ಶಿವಮೊಗ್ಗಶಿವಮೊಗ್ಗ ನಗರ

ಕೆ.ಈ.ಕಾಂತೇಶ್‌ ನಗುಮುಖದ ಸರಳ ಸಜ್ಜನಿಕೆಯ ಸ್ನೇಹಜೀವಿ : ನವುಲೆ ಈಶ್ವರಪ್ಪ

ಶಿವಮೊಗ್ಗ: ಕೆ.ಈ.ಕಾಂತೇಶ್‌ ನಗುಮುಖದ ಸರಳ ಸಜ್ಜನಿಕೆಯ ಸ್ನೇಹಜೀವಿಯಾಗಿ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ ಎಂದು ಪತಂಜಲಿ ಸಂಸ್ಥೆ ಗೌರಾವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ ಹೇಳಿದರು.

ಅವರು ಮಲ್ಲೇಶ್ವರಂನ ಜಯ ಲಕ್ಷ್ಮೀ ನಿವಾಸದಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಶ್ರೀ ಕನಕದಾಸರ ಅಧ್ಯ ಯನ ಕೇಂದ್ರ ಆಶ್ರಯದಲ್ಲಿ ಕೆ.ಈ. ಕಾಂತೇಶ್‌ರವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ  ನಾಗ ರೀಕ ಅಭಿನಂದನಾ ಸಮಾ ರಂಭದಲ್ಲಿ ಮಾತನಾಡಿದರು.

ಜಿಲ್ಲಾ ಪಂಚಾಯತ್‌ ಹೊಳ ಲೂರು ಕ್ಷೇತ್ರದ ಮಾಜಿ ಸದಸ್ಯರಾದ ಕಾಂತೇಶ್‌ರವರು ಉದ್ಯಮಿಯಾಗಿ, ರಾಜ ಕಾರಣಿಯಾಗಿ, ಸಮಾಜಸೇವಕ ನಾಗಿ ಸಮಾಜಸೇವೆಯನ್ನು ಸಲ್ಲಿಸುತ್ತಿದ್ದಾರೆ.  ತಾಯಿಯಂತೆ ಮಗಳು, ನೂಲಿನಂತೆ ಸೀರೆ ಯಂತೆ, ತಂದೆಯಾದ ಕೆ.ಎಸ್‌. ಈಶ್ವರಪ್ಪನವರ ಮಾರ್ಗದರ್ಶನ ದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸ ಕಾರ್ಯವನ್ನು ಜನರಿಗೆ ಹೆಚ್ಚು ಉಪಯೋಗವಾಗುವ ರೀತಿಯಲ್ಲಿ ಮಾಡಿಕೊಂಡು ಬರುತ್ತಿದ್ದಾರೆ.

ಹಲವಾರು ಬಡಾವಣೆಗಳಲ್ಲಿ 2500ಕ್ಕೂ ಸೊಳ್ಳೆ ಪರದೆಯನ್ನು ಉಚಿತವಾಗಿ ನೀಡಿ ಜನ್ಮ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯ ಗೌರವ ಉಪಾಧ್ಯಕ್ಷ ಡಾ: ಪಿ.ಬಾಲಪ್ಪ, ಪತಂಜಲಿ ಸಂಚಾಲಕ ನವುಲೆ ರವೀಂದ್ರ, ಪತಂಜಲಿ ಸಂಸ್ಥೆಯ ಆಡಳಿತಾಕಾರಿ ಎಂ. ಪೂರ್ವಯ್ಯ, ಮುಖ್ಯ ಕಾರ್ಯ ನಿರ್ವಾಹಣಾಕಾರಿ ಪರಿಸರ ಸಿ.ರಮೇಶ್‌, ನಿರ್ದೇಶಕರಾದ ಸುಶೀಲಭವಾನಿಶಂಕರ್‌ರಾವ್‌, ಭವಾನಿಶಂಕರ್‌ರಾವ್‌, ರಾಷ್ಟ್ರಪತಿ ಪದಕ ವಿಜೇತ ಜಿ.ಈ.ಶಿವಾನಂ ದಪ್ಪ, ಅಧ್ಯಕ್ಷೆ ಸ್ವಾಮಿ ವಿವೇಕಾ ನಂದ ರಾಜ್ಯ ಯುವ  ಪ್ರಶಸ್ತಿ ಪುರಸ್ಕತ ಎ.ಹೆಚ್‌.ಶ್ಯಾಮಲಾ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕತ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್‌ ಉಪಸ್ಥಿತರಿದ್ದು, ಶುಭ ಹಾರೈಸಿದರು.