ಕ್ರೈಂಜಿಲ್ಲಾ ಸುದ್ದಿ

ಎದೆಯಲ್ಲಿ ಹಾಲಿಲ್ಲವೆಂಬ ಕಾರಣಕ್ಕೆ ಮಹಿಳೆ ಆತ್ಮಹತ್ಯೆ

ಶಿವಮೊಗ್ಗ : ಎದೆಯಲ್ಲಿ ಹಾಲಿಲ್ಲ ಎಂಬ ಕಾರಣಕ್ಕೆ ತಾಯಿ ಯೊಬ್ಬಳು ಆತ್ಮಹತ್ಯೆ ಮಾಡಿ ಕೊಂಡ ಘಟನೆಯೊಂದು ಇದೀಗ ಮಲೆನಾಡಿಗರ ಮನ ಕಲಕುತಿದೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿ ನಲ್ಲಿ ಈ ಘಟನೆ ನಡೆದಿದೆ.

ಸೊರಬ ತಾಲೂಕಿನ ಕುಪ್ಪಗಡ್ಡೆ ಯಲ್ಲಿ ಇಂತಹ್ದೊಂದು ಘಟನೆ ನಡೆದಿದೆ. ಇಲ್ಲಿನ ಶಾಂತಾ(28) ಮೃತ ಮಹಿಳೆ . ಇಲ್ಲಿನ ಜಡ್ಡೆಹಳ್ಳಿ ಗ್ರಾಮಕ್ಕೆ ಮದುವೆಯಾಗಿ ಬಂದಿದ್ದ ಇವರು, ಬಾಣಂತ ನಕ್ಕಾಗಿ ತವರಿನಲ್ಲಿದ್ದರು

ಒಂದುವರೆ ತಿಂಗಳ ಮಗು ವಿಗೆ ಹಾಲುಣಿಸಲು ಎದೆಯಲ್ಲಿ ಹಾಲು ಬರುತ್ತಿರಲಿಲ್ಲವಂತೆ. ಬರುವಷ್ಟು ಎದೆಹಾಲು ಮಗುವಿಗೆ ಸಾಕಾಗುತ್ತಿರಲ್ಲವಂತೆ. ಈ ವಿಚಾರದಲ್ಲಿ ಯಾರಾದರೂ ಗೃಹಿಣಿಯನ್ನ ನೋಯಿಸಿದರೋ ಅಥವಾ ವಿಚಾರವೇ ಅವರಲ್ಲಿ ಬೇಸರ ಮೂಡಿಸಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಮಗುವಿನ ಜೊತೆಗೆ ಶಾಂತಾ ಕಾಣೆಯಾಗಿದ್ದಾರೆ.

ಮನೆಯವರೆಲ್ಲಾ ಶಾಂತಾ ಕಾಣುತ್ತಿಲ್ಲ ಎಂದು ಹುಡುಕುತ್ತಿ ರುವಾಗ ಹತ್ತಿರದಲ್ಲಿಯೇ ಇದ್ದ ತುಂಬೆಹೊಂಡದಲ್ಲಿ ಪುಟ್ಟ ಮಗುವಿನ ಶವ ತೇಲುತ್ತಿರುವುದು ಕಾಣಿಸಿದೆ. ತಕ್ಷಣ ಸ್ಥಳೀಯರು ಹಾಗೂ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಶಾಂತಾಳಿಗಾಗಿಯು ಹುಡುಕಾಟ ನಡೆಸಿದ್ದಾರೆ. ಕೆಲ ಗಂಟೆಗಳ ಕಾರ್ಯ್ಚರಣೆ ಬಳಿಕ ಶಾಂತಾರ ಶವ ಕೂಡ ಪತ್ತೆ ಯಾಗಿದೆ.

ಇನ್ನೂ ಈ ಸಂಬಂಧ ಆನವಟ್ಟಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು, ತನಿಖೆ ನಡೆಸ್ತಿದ್ಧಾರೆ. ಆದಾಗ್ಯು ಎದೆಹಾಲು ನೀಡ ಲಾಗದ ಕಾರಣಕ್ಕೆ ತಾಯಿಯೊ ಬ್ಬರು ಆತ್ಮಹತ್ಯೆ ಮಾಡಿಕೊಂ ಡಿದ್ದಾರೆ ಎಂಬ ವಿಚಾರ ನಿಜಕ್ಕೂ ಹೃದಯ ವಿದ್ರಾವಕ ಎನಿಸಿದ್ದು, ಮಲೆನಾಡಿನಲ್ಲಿ ಘಟನೆ ಬಗ್ಗೆ ಅಚ್ಚರಿ ಹಾಗೂ ದುಃಖ ವ್ಯಕ್ತ ವಾಗುತ್ತಿದೆ.