ಶಿವಮೊಗ್ಗಶಿವಮೊಗ್ಗ ನಗರ

ಫಾಮರ್ಸಿ ಕಾಲೇಜಿನಲ್ಲಿ ದಂತ ತಪಾಸಣಾ ಶಿಬಿರ ದಂತ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡಬೇಡಿ

ಶಿವಮೊಗ್ಗ : ವ್ಯಕ್ತಿತ್ವದ ಸೌಂದರ್ಯ ಕಾಪಾಡುವಲ್ಲಿ ದಂತ ಪ್ರಮುಖವಾಗಿದ್ದು ದಂತ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡ ಬೇಡಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್‌ ಸಲಹೆ ನೀಡಿದರು.

ಶುಕ್ರವಾರ ನಗರದ ನ್ಯಾಷ ನಲ್‌ ಾರ್ಮಸಿ ಕಾಲೇಜಿನಲ್ಲಿ ಸುಬ್ಬಯ್ಯ ಡೆಂಟಲ್‌ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿ ಗಳಿಗಾಗಿ ಏರ್ಪಡಿಸಿದ್ದ ಉಚಿತ ದಂತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜನರಲ್ಲಿ ಹಲ್ಲು ಮತ್ತು ಕಣ್ಣುಗಳ ಬಗ್ಗೆ ಮುಂಜಾಗೃತಿ ವಹಿಸುವುದು ಕಡಿಮೆ. ಆರೋಗ್ಯ ಚೆನ್ನಾಗಿ ಇರಬೇಕಾದರೆ ಹಲ್ಲಿನ ಆರೋಗ್ಯ ಮೊದಲು ಸರಿಯಿರ ಬೇಕು.

ಹಲ್ಲುಗಳು ಸರಿಯಾಗಿ ದ್ದಾಗ ಎಲ್ಲ ಬಗೆಯ ಆಹಾರ ಸೇವಿಸಲು ಸಾಧ್ಯವಾಗುತ್ತದೆ. ಬಾಯಿ ಮನುಷ್ಯನ ಸೌಂದ ರ್ಯದ ಪ್ರಮುಖ ಸಾಧನ. ಆಹಾರ ಸೇವಿಸಲು, ಮಾತನಾ ಡಲು, ನಗು ಮೊಗದಿ ಎಲ್ಲರೊ ಂದಿಗೆ ಬೆರೆಯಲು ಬಾಯಿ ಮತ್ತು ಹಲ್ಲಿನ ಆರೋಗ್ಯ ಮುಖ್ಯ. ಕೃತಕ ಹಲ್ಲುಗಳು ನಿಜವಾದ ಹಲ್ಲಿನಷ್ಟು ಆರಾಮದಾಯಕವಾಗಿರುವುದಿಲ್ಲ ಎಂದು ಹೇಳಿದರು.

ಎನ್‌ಇಎಸ್‌ ನಿರ್ದೇಶಕರಾದ ಟಿ.ಆರ್‌.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಅನಾರೋಗ್ಯವಾಗಿ ಒದ್ದಾಡುವುದಕ್ಕಿಂತ ಆರೋಗ್ಯದ ಮುಂಜಾಗೃತೆ ವಹಿಸುವುದು ಉತ್ತಮ.

ಮೊಬೈಲ್‌ ವ್ಯಸನದಿಂ ದಾಗಿ ಮಕ್ಕಳಲ್ಲಿನ ಏಕಾಗ್ರತೆಯ ಶಕ್ತಿ ಕಡಿಮೆಯಾಗುತ್ತಿದೆ. ಆಧುನಿ ಕತೆ ಬೆಳೆದಂತೆ ಮನುಷ್ಯನಲ್ಲಿ ಆರೋಗ್ಯದ ಶಕ್ತಿಯು ಕುಂದು ತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂ ಶುಪಾಲರಾದ ಡಾ.ಜಿ. ನಾರಾ ಯಣಮೂರ್ತಿ ಮಾತನಾಡಿ, ಹಿರಿಯರು ಹೇಳಿಕೊಟ್ಟ ಸ್ವಚ್ಚತಾ ಪ್ರಕ್ರಿಯೆ ಬಗ್ಗೆ ಅಲಕ್ಷಿಸಿದ್ದೇವೆ. ಅಂತಹ ಅಲಕ್ಷತೆಯ ಪರಿಣಾಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾವು ತಿನ್ನುವ ಜಂಕ್‌ ಡ್‌ ಆರೋಗ್ಯದ ಮೇಲೆ ಬೀರುವ ತೊಂದರೆಗಳ ಕುರಿತು ಅರಿವು ನಮಗಿರಬೇಕು ಎಂದು ಹೇಳಿದರು.

ಸುಬ್ಬಯ್ಯ ಮೆಡಿಕಲ್‌ ಕಾಲೇ ಜಿನ ಡಾ.ಅನಿಲ್‌ ಬಾಬು ದಂತ ಆರೋಗ್ಯದ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಮಾಹಿ ತಿ ನೀಡಿದರು. ಕಾಲೇಜಿನ ಎನ್‌ ಎಸ್‌ಎಸ್‌ ಅಽ ಕಾರಿ ಸಿದ್ದಲಿಂಗ ಸ್ವಾಮಿ ಉಪಸ್ಥಿತರಿದ್ದರು.