ಶಿವಮೊಗ್ಗಸೊರಬ

ಅನಕೃತ ಸಾಗುವಳಿ ಮಾಡಿದ ಜಮೀನಿನ ಸುತ್ತ ಅಗಳ ಹೊಡೆಯುವ ಮೂಲಕ ವಶಕ್ಕೆ  ಪಡೆದ ಅರಣ್ಯ ಇಲಾಖೆಯ ಅಕಾರಿಗಳು

ಸೊರಬ: ಸಾಗುವಳಿ ರೈತರ ವಿರೋಧದ ನಡುವೆಯೂ ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಸೋಮವಾರ ಅರಣ್ಯ ಇಲಾಖೆ ಯ ಅಕಾರಿಗಳು ಪೊಲೀಸ್‌ ಸರ್ಪಗಾವಲಿನಲ್ಲಿ ಬಗರ್‌ಹುಕುಂ ಸಾಗುವಳಿದಾರರನ್ನು ತೆರವುಗೊಳಿ ಸಿದರು.

ತಾಳಗುಪ್ಪ ಗ್ರಾಮದ ಸರ್ವೆ ನಂ. 20ರಲ್ಲಿ ಹೈಕೋರ್ಟ್‌ ಆದೇ ಶದ ಮೇರೆಗೆ ಅನಕೃತವಾಗಿ ಸಾಗುವಳಿ ಮಾಡಿದ ಜಮೀನಿನ ಸುತ್ತ ಅಗಳ ಹೊಡೆಯುವ ಮೂಲ ಕ ಅರಣ್ಯ ಇಲಾಖೆಯ ಅಕಾರಿಗಳು ಕಾರ್ಯ್ಚರಣೆ ನಡೆಸಿ ವಶಕ್ಕೆ ಪಡೆದರು. ಈ ಪೈಕಿ ಅನಕೃತವಾಗಿ ಸಾಗುವಳಿ ಮಾಡಿದ ಆರು ಮಂದಿಯ ಪೈಕಿ ಇಬ್ಬರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಉಳಿದ ನಾಲ್ವರು ರೈತರ ಜಮೀನಿನ ಸುತ್ತ ಅಗಳ ಹೊಡೆಯಲಾಯಿತು.

ಅರಣ್ಯಾಕಾರಿಗಳು ತೆರವು ಕಾರ್ಯ್ಚರಣೆ ಕೈಗೊಂಡ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್‌ ಹಾಗೂ ನಮೋ ವೇದಿಕೆ ಮುಖಂಡರು ಮತ್ತು ರೈತರು ತೆರವು ಕಾರ್ಯ್ ಚರಣೆ ಕೈ ಬಿಡುವಂತೆ ಪಟ್ಟು ಹಿಡಿದರು. ಅಕಾರಿಗಳ ಮನ ವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟರು, ಪಟ್ಟು ಬಿಡದ ಅಕಾರಿಗಳು ನ್ಯಾಯಾಲಯದ ಆದೇಶದಂತೆ ಅಕ್ರಮ ಸಾಗುವಳಿ ಮಾಡಿದ ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯುತ್ತಿರುವುದಾಗಿ ತಿಳಿಸಿದರು.

ಕಾಂಗ್ರೆಸ್‌ ಮುಖಂಡ ಎಚ್‌. ಗಣಪತಿ ಹುಲ್ತಿಕೊಪ್ಪ ಮಾತ ನಾಡಿ, ಅಕ್ರಮ ಸಾಗುವಳಿ ಮಾಡಿ ದ ಬಡ ರೈತರ ಹಿತ ಕಾಯುವಲ್ಲಿ ಮತ್ತು ಬಗರ್‌ಹುಕುಂ ಸಾಗುವಳಿ ದಾರರಿಗೆ ರಕ್ಷಣೆ ನೀಡುವಲ್ಲಿ ಸ್ಥಳೀಯ ಶಾಸಕ ಕುಮಾರ್‌ ಬಂಗಾರಪ್ಪ ವಿಲರಾಗಿದ್ದಾರೆ. ರೈತರನ್ನು ಒಕ್ಕಲೆಬ್ಬಿಸಿ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಲಾ ಗುತ್ತಿದೆ. ಮಧು ಬಂಗಾರಪ್ಪ ಅವರು ಶಾಸಕರಾಗಿದ್ದ ಅವಯಲ್ಲಿ ಬಗರ್‌ಹುಕುಂ ರೈತರಿಗೆ ರಕ್ಷಣೆ ನೀಡಿದ್ದರು. ಮುಂದಿನ ದಿನಗಳಲ್ಲಿ ವಿವಿಧ ಹಂತದ ಹೋ ರಾಟವನ್ನು ಪಕ್ಷಾತೀತವಾಗಿ ಹಮ್ಮಿ ಕೊಳ್ಳಲಾಗುವುದು ಎಂದರು.

ವಕೀಲ ಎಂ.ಡಿ. ಶೇಖರ್‌ ಮಾತನಾಡಿ, ಅರಣ್ಯ ಇಲಾಖೆ ಯಿಂದ ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಖಂಡ ನೀಯ. ಕ್ಷೇತ್ರದಲ್ಲಿ ಬಿಜೆಪಿ ಆಡಳಿ ತದಲ್ಲಿ ಇದ್ದ ಅವದಿಯಲ್ಲೆಲ್ಲಾ ರೈತರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಹಿಂದೆಯೂ ಸಹ ರೈತರ ಬಗರ್‌ಹುಕುಂ ಸಾಗುವಳಿ ಮಾಡಿದ ಭೂಮಿಯನ್ನು ವಶಕ್ಕೆ ಪಡೆಯಲಾಗಿತ್ತು. ಸುಮಾರು 45ರಿಂದ 50 ವರ್ಷಗಳ ಹಳೆಯ ಅಡಿಕೆ ಮರಗಳು ಧರೆಗೆ ಉರುಳುವ ಆತಂಕವನ್ನು ಎದುರಿಸುವಂತಾಗಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ಭೂಮಿ ಹಕ್ಕು ಕೊಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಕಾರ್ಯ್ಚರಣೆಯಲ್ಲಿ ಶಿವಮೊಗ್ಗ ಸಿಸಿಎ್‌‍ ಡಾ. ಕೆ.ಟಿ. ಹನುಮಂತಪ್ಪ ಮಾರ್ಗದರ್ಶ ನದಲ್ಲಿ ಸಾಗರ ವಿಭಾಗದ ಡಿಎ್‌‍ಒ ರಾಮಕೃಷ್ಣ, ಸೊರಬ ಎಸಿಎ್‌‍ ಪ್ರವೀಣ್‌ ಕುಮಾರ್‌ ಬಸ್ರೂರ್‌, ಹೊಸನಗರ ಎಸಿಎ್‌‍ ಕೆ.ಜಿ. ಪ್ರಕಾಶ್‌, ಸಾಗರ ಎಸಿಎ್‌‍ ಶ್ರೀಧರ್‌, ಆನವಟ್ಟಿ ಆರ್‌ಎ್‌‍ಒ ಪ್ರಭುದೇವ ಪಾಟೀಲ್‌, ಸೊರಬ ಆರ್‌ಎ್‌‍ಒ ಜಾವಿದ್‌ ಬಾಷಾ ಅಂಗಡಿ, ಸೇರಿದಂತೆ ಅರಣ್ಯ ಇಲಾಖೆಯ ವಿವಿಧ ವಲಯಗಳ ಆರ್‌ಎ್‌‍ಒಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಕಾರ್ಯ್ಚರಣೆ ಸ್ಥಳದಲ್ಲಿ ಸಿಪಿಐ ಭಾಗ್ಯವತಿ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್‌್ತ ವ್ಯವಸ್ಥೆ ಕಲ್ಪಿಸಲಾಗಿತ್ತು.