ಶಿವಮೊಗ್ಗಶಿವಮೊಗ್ಗ ನಗರ

ಏ.2:  ಸುವರ್ಣ ಸಂಸ್ಕೃತಿ  ಭವನದಲ್ಲಿ ಗತಿ ನಾಟಕ ಪ್ರದರ್ಶನ

ಶಿವಮೊಗ್ಗ: ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಏ.2ರ ಸಂಜೆ 6-30ಕ್ಕೆ ಸುವರ್ಣ ಸಂಸ್ಕೃತಿ  ಭವನದಲ್ಲಿ ಗತಿ ಎಂಬ ನಾಟಕ ಪ್ರದರ್ಶನ ಹಮ್ಮಿಕೊಳ್ಳ ಲಾಗಿದೆ ಎಂದು ಬಳಗದ ಕಾರ್ಯದರ್ಶಿ ಬಿ.ಆರ್‌. ಅಚ್ಯುತ್‌ ರಾವ್‌ ತಿಳಿಸಿದರು.

ಅವರು ಗುರುವಾರ  ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, 2015ರಿಂದ ಬಳಗದ ವತಿಯಿಂದ ಸಾಂಸ್ಕೃತಿಕ ಹಾಗೂ ವೈವಿಧ್ಯ ಮಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಖ್ಯಾತ ಚಲನಚಿತ್ರ, ಕಿರುತೆರೆ ನಟ ಮತ್ತು ರಂಗಭೂಮಿ ನಿರ್ದೇಶಕ, ನಟ, ನಾಟಕಕಾರ, ಎಸ್‌.ಎನ್‌. ಸೇತೂರಾಂ ಹಾಗೂ ತಂಡದವರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ. ಸ್ವಾತಂತ್ರ್ಯ್ನಂತರದ ಸುಮಾರ 60 ವರ್ಷಗಳ ಆಗುಹೋಗುಗಳು ಮತ್ತು ಒಂದು ನಗರದ ಮಧ್ಯಮ ವರ್ಗದ ಕುಟುಂಬದ ಮೇಲೆ ಆ ಅರವತ್ತು ವರ್ಷಗಳ ಪರಿಣಾಮ ಇವುಗಳ ಸೂಕ್ಷ್ಮವನ್ನು ಹಿಡಿ ಯುವ ಪ್ರಯತ್ನವೇ ಗತಿ ನಾಟಕ ಎಂದರು.

ಒಂದೂವರೆ ಗಂಟೆಯ ನಾಟಕ ಇದಾಗಿದ್ದು, ಪ್ರವೇಶ ದರ 100ರೂ.. ಸವಳಂಗ ರಸ್ತೆಯ ಸೈಕಲ್‌ ಲೋಕ, ಎಲ್‌ಎಲ್‌ ಆರ್‌ ರಸ್ತೆಯ ಹೋಟೆಲ್‌ ಶುಭಂ, ಶ್ರೀನಿ ಸೇಲ್‌್ಸ ಅಂಡ್‌ ಟೆಕ್ಸ್ಟೈಲ್‌್ಸ, ದುರ್ಗಿಗುಡಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಅಯ್ಯಂಗಾರ್‌ ಬೇಕರಿ, ವಿನೋಬನಗರದ ವಿಪ್ರ ಟ್ರಸ್ಟ್ನ ಮಲೆನಾಡು ಮಳಿಗೆಯಲ್ಲಿ ಟಿಕೆಟ್‌ ದೊರೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 94484 58457 ಅಥವಾ 8618072981ರಲ್ಲಿ ಸಂಪರ್ಕಿಸಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿ. ರಾಮಾಚಾರ್‌, ಹೆಚ್‌.ಜಿ. ನಾಗರಾಜ್‌, ಎನ್‌.ನಾಗೇಶ್‌, ಕುಮಾರಶಾಸಿ ಉಪಸ್ಥಿತರಿದ್ದರು.