ವಿಜಯೇಂದ್ರ ವಿರುದ್ಧ ಸ್ಪರ್ಧೆಗೆ ಶಿಕಾರಿಪುರದಲ್ಲಿ ಟಿಕೆಟ್ ಪೈಪೋಟಿ
ಶಿಕಾರಿಪುರ : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯು ವುದಾಗಿ ಘೋಷಣೆ ಮಾಡಿದ ದಿನದಿಂದ ಶಿಕಾರಿಪುರ ಕಾಂಗ್ರೆಸ್ ಲ್ಲಿ ಹೊಸ ಹುರುಪು ಬಂದಿದೆ.
ಯಡಿಯೂರಪ್ಪ ಮಗ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಶಿಕಾರಿಪುರದಲ್ಲಿ ರ್ಸ್ಪಸುವುದು ನಿಶ್ಚಯವಾದ ಮೇಲಂತೂ ಟಿಕೆಟ್ ಪೈಪೋಟಿ ಜೋರಾಗಿದೆ. ಅಹಿಂದಾ ಹಾಗೂ ಸಾಧು ( ಸಾದರ) ಲಿಂಗಾಯತ ಮತಗಳ ಆಧಾರದ ಮೇಲೆ, ಹಿಂದಿನ ಚುನಾವಣಾ ಲಿ ತಾಂಶಗಳ ಲೆಕ್ಕಾಚಾರದ ಮೇಲೆ ವಿಜ ಯೇಂದ್ರನ ವಿರುದ್ಧ ಜಯಗಳಿಸಬ ಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ಸಾಕಷ್ಟು ಆಕಾಂಕ್ಷಿತರು ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರೂ ಸಹ ಇಬ್ಬರು ನಾಯಕರ ಬೆಂಬಲಿಗರ ಮುನಿಸು ಬೆಂಗಳೂರಿನಲ್ಲಿ ಸಿದ್ದರಾ ಮಯ್ಯ ನಿವಾಸಕ್ಕೆ ತಲುಪಿತ್ತು. ಬಿಜೆಪಿ ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಶಿಕಾರಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕುತ್ತಾರೆಂದು ಕಾಂಗ್ರೆಸ್ನ ಪ್ರಬಲ ನಾಯಕ ನಾಗರಾಜ್ ಗೌಡ ಬೆಂಬಲಿಗ ಹೇಳಿಕೆ ನೀಡಿದ್ದು ಜಗಳ ತಾರಕ್ಕೇರಿತ್ತು. ಇದಕ್ಕೆ ಪ್ರತಿಯಾಗಿ ಕಳೆದ ಬಾರಿ ಯಡಿ ಯೂರಪ್ಪ ವಿರುದ್ಧ ನಿಂತು ಮೂವತ್ತು ಸಾವಿರ ಮತಗಳ ಆಸುಪಾಸಿನಿಂದ ಸೋತಿದ್ದ ಕಾಂಗ್ರೆಸ್ ಮುಖಂಡ ಗೋಣಿ ಮಾಲತೇಶ್ ಬೆಂಬಲಿಗರೂ ಸಹ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಅತೃಪ್ತಿ ವ್ಯಕ್ತಪಡಿಸಿದ್ದರು.
ಜಾತಿ ಆಧಾರದ ಮೇಲೆ ಟಿಕೆಟ್ ನೀಡಬಾರದು, ಅಹಿಂದಾ ಓಟು ಗಳಿಂದ ಈ ಸಲ ಗೆಲ್ಲಬಹುದು ಎಂಬುದು ಗೋಣಿ ಮಾಲತೇಶ್ ಬೆಂಬಲಿಗರ ವಾದವಾಗಿತ್ತು.
ಹೀಗೆ ಉಭಯ ನಾಯಕರ ಬೆಂಬಲಿಗರ ಜಟಾಪಟಿ ಕಾಂಗ್ರೆಸ್ ಗೆ ಇರಿಸು-ಮುರಿಸು ತಂದಿತ್ತು. ಈಗ ಉಭಯ ನಾಯಕರೂ ಸಹ ತಮ್ಮ ಬೆಂಬಲಿಗರ ತಪ್ಪಿಗೆ ವಿಷಾಧ ವ್ಯಕ್ತಪಡಿಸಿ ತಾವೆಲ್ಲಾ ಒಂದೇ ಪಕ್ಷದವರು ಯಾರಿಗೇ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಲಿಂಗಾಯತರ ಒಳಪಂಗಡ ಸಾಧು ಲಿಂಗಾಯತರೇ ಹೆಚ್ವಿರುವ ಶಿಕಾರಿಪುರದಲ್ಲಿ ಸಮುದಾಯದ ಜೊತೆ ಎಲ್ಲಾ ಜಾತಿಗಳ ಬೆಂಬಲವಿದ್ದು ವಿಜ ಯೇಂದ್ರನನ್ನ ಸುಲಭವಾಗಿ ಸೋಲಿಸಬ ಹುದು ಎಂದು ವಾದ ಮಂಡಿಸಿರುವ ನಾಗರಾಜ್ ಗೌಡ, ಟಿಕೆಟ್ ನ್ನ ಆಂತರಿಕ ಸರ್ವೇ ಪ್ರಕಾರ ನೀಡಲಿ, ನಾವೆಲ್ಲಾ ಅಣ್ಣ- ತಮ್ಮಂದಿರಂತಿದ್ದೇವೆ. ಬಿಜೆಪಿ ಶಿಕಾರಿಪುರದಲ್ಲಿ ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಅಂತ ನಾನು ಹೇಳಿಲ್ಲ, ನಮ್ಮ ಜೊತೆ ಬಂದ ಬೆಂಬಲಿ ಗರಲ್ಲೊಬ್ಬರು ಹೇಳಿರುವುದು. ಕಾಂಗ್ರೆಸ್ ಗೆಲ್ಲಿಸುವುದಷ್ಟೇ ನಮ್ಮ ಗುರಿ. ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದರು.
ಇನ್ನೊಬ್ಬ ಮುಖಂಡ ಗೋಣಿ ಮಾಲತೇಶ್ ವಿಕೆ ವೆಬ್ ಜೊತೆ ಮಾತನಾಡಿ, ನಮ್ಮಲ್ಲಿ ಬಣ ರಾಜ ಕೀಯ ಇಲ್ಲ.! ನಾಗರಾಜ್ ಗೌಡ ಸೇರಿ ಹತ್ತು ಜನ ಅರ್ಜಿ ಸಲ್ಲಿಸಿದ್ದಾರೆ. ಟಿಕೆಟ್ ಲಾಭಿ ಯಾರೂ ಮಾಡಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧ. ಕಳೆದ ಸಲಕ್ಕಿಂತ ಈ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಅಹಿಂದಾ ಬಲವೂ ತನ್ನ ಪಾಲಿಕೆ ಇರೋದ್ರಿಂದ ಗೆಲುವು ಸುಲಭ. ಯಾರಿಗೇ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಗೊಂದಲಗಳಿಲ್ಲ ಎಂದರು.
ಬಿಎಸ್ ಯಡಿಯೂರಪ್ಪ ಚುನಾವ ಣೆಯಿಂದ ಹಿಂದೆ ಸರಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡರಿಗೆ ಆಶಾಭಾವ ಮೂಡಿರೋದಕ್ಕೆ ಹಿನ್ನೆಲೆ ಇದೆ.
ಶಿಕಾರಿಪುರದ ಜಾತಿಯಾಧಾರಿತ ಮತಗಳನ್ನ ನೋಡಿದರೆ ಯಡಿಯೂ ರಪ್ಪಗೆ ಅಭಿವೃದ್ಧಿ ಹಾಗೂ ರಾಜ್ಯದ ಪ್ರಬಲ ನಾಯಕತ್ವ ನೋಡಿ ಜಾತ್ಯಾ ತೀತವಾಗಿ, ಧರ್ಮಾತೀತವಾಗಿ ಮತ ನೀಡಲಾಗಿದೆ. ಅವರ ಮಗ ವಿಜಯೇಂದ್ರಗೆ ಯಡಿಯೂರಪ್ಪಗೆ ಸಿಕ್ಕಿದ ಜನ ಬೆಂಬಲ ಸಿಗಲಾರದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಶಿಕಾರಿಪುರ ಕ್ಷೇತ್ರ ( ಕಳೆದ ಸಲ) ಮತದಾರರ ಸಂಖ್ಯೆ:1,91,955 ಜಾತಿ ವಾರು ಸಂಖ್ಯೆ ಹೀಗಿದೆ. ಲಿಂಗಾಯತರು ಒಳ ಪಂಗಡಗಳೆಲ್ಲ ಸೇರಿ 57 ಸಾವಿರ, ಬಂಜಾರ (ಲಂಬಾಣಿಗಳು, ಎಸ್ಸಿ) 26 ಸಾವಿರ, ಮುಸ್ಲಿಮರು 21 ಸಾವಿರ, ಕುರುಬರು 19 ಸಾವಿರ, ಎಸ್ಸಿ- ಎಸ್ಟಿ 16 ಸಾವಿರ, ವಾಲ್ಮೀಕಿ (ಎಸ್ಟಿ) 15 ಸಾವಿರ, ಈಡಿಗರು 12 ಸಾವಿರ, ಒಕ್ಕಲಿಗರು 5 ಸಾವಿರ, ಬ್ರಾಹ್ಮಣರು 3 ಸಾವಿರ ಮತ್ತು ಇತರರು 10 ಸಾವಿರ ಎಂದು ಅಂದಾಜಿಸಲಾ ಗಿದೆ.ಲಿಂಗಾಯತ ಒಟ್ಟು ಮತಗಳಲ್ಲಿ ಕನಿಷ್ಟ ನಲವತ್ತು ಸಾವಿರ ಸಾದರ ಲಿಂಗಾ ಯತ ಮತಗಳಿವೆ ಹಾಗೂ ಯಡಿಯೂ ರಪ್ಪ ಕುಟಂಬ ಈ ಒಳಪಂಗಡಕ್ಕೆ ಸೇರಿಲ್ಲ. ಹಿಂದಿನಿಂದಲೂ ಸಾದರ ( ಸಾದು) ಲಿಂಗಾಯತರು ಶಾಸಕರಾಗ ಬೇಕು ಎಂಬ ಆಸೆಗೆ ಯಡಿಯೂರಪ್ಪ ತಣ್ಣೀರೆರೆಚಿದರು. ಸಾದರರನ್ನ ಬೆಳೆ ಯಲು ಬಿಡಲಿಲ್ಲ. ಈ ಸಲ ಕಾಂಗ್ರೆಸ್ ಟಿಕೆಟ್ ನೀಡಬೇಕು, ಜಾತಿ ಮತಗಳು ಕಾಂಗ್ರೆಸ್ ಪರ ನಿಲ್ಲುತ್ತವೆ, ಆಗ ಗೆಲುವು ಸಾಧ್ಯ ಎಂಬುದು ಗೌಡರ ವಾದ.
ಗೋಣಿ ಮಾಲತೇಶ್ ಪ್ರಕಾರ ಹಿಂದೆ ನಾಗರಾಜ್ ಗೌಡರ ಚಿಕ್ಕಪ್ಪ ಶಾಂತ ವೀರಪ್ಪ ಗೌಡರಿಗೆ ಸಾಕಷ್ಟು ಸಲ ಅವಕಾಶ ನೀಡಲಾಗಿತ್ತು. ತಾವು ಕಳೆದ ಸಲ ನಿಂತಾಗ ಯಡಿಯೂರಪ್ಪ ವಿರುದ್ಧ ಮೂವತ್ತು ಸಾವಿರ ಮತಗಳ ಅಂತರ ದಿಂದ ಸೋಲಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಮಗನ ವಿರುದ್ಧ ಗೆಲುವಿನ ಅಂತರ ತಮಗೆ ಹೆಚ್ಚು ಸಿಗಲಿದೆ. ಅಹಿಂದಾ ಮತಗಳು ತಮ್ಮೊಟ್ಟಿಗೆ ನಿಲ್ಲುತ್ತವೆ ಎಂದಿದ್ದಾರೆ.
ಹಿಂದಿನ ಚುನಾವಣೆಗೆಳನ್ನ ನೋಡಿದರೆ ಸಾದರ ಲಿಂಗಾಯತರು ಕಾಂಗ್ರೆಸ್ ಲ್ಲಿ ನಿಂತಾಗ ಹತ್ತು ಸಾವಿರ ಅಂತರದಲ್ಲಿ ಯಡಿಯೂರಪ್ಪ ಗೆದ್ದಿ ದ್ದಾರೆ. ಆದರೆ ಕಳೆದ ಸಲ ಗೋಣಿ ಮಾಲತೇಶ್ ಕುರುಬ ಸಮುದಾಯ ದವರು ನಿಂತಾಗ ಅಂತರ ಮೂವತ್ತು ಸಾವಿರಕ್ಕೆ ಹಿಗ್ಗಿದೆ. ಹಾಗಾಗಿ ಬದಲಾದ ಪರಿಸ್ಥಿತಿಯಲ್ಲಿ ಸಾದರ ಲಿಂಗಾಯತ ನಾಗರಾಜ್ ಗೌಡಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಮತಗಳು ಕ್ರೋಢೀಕರಣ ವಾದರೆ ವಿಜಯೇಂದ್ರ ಗೆಲುವು ಕಷ್ಟ ಎಂಬುದು ಜನರ ಲೆಕ್ಕಾಚಾರ.
2018 ರಲ್ಲಿ ಬಿಎಸ್ವೈ( ಬಿಜೆಪಿ) ಪಡೆದ ಮತಗಳು 86,983 ಹಾಗೂ ಅವರ ಸಮೀಪ ರ್ಸ್ಪ ಕಾಂಗ್ರೆಸ್ ನಿಂದ ಗೋಣಿ ಮಾಲತೇಶ್ ಪಡೆದ ಮತಗಳು 51586.2014 ರ ಉಪ ಚುನಾವಣೆ ಯಲ್ಲಿ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ (ಬಿಜೆಪಿ) ಪಡೆದ ಮತ ಗಳು 71547 ಹಾಗೂ ಅವರ ಸಮೀಪ ರ್ಸ್ಪ ಹೆಚ್ ಎಸ್ ಶಾಂತ ವೀರಪ್ಪ ಗೌಡ, ಕಾಂಗ್ರೆಸ್ ಅಭ್ಯರ್ಥಿ ( ಸಾದರ ಲಿಂಗಾಯತ) 65,117 ಮತಗಳು.
2013 ರಲ್ಲಿ ಬಿಎಸ್ವೈ( ಕೆಜೆಪಿಯಿಂದ) 69126 ಮತಗಳು. ಸಮೀಪ ರ್ಸ್ಪ ಹೆಚ್ ಎಸ್ ಶಾಂತ ವೀರಪ್ಪ ಗೌಡ 44,701 ಮತಗಳು.
ಒಟ್ಟಿನಲ್ಲಿ ಹಿಂದಿನ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾದರ ಲಿಂಗಾಯತ ಮುಖಂಡ ಹಾಗೂ ನಾಗರಾಜ್ ಗೌಡ ಚಿಕ್ಕಪ್ಪ ಶಾಂತ ವೀರಪ್ಪ ಗೌಡ ನಿಂತಾಗ ಹತ್ತು ಸಾವಿರ ಅಂತರದಲ್ಲಿ ಯಡಿಯೂರಪ್ಪ ಕುಂಟುಬ ಗೆದ್ದಿದೆ. ಈ ಸಲ ಆಡಳಿತ ವಿರೋ ಅಲೆಯ ಜೊತೆ ಬಂಜಾರ ಸಮುದಾಯದ ಒಳಮೀಸಲು ಲಾಭ ಪಡೆದು ವಿಜಯೇಂದ್ರನನ್ನ ಸೋಲಿಸಬ ಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಮುಖಂಡರು ಹಾಕಿಕೊಂಡಿದ್ದಾರೆ. ಅದರಲ್ಲೂ ಸಾದರ ಲಿಂಗಾಯತ ನಾಗರಾಜ್ ಗೌಡ ಬೆಂಬಲಿಗರೂ ಈ ಸಲ ಸಮುದಾಯಕ್ಕೇ ನೀಡಿ ಎಂದು ಮನವಿ ಮಾಡಿದ್ದಾರೆ.
ಸಾದರ ಲಿಂಗಾಯತ ಸಮುದಾಯ ದಿಂದ ಪುಷ್ಪಾ ಶಿವಕುಮಾರ್ ಎಂಬುವರೂ ಸಹ ಪ್ರಬಲ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದು ಟಿಕೆಟ್ ಪಡೆಯಲು ಎಲ್ಲರಂತೆ ಮುಂಚೂಣಿಯಲ್ಲಿದ್ದಾರೆ.