ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಬೆಂಬಲ
ಭದ್ರಾವತಿ: ಕೇಂದ್ರ ಉಕ್ಕು ಪ್ರಾಽ ಕಾರದ ನಗರದ ವಿಶ್ವೇಶ್ವ ರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗದಲ್ಲಿ ನಡೆ ಸುತ್ತಿರುವ ಅನಿರ್ಽಷ್ಟಾವಽ 57ನೇ ದಿನದ ಹೋರಾಟಕ್ಕೆ ಕಾರುಣ್ಯ ಚಾರಿಟಬಲ್ ಟ್ರಸ್್ಟ ವತಿಯಿಂದ ಗುರುವಾರ ಬೆಂಬಲ ಸೂಚಿಸಲಾ ಯಿತು. ಸಂಜೆ ಜನ್ನಾಪುರ ಪ್ರಮು ಖ ರಸ್ತೆಗಳಲ್ಲಿ ವಿಐಎಸ್ ಎಲ್ ಕಾರ್ಖಾನೆ ಉಳಿಸುವ ಸಂಬಂಧ ಲಕಗಳನ್ನು ಹಿಡಿದು ಘೋಷಣೆ ಗಳನ್ನು ಹಾಕುವ ಮೂಲಕ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗಳ ವಿರುದ್ಧ ಪ್ರತಿಭಟಿ ಸಲಾಯಿತು. ನಂತರ ಮೇಣದ ಬತ್ತಿ ಬೆಳಗಿಸಿ ಬೆಂಬಲ ವ್ಯಕ್ತ ಪಡಿಸಲಾಯಿತು.
ಟ್ರಸ್್ಟ ಪದಾದಿಕಾರಿಗಳಾದ ಕೆ. ನಾಗರಾಜ್, ಸುರೇಶ್ ಕುಮಾರ್, ಟಿ. ಬಾಸ್ಕರ್, ಎನ್. ನಾಗವೇಣಿ, ಆರ್. ಮಂಜುಳಾ, ಜೆ. ಕಾಂತಾ, ಕಾರ್ತಿಕ್, ವಿಲ್ಸನ್ ಬಾಬು ಸೆಬಾಸ್ಟಿಯನ್, ಕವಿತಾ, ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದ ಸವಿತಾ, ಗುತ್ತಿಗೆ ಕಾರ್ಮಿಕರ ಸಂಘದ ಪ್ರಮುಖ ರಾದ ಸುರೇಶ್, ಎಂ. ನಾರಾ ಯಣ, ಆರ್. ಸ್ಪೂರ್ತಿ, ಸರವಣ, ಪ್ರಶಾಂತ್, ರಮೇಶ್ ಸೇರಿದಂತೆ ನೂರಾರು ಕಾರ್ಮಿಕರು ಇದ್ದರು.