ಜಿಲ್ಲಾ ಸುದ್ದಿತಾಜಾ ಸುದ್ದಿ

ಕೆಪಿಸಿಸಿ ವಿರುದ್ಧ ವಡ್ನಾಳ್‌ ರಾಜಣ್ಣ ಅಭಿಮಾನಿಗಳ ಆಕ್ರೋಶ-ಶಿವಮೊಗ್ಗದಲ್ಲಿ ವಡ್ನಾಳ್‌ ಮನೆ ಮುಂದೆ ಬೆಂಬಲ ಸೂಚಿಸಿ ಪ್ರತಿಭಟನೆ

ಶಿವಮೊಗ್ಗ : ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್‌ ಟಿಕೇಟ್‌ ವಡ್ನಾಳ್‌ ರಾಜಣ್ಣಗೆ ಕೈತಪ್ಪಿದ ಹಿನ್ನೆಲೆಯಲ್ಲಿ ನಿನ್ನೆ ನಗರದ ರವೀಂದ್ರ ನಗರದ 100 ಅಡಿ ಮುಖ್ಯ ರಸ್ತೆಯಲ್ಲಿರು ವ ವಡ್ನಾಲ್‌ ರಾಜಣ್ಣ ನಿವಾಸಕ್ಕೆ  ನೂರಾರು ಕಾರ್ಯಕರ್ತರು ಆಗಮಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಚನ್ನಗಿರಿಯಿಂದ ಆಗಮಿಸಿ ರುವ ಕಾರ್ಯಕರ್ತರು ಶಿವಮೊಗ್ಗ ನಿವಾಸಕ್ಕೆ ಆಗಮಿಸಿದ್ದರು.ವಡ್ನಾಳ್‌ ರಾಜಣ್ಣಗೆ ಟಿಕೇಟ್‌ ನೀಡುವಂತೆ ಕಾರ್ಯಕರ್ತರು, ಅಭಿಮಾನಿಗಳ ಆಗ್ರಹಿಸಿದ್ದಾರೆ.ವಡ್ನಾಳ್‌ ರಾಜಣ್ಣ ನಿವಾಸದ ಎದುರು ಕಾರ್ಯ ಕರ್ತರ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ಪಕ್ಷ ಸಮಿತಿ ಯ ವಿರುದ್ಧ ಕ್ಕಾರವನ್ನ ಕಾರ್ಯ ಕರ್ತರು ಘೋಷಣೆ ಕೂಗಿದ್ದರು.

ವಡ್ನಾಳ್‌ ರಾಜಣ್ಣಗೆ ಟಿಕೇಟ್‌ ನೀಡದಿದ್ದರೆ ಈಗ ಟಿಕೇಟ್‌ ನೀಡಿ ರುವ ಕಾಂಗ್ರೆಸ್‌ ಅಭ್ಯರ್ಥಿ ಬಸವ ರಾಜ್‌ ಶಿವಗಂಗ ಠೇವಣಿ ಕಳೆದು ಕೊಳ್ಳುವುದು ಗ್ಯಾರೆಂಟಿ ಎಂದು  ಕಾರ್ಯಕರ್ತರು ಆಕ್ರೋಶ ವ್ಯಕ್ತಪ ಡಿಸಿದ್ದಾರೆ.ಎಐಸಿಸಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತ ನಾಡುತ್ತೇನೆ ಸುಮ್ಮನಿರುವಂತೆ ಕಾರ್ಯಕರ್ತರನ್ನು  ವಡ್ನಾಳ್‌ ರಾಜಣ್ಣಸಮಾಧಾನ ಮಾಡಿದ್ದಾರೆ.