ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಲೋಕಾರ್ಪಣೆ
ಶಿಕಾರಿಪುರ : ತಾಲೂಕಿನಲ್ಲಿ ಆರೋಗ್ಯ ಕ್ಷೇತ್ರವನ್ನು ಕಲ್ಪಿಸಿಕೊಳ್ಳ ಲಾಗದ ರೀತಿಯಲ್ಲಿ ಅಗಾದವಾಗಿ ಅಭಿವೃದ್ದಿ ಗೊಳಿಸಲಾಗಿದ್ದು,ಜಿಲ್ಲಾ ಕೇಂದ್ರದಲ್ಲಿ ಅಸಾದ್ಯವಾದ ಹಲವು ಸೌಲಭ್ಯವನ್ನು ಶಿಕಾರಿಪು ರಕ್ಕೆ ಒದಗಿಸಲಾಗಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ತಿಳಿಸಿದರು.
ಶುಕ್ರವಾರ ಪಟ್ಟಣದ ಕೆಎಚ್ ಬಿ ಬಡಾವಣೆಯಲ್ಲಿ ನಿರ್ಮಾಣ ವಾದ ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಲೋಕಾ ರ್ಪಣೆಗೊಳಿಸಿ ಅವರು ಮಾತ ನಾಡಿದರು.
ಆರೋಗ್ಯ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಮುಖ್ಯಮಂತ್ರಿ ಯಾದ ಅವಽಯಲ್ಲಿ ಹೆಚ್ಚಿನ ಮಹತ್ವ ನೀಡಿದ್ದು ಈ ದಿಸೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದ ಅವರು ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅತ್ಯಂತ ಸುಸಜ್ಜಿತವಾಗಿ ನಿರ್ಮಾ ಣಗೊಂಡಿದ್ದು ಕಲ್ಪಿಸಿಕೊಳ್ಳಲಾಗದ ರೀತಿಯಲ್ಲಿ ಅಗಾದ ಅಭಿವೃದ್ದಿ ಹೊಂದಿರುವ ಆಸ್ಪತ್ರೆಯ ಸಂಪೂರ್ಣ ಪ್ರಯೋಜನ ಜನತೆಗೆ ತಲುಪಬೇಕು ಇದರಿಂದ ಮಾತ್ರ ಸಾರ್ಥಕತೆ ದೊರೆಯಲಿದೆ ಎಂದು ತಿಳಿಸಿದರು.
ಸಂಸದ ರಾಘವೇಂದ್ರ ಮಾತ ನಾಡಿ,ಕೋವಿಡ್ ಮಹಾಮಾರಿ ಸಮುದಾಯಕ್ಕೆ ಅಪ್ಪಳಿಸಿದ ಸಂಕ ಷ್ಟದ ಸಂದರ್ಬದಲ್ಲಿ ವೈದ್ಯರು, ಸಿಬ್ಬಂದಿ ಜೀವದ ಹಂಗು ತೊರೆದು ನಾಡಿನ ಜನತೆಯ ಜೀವ ಉಳಿ ಸುವ ಪುಣ್ಯದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಸಮು ದಾಯ ಮರೆಯಲು ಸಾದ್ಯವಿಲ್ಲ ಎಂದು ಶ್ಲಾಸಿದ ಅವರು ಆಸ್ಪತ್ರೆ ಸಹಿತ ಜನತೆಗೆ ಆರೋಗ್ಯ ಸೇವೆ ನೀಡುವ ಪ್ರತಿಯೊಂದು ಸ್ಥಳ ದೇವಸ್ಥಾನಕ್ಕೆ ಸಮಾನವಾಗಿದ್ದು ರೋಗಿಗಳು ಗುಣಮುಖರಾದ ನಂತರ ಹೂವು ಹಣ್ಣು ನೀಡಿ ನಿರ್ಮಲ ಹೃದಯದಿಂದ ವೈದ್ಯ ಸಿಬ್ಬಂದಿಯನ್ನು ಹಾರೈಸಲಿದ್ದಾರೆ ಅವರ ಹಾರೈಕೆ ಎಲ್ಲರಿಗೂ ದೊರೆಯಲು ಸಾದ್ಯವಿಲ್ಲ ಈ ದಿಸೆಯಲ್ಲಿ ವೈದ್ಯ ಸಿಬ್ಬಂದಿ ಸೇವೆ ಹೆಚ್ಚು ಮಹತ್ವವಾಗಿದೆ ಎಂದು ತಿಳಿಸಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಽಯಲ್ಲಿ ಆರೋಗ್ಯ ಕ್ಷೇತ್ರವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಗೊ ಳಿಸಲಾಗಿದ್ದು ಜಿಲ್ಲಾ ಕೇಂದ್ರಕ್ಕೆ ದೊರೆಯುವ ಸೌಲಭ್ಯದ ಜತೆಗೆ ಹೆಚ್ಚು ಸೌಲಭ್ಯ ತಾಲೂಕು ಕೇಂದ್ರಕ್ಕೆ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದ ಅವರು ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆರಂಭದಿಂದ ಒಟ್ಟು 450 ಕ್ಕೂ ಹೆಚ್ಚು ಹಾಸಿಗೆ ಸೌಲಭ್ಯ ಕಲ್ಪಿಸ ಲಾಗಿದೆ ಇದರಿಂದ ಮೆಡಿಕಲ್ ಕಾಲೇಜಿಗೆ ಸಮಾನವಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಚ್.ಟಿ ಬಳಿಗಾರ್,ಎಂಸಿಎ ನಿರ್ದೇಶಕ ವಸಂತಗೌಡ, ದೇವ ರಾಜ್ ಅರಸ್ ಅಭಿವೃದ್ದಿ ನಿಗಮದ ನಿರ್ದೇಶಕ ಹಾಲಪ್ಪ ಭದ್ರಾ ಪುರ,ಪುರಸಭಾಧ್ಯಕ್ಷೆ ರೇಖಾ ಬಾಯಿ,ಸದಸ್ಯೆ ರೂಪಕಲಾ ಹೆಗ್ಡೆ,ಆರೋಗ್ಯ ಇಲಾಖೆ ವಿಭಾಗ ಮಟ್ಟದ ಅಽ ಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಆರೋಗ್ಯಾಽ ಕಾರಿ ಡಾ.ರಾಜೇಶ್ ಸುರಗೀ ಹಳ್ಳಿ,ಡಾ ನಾಗರಾಜ ನಾಯ್ಕ, ತಾಲೂಕು ವೈದ್ಯಾಽ ಕಾರಿ ಡಾ.ನವೀದ್ ಖಾನ್,ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಽ ಕಾರಿ ಡಾ.ಶಿವಾನಂದ್, ಡಾ.ಸ್ವಾತಿ, ಎನ್ ವಿ ಸುರೇಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಿವಪ್ಪ ಇಂಜಿನಿಯರ್, ಮಂಜು ನಾಥ್ ರಾಜಲಕ್ಷ್ಮಿ,ಜ್ಯೋತಿ ಮಲ್ಲಣ್ಣಾರ್ಯ ಸಹಿತ ವೈದ್ಯ ಸಿಬ್ಬಂದಿ ಉಪಸ್ಥಿತರಿದ್ದರು.