ಮಾ.25: ಸಂಗೀತ ಸ್ವರಧಾರಾ ಕಾರ್ಯಕ್ರಮ
ಶಿವಮೊಗ್ಗ: ಸಂಗೀತ್ ಸಮ ರ್ಪಣ್ ಟ್ರಸ್್ಟ, ಸದ್ಭಾವನಾ ಟ್ರಸ್್ಟ, ಜೆಸಿಐ ಶಿವಮೊಗ್ಗ ಶರಾವತಿ ಫೌಂಡೇಷನ್, ಜೆಸಿಐ ಶಿವಮೊಗ್ಗ ಶರಾವತಿ, ಜೆಸಿಐ ಶಿವಮೊಗ್ಗ ಶ್ರೀರಕ್ಷೆ ಇವರ ಸಂಯುಕ್ತ ಆಶ್ರಯದಲ್ಲಿ ಮಾ.25 ರ ಸಂಜೆ 5-30ಕ್ಕೆ ಕುವೆಂಪು ರಂಗ ಮಂದಿರದಲ್ಲಿ ಸಂಗೀತ ಸ್ವರಧಾರಾ ಕಾರ್ಯಕ್ರಮ ಹಮ್ಮಿ ಕೊಳ್ಳ ಲಾಗಿದೆ ಎಂದು ಸಂಗೀತ್ ಸಮ ರ್ಪಣ್ ಟ್ರಸ್್ಟ ಅಧ್ಯಕ್ಷೆ ಸುರೇಖಾ ಹೆಗ್ಡೆ ತಿಳಿಸಿದರು.
ಅವರು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಹಿಂದಿ ಹಳೆಯ ಚಿತ್ರಗಳ ಹಾಡು ಗಳ ಗಾಯನವಿದ್ದು, ಸುರೇಖಾ ಹೆಗ್ಡೆ, ಬೆಂಗಳೂರಿನ ಮೋಹನ್ ಕೃಷ್ಣ, ಕಿರಣ್ ಚನ್ನಗಿರಿ ಅವರಿಂದ ಗಾಯನವಿದೆ ಎಂದರು.
ಸದ್ಭಾವನಾ ಟ್ರಸ್್ಟ ಅಧ್ಯಕ್ಷ ಎಂ. ಶ್ರೀಕಾಂತ್ ಕಾರ್ಯಕ್ರಮ ಉದ್ಘಾಟಿಸಲಿದ್ದು,
ಉಪನ್ಯಾಸಕ ಹಾಗೂ ಯಕ್ಷಗಾನ ಕಲಾವಿದ ವಿ. ದತ್ತಮೂರ್ತಿ ಭಟ್ ಅವರಿಗೆ ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿ ಹರಳಪ್ಪ, ಶೋಭಾ ಸತೀಶ್, ದಿವ್ಯಾ, ಪರಮೇಶ್, ಲಿಂಗರಾಜು ಇನ್ನಿತರರು ಉಪಸ್ಥಿತರಿದ್ದರು.