ಶಿವಮೊಗ್ಗಶಿವಮೊಗ್ಗ ನಗರ

ಎಂಆರ್‌ಎಸ್‌ ವೃತ್ತಕ್ಕೆ ಬಿಎಸ್‌ವೈ ಹೆಸರನ್ನು ನಾಮಕರಣ ಮಾಡಲು ಮನವಿ

ಶಿವಮೊಗ್ಗ : ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ ಅವರ ಹೆಸರನ್ನು ಶಿವಮೊಗ್ಗದ ಹೃದಯ ಭಾಗವಾದ ಎಂಆರ್‌ಎಸ್‌ ವೃತ್ತಕ್ಕೆ ನಾಮಕರಣ ಮಾಡಬೇಕೆಂದು ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ(ರಿ.)ದ ವತಿಯಿಂದ ಅಧ್ಯಕ್ಷ ಎಸ್‌.ಎಸ್‌. ಜ್ಯೋತಿಪ್ರಕಾಶ್‌ ಅವರು ವಿಧಾನ ಪರಿಷತ್‌ ಶಾಸಕರಾದ ಎಸ್‌. ರುದ್ರೇಗೌಡ ಅವರೊಂದಿಗೆ ಸಭೆಯಲ್ಲಿ ಉಪಸ್ಥಿತರಿದ್ದ ಸಂಸದರಾದ  ಬಿ. ವೈ. ರಾಘವೇಂದ್ರ ಸಮ್ಮುಖದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್‌ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು.

ಶಿಕಾರಿಪುರ ತಾಲ್ಲೂಕಿನ ಶಿವಶರಣೆ ಅಕ್ಕಮಹಾದೇವಿ ಜನ್ಮ ಸ್ಥಳವಾದ ಉಡುತಡಿ ಗ್ರಾಮದಲ್ಲಿ ಅಕ್ಕಮಹಾದೇವಿಯ 65 ಅಡಿ ಎತ್ತರದ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅವರೊಂ ದಿಗೆ ಮಾತನಾಡಿದ ಅವರು, ಬಿ.ಎಸ್‌. ಯಡಿಯೂರಪ್ಪ ಅವರು ಮೊಟ್ಟ ಮೊದಲ ಬಾರಿಗೆ ಈ ರಾಜ್ಯದ ಉಪ ಮುಖ್ಯ ಮಂತ್ರಿಯಾಗಿ ಅಽ ಕಾರದ ಗದ್ದುಗೆ ಏರಿದ ತರುವಾಯ ಸಿಕ್ಕ ಸ್ವಲ್ಪ ಅವಽಯಲ್ಲಿಯೇ ಮಲೆನಾಡಿನ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆದಿದ್ದರು.

ಅದರಲ್ಲೂ ದಕ್ಷಿಣ ಭಾರ ತದಲ್ಲಿ ಮೊಟ್ಟಮೊದಲ ಬಿಜೆಪಿ ನೇತೃತ್ವದ ಸರ್ಕಾರ ಅಽ ಕಾರಕ್ಕೆ ತಂದು ಈ ನಾಡಿನ ಮುಖ್ಯಮಂತ್ರಿ ಗಳಾದ ನಂತರ ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಸಾವಿ ರಾರು ಕೋಟಿ ಅನುದಾನ ಒದಗಿಸಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಹಾಗೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿ ರಾಜ್ಯದ ಭೂಪಟದಲ್ಲಿ ಜಿಲ್ಲೆಯ ಅಭಿವೃದ್ಧಿಯ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ.

ಇಷ್ಟೇ ಅಲ್ಲದೆ ಜಿಲ್ಲೆಯ ಮುಂದಿನ ಪೀಳಿಗೆಯು  ಸ್ಥಳೀಯ ವಾಗಿ ತಮ್ಮ ಭವಿಷ್ಯ ಕಟ್ಟಿಕೊಳ್ಳುವ ಆಲೋಚನೆಯಿಂದ ಜೊತೆಗೆ ಅನೇಕ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಹತ್ತಾರು ಉತ್ಪಾದನಾ ಕಾರ್ಖಾನೆಗಳು, ಐ.ಟಿ- ಬಿ.ಟಿ ಇನ್ನಿತರ ಕಂಪೆನಿ ಗಳು ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಆಕರ್ಷಿ ಸಲು ತಮ್ಮ ಬಹು ವರ್ಷಗಳ ಕನಸಿನ ವಿಮಾನ ನಿಲ್ದಾಣ ಅಭಿ ವೃದ್ಧಿ ಪಡಿಸಿ ಅನುಕೂಲ ಮಾಡಿ ಕೊಟ್ಟು ಇತಿಹಾಸ ನಿರ್ಮಿಸಿದ್ದಾರೆ.

ಜಿಲ್ಲೆಯ ಜನರ ಆಶಯದಂತೆ ವಿಮಾನ ನಿಲ್ದಾಣಕ್ಕೆ ಬಿ.ಎಸ್‌. ಯಡಿಯೂರಪ್ಪ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದರು. ಅದ ರಂತೆ ಸಿಎಂಗಳು ಖುದ್ದು ಸಂಪುಟ ದಲ್ಲಿ ತೀರ್ಮಾನಿಸಿ ಕೇಂದ್ರಕ್ಕೆ ಶಿಾ ರಸು ಮಾಡುತ್ತೇವೆ ಎಂದರು ಕೂಡ ಅದನ್ನು ಒಪ್ಪದೇ, ವಿಶ್ವ ಮಾನವ ಸಂದೇಶ ಸಾರಿದ ಕುವೆಂ ಪು ಅವರ ಹೆಸರನ್ನು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಈಗಾ ಗಲೇ ಮನವಿ ಮಾಡಿ ಬಿಎಸ್‌ವೈ ಅವರು ತಮ್ಮ ಹೃದಯ ವೈಶಾಲತೆ ತೋರಿದ್ದಾರೆ. ಹಾಗಾಗಿ ಅದೇ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ಬರುವ ಒಖ ವೃತ್ತಕ್ಕೆ ಬಿ.ಎಸ್‌. ಯಡಿಯೂರಪ್ಪ ಅವರ ಹೆಸರನ್ನು ನಾಮಕರಣ ಮಾಡು ವಂತೆ ಮಾನ್ಯ ಸಿಎಂಗಳಲ್ಲಿ ಸಮು ದಾಯದ ಒತ್ತಾಸೆಯಂತೆ ಹಾಗೂ ಎಲ್ಲ ವರ್ಗದ ಜನತೆಯ ಪರವಾಗಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಬಸವೇ ಶ್ವರ ವೀರಶೈವ ಸಂಘದ ನಿರ್ದೇಶ ಕ ಮೋಹನ್‌ ಬಾಳೆಕಾಯಿ ಅವ ರು, ಶ್ರೀಮತಿ ಅನಿತಾ ರವಿಶಂಕರ್‌ ಅವರು, ಶ್ರೀ ಮಹೇಶ್‌ ಮೂರ್ತಿ ಅವರು, ಪ್ರಮುಖರಾದ   ಉಮೇಶ್‌ ಇದ್ದರು.