ಜಿಲ್ಲಾ ಸುದ್ದಿ

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಸಿದಂತೆ ಪಕ್ಷದ ಹೈಕಮಾಂಡ್‌ ಕೈಗೊಳ್ಳುವ ತೀರ್ಮಾನಕ್ಕೆ ಬದ್ದರಾಗಿದ್ದೇವೆ : ಕಾಂಗ್ರೆಸ್‌ ಮುಖಂಡರು

ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಸಿದಂತೆ ಪಕ್ಷದ ಹೈಕಮಾಂಡ್‌ ಕೈಗೊಳ್ಳುವ ತೀರ್ಮಾನಕ್ಕೆ ಬದ್ದರಾಗಿದ್ದೇವೆ ಎಂದು ಕಾಂಗ್ರೆಸ್‌ ಮುಖಂಡರು ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಕಚೇರಿ ಯಲ್ಲಿ ನಡೆದ ಸಂಯುಕ್ತ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ,  ಮಾಜಿ ವಿಧಾನಪರಿಷತ್‌ ಸದಸ್ಯ ಆರ್‌. ಪ್ರಸನ್ನಕುಮಾರ್‌, ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್‌, ಪ್ರಚಾರ ಸಮಿತಿ ರಾಜ್ಯ ಸಂಯೋಜಿಕ ಎಸ್‌.ಪಿ. ದಿನೇಶ್‌, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್‌.ರಮೇಶ್‌ ಅವರು ಶಿವ ಮೊಗ್ಗ ಕ್ಷೇತ್ರಕ್ಕೆ ಸಂಬಂಸಿದಂತೆ ಹೈಕಮಾಂಡ್‌ ಯಾರಿಗೇ ಟಿಕೆಟ್‌ ಕೊಟ್ಟರೂ ಕೂಡ ಸ್ವಾಗತಿಸುತ್ತೇವೆ ಎಂದರು.

ಆಯನೂರು ಮಂಜುನಾಥ್‌ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಜಿಲ್ಲಾ ಸಮಿತಿಯ ಜೊತೆ ಪಕ್ಷದ ರಾಜ್ಯ ನಾಯಕರು ಯಾವುದೇ ರೀತಿ ಚರ್ಚೆ ನಡೆಸಿಲ್ಲ. ಆದರೆ ಚುನಾ ವಣೆಯಲ್ಲಿ ಕಾಂಗ್ರೆಸ್‌ ಗೆಲುವು ಮುಖ್ಯ.  ಆಯನೂರು ಮಂಜು ನಾಥ್‌ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಕಾಂಗ್ರೆಸ್‌ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತೇವೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಹೈಕ ಮಾಂಡ್‌ ಪಕ್ಷದ ಒಳಿತಿಗಾಗಿ ಕೈಗೊ ಳ್ಳುವ ತೀರ್ಮಾನಕ್ಕೆ ಬದ್ಧರಾಗಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಬಿಜೆಪಿಯ ಕೆ.ಎಸ್‌. ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿ ಸುವ ಮೂಲಕ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೊರಟಿದ್ದಾರೆ. ಸಿದ್ದರಾಮಯ್ಯ ಅವರನ್ನು ಅಲೆ ಮಾರಿಗಳಿಗೆ ಹೋಲಿಸುವ ಮೂಲಕ  ಅಲೆಮಾರಿ ಸಮುದಾ ಯವನ್ನು ಅಪಮಾನಿಸಿದ್ದಾರೆ. ಈಶ್ವರಪ್ಪನವರಿಗೆ ಅವರ ಪಕ್ಷದಲ್ಲೇ ಟಿಕೆಟ್‌ ಸಿಗುವ ಖಾತರಿ ಇಲ್ಲ.  ಅವರ ಪಕ್ಷದಲ್ಲೆ ವಿರೋಗಳಿ ದ್ದಾರೆ.

ಅದನ್ನು ಸಹಿಸಿಕೊಳ್ಳ ಲಾಗದೆ ಸಿದ್ದರಾಮಯ್ಯ ಅವರನ್ನು ಟೀಕಿಸುವ ಮೂಲಕ  ಟಿಕೆಟ್‌ ಪಡೆಯುವ ಪ್ರಯತ್ನ ನಡೆಸಿದ್ದಾರೆ ಎಂದರು.

 ಸಿದ್ದರಾಮಯ್ಯ ಅವರನ್ನು ಬಯ್ಯದೆ ಹೋದರೆ ಈಶ್ವರಪ್ಪ ನವರಿಗೆ ಏಳಿಗೆಯೇ ಇಲ್ಲ. ಶಾಸ ಕರಾದವರು, ಉಪಮುಖ್ಯ ಮಂತ್ರಿಯಾಗಿದ್ದವರು ಎಚ್ಚರ ದಿಂದ ಮಾತನಾಡಬೇಕು. ಕ್ಷೇತ್ರ ದಲ್ಲಿ ಈಶ್ವರಪ್ಪ ಅವರು ಯಾವ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ ಎಂಬುದನ್ನು ಅವರ ಪಕ್ಷದವರೆ ಹೇಳುತ್ತಿದ್ದಾರೆ. ಈಶ್ವರಪ್ಪ  ತನ್ನ ಅಸ್ತಿ ತ್ವನ್ನು ತೋರಿಸಿಕೊಳ್ಳಲು ಸಿದ್ದರಾಮಯ್ಯ ವರನ್ನು ಟೀಕಿಸು ತ್ತಿದ್ದಾರೆ. ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಆರ್‌. ಪ್ರಸನ್ನ ಕುಮಾರ್‌ ಈಶ್ವರಪ್ಪ ವಿರುದ್ದ ವಾಗ್ದಾಳಿ ನಡೆಸಿದರು.

ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್‌ ಮಾತನಾಡಿ, ಈಶ್ವರಪ್ಪ ಅವರು ಶಿವಮೊಗ್ಗಕ್ಕೆ ಮೂಲತಃ ವಲಸೆ ಬಂದವರೇ ಆಗಿದ್ದಾರೆ. ಇಂತವರಿಗೆ ಸಿದ್ದರಾಮಯ್ಯ ಅವ ರನ್ನು ಟೀಕಿಸುವ ನೈತಿಕ ಹಕ್ಕಿಲ್ಲ. ನಲವತ್ತು ಪರ್ಸೆಂಟ್‌ ಈಶ್ವರಪ್ಪ ನವರು  ಮಂತ್ರಿಗಿರಿ ಕಳೆದುಕೊಂ ಡಿದ್ದು, ಮತ್ತೆ ಕೋರ್ಟು ವಿಚಾ ರಣೆ ದಿನ ನಿಗದಿ ಮಾಡಿದೆ. ಇದರಿಂದ ಈಗ ಮುನ್ನೆಲೆಗೆ ಬರಲು  ಸಿದ್ದರಾಮಯ್ಯ ಅವರ ವಿಚಾರ ವನ್ನೆ ಮಾತನಾಡಬೇಕಾಗಿದೆ. ಅದಕ್ಕಾಗಿ ಪದೇ ಪದೇ ಸಿದ್ದರಾ ಮಯ್ಯವರ ಜಪ ಮಾಡುತ್ತಿದ್ದಾರೆ. ಈಶ್ವರಪ್ಪನವರ ಮಾತು ವಿಚಾರ ಗಳನ್ನು ಮಾನವೀಯ ಸಮಾಜ ದಲ್ಲಿ ಯಾರೂ ಒಪ್ಪುವುದಿಲ್ಲ ಎಂದರು.

ಕಾಂಗ್ರೆಸ್‌ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಎಸ್‌.ಪಿ. ದಿನೇಶ್‌ ಮಾತನಾಡಿ, ಈ ಹಿಂದೆ ನಗರದಲ್ಲಿ ಶಾಂತಿಗಾಗಿ ನಡಿಗೆ ಕಾರ್ಯಕ್ರಮಕ್ಕೆ ಶಾಲಾ- ಕಾಲೇಜು ಮಕ್ಕಳು ಭಾಗವಹಿ ಸದಂತೆ ತಡೆದು, ಬಹಿರಂಗ ಸಭೆಗೆ ಸ್ಥಳಾವಕಾಶ ನೀಡದೆ ಮಠಾೕಶರು ಬೀದಿಯಲ್ಲಿ ಕುಳಿತು ಆಶೀರ್ವಚನ ಮಾಡುವಂತ ಪರಿಸ್ಥಿತಿ ಯನ್ನು ಈಶ್ವರಪ್ಪ ಮಾಡಿದ್ದರು. ಈಗ ಇದೇ ಮಠಾೕಶರನ್ನು ಭೇಟಿ ಮಾಡುತ್ತಾ ಲಿಂಗಾಯಿತ ಸಮುದಾಯವನ್ನು ಓಲೈಸುವ ಪ್ರಯತ್ನ ಮಾಡುತ್ತಿರುವುದು ಏಕೆ ಎಂದು ಕೆ.ಎಸ್‌. ಈಶ್ವರಪ್ಪ ಅವ ರನ್ನು ತರಾಟೆಗೆ ತೆಗೆದುಕೊಂಡರು.

ಸುದ್ದಿಗೋಷ್ಟಿಯಲ್ಲಿ ಓಬಿಸಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಶಿವಿಶ್ವನಾಥ್‌, ಉತ್ತರಬ್ಲಾಕ್‌ ಅಧ್ಯಕ್ಷ ದೀಪಕ್‌ ಸಿಂಗ್‌, ಆಸೀ್‌‍ ಉಪಸ್ಥಿತರಿ ದ್ದರು.