ಜಿಲ್ಲಾ ಸುದ್ದಿ

ಅಮೂಲ್‌ ಜೊತೆ ನಂದಿನಿಯನ್ನ ವಿಲೀನಗೊಳಿಸದಂತೆ ರೈತ ಸಂಘ ಡಿಸಿಗೆ ಮನವಿ

ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ನಂದಿನಿ ಸಂಸ್ಥೆಯನ್ನು ಗುಜರಾತಂ ಮೂಲದ ಅಮುಲ್‌ ಸಂಸ್ಥೆಯೊಂ ದಿಗೆ ವಿಲೀನ ಮಾಡಬಾರದು ಎಂದು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಪದಾಕಾರಿಗಳು ಜಿಲ್ಲಾಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕದ ಹೆಮ್ಮೆಯ ಸಂಸ್ಥೆ ನಂದಿನಿ. ಇದು ಸದೃಢವಾಗಿದೆ. ಪ್ರತಿ ವರ್ಷ ಸಾವಿರಾರು ಕೋಟಿ ವ್ಯವಹಾರ ನಡೆಸುತ್ತಿದೆ. ಒಂದು ಕೋಟಿಗೂ ಹೆಚ್ಚು ಗ್ರಾಹಕರು ಇದರ ಪ್ರಯೋಜನ ಪಡೆಯುತ್ತಿ ದ್ದಾರೆ ಲಾಭದಲ್ಲಿಯೂ ಇದೆ. ಹೀಗಿರುವಾಗ ನಂದಿನಿ ಸಂಸ್ಥೆ ಯನ್ನು ಅಮುಲ್‌ ಸಂಸ್ಥೆ ಜೊತೆ ವಿಲೀನಗೊಳಿಸುವುದು ಸರಿಯಲ್ಲ. ಮುಂದೊಂದು ದಿನ ಅಮುಲ್‌ ಕರ್ನಾಟಕದಲ್ಲಿ ತನ್ನ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡುವುದರಿಂದ ನಂದಿನಿ ಸಂಸ್ಥೆ ನಷ್ಟದಲ್ಲಿದೆ ಎಂಬ ಕಾರಣ ಕೊಟ್ಟು ಮುಚ್ಚುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಮನವಿದಾರರು ಆರೋಪಿ ಸಿದರು.

ರಾಜ್ಯದ ರೈತರು ತಮ್ಮ ವ್ಯವಸಾಯೋತ್ಪನ್ನಗಳ ಬೆಲೆ ಕುಸಿತ ಗೊಂಡಾಗ ಸಂಕಷ್ಟದಲ್ಲಿದ್ದರು. ಅತ್ಮಹತ್ಯೆಯ ದಾರಿಯನ್ನೂ ತುಳಿದಿ ದ್ದರು. ಆಗ ರೈತರು ಹಾಲು ಉತಾದನೆ ಮೂಲಕ ಬದುಕ್ನು ಸಾಗಿಸಿಕೊಳ್ಳು ತ್ತಿದ್ದರು. ಕೆಎಂಎ್‌‍ ರೈತರಿಂದ ಕಡಿಮೆ ಬೆಲೆಗೆ ಹಾಲು ಖರೀದಿಸಿ ಕಡಿಮೆ ಬೆಲೆಗೆ ಗ್ರಾಹಕ ರಿಗೆ ನೀಡುತ್ತಿದ್ದರು. ಈಗ ಅಮುಲ್‌ ಜೊತೆಯಾದರೆ ಗ್ರಾಹ ಕರಿಗೆ ಹೆಚ್ಚಿನ ಹೊರೆಯಾಗುತ್ತದೆ ಎಂದು ದೂರಿದರು.

ರಾಜ್ಯದಲ್ಲಿ ಬ್ಯಾಂಕುಗಳ ವಿಲೀನ ವಾಯಿತು, ಎಂಪಿಎಂ ವಿಐಎಸ್‌ಎಲ್‌ ಮುಚ್ಚಲಾಯಿತು. ಈಗ ನಂದಿನಿ ಸಂಸ್ಥೆಯ ಸರದಿ. ಯಾವುದೇ ಕಾರಣಕ್ಕೂ ಅಮುಲ್‌ನೊಂದಿಗೆ ಇದನ್ನು ವಿಲೀಗೊಳಿಸಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್‌.ಆರ್‌. ಬಸವರಾಜಪ್ಪ, ಪದಾಕಾರಿಗಳಾದ ಪಿ. ಶೇಖರಪ್ಪ, ಇ.ಬಿ. ಜಗದೀಶ್‌, ಶಿವಮೂರ್ತಿ, ಹಿಟ್ಟೂರು ರಾಜು ಜ್ಞಾನೇಶ್‌ ಸಿ. ಚಂದ್ರಪ್ಪ, ಕಸಟ್ಟಿ ರುದ್ರೇಶ್‌, ಕೆ. ರಾಘವೇಂದ್ರ. ಪಿ.ಡಿ.ಮಂಜಪ್ಪ ಮುಂತಾದವರಿ ದ್ದರು.