗೊ ಳಿಸಿತ್ತು. ಇದೇ ವೇಳೆ ತೆರೆದ ಜೀಪ್ ಮೂಲಕ ಅತಿಥಿಗಳು ಭಾಗವಹಿ ಸಿದ್ದ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.