ಶಿವಮೊಗ್ಗಶಿವಮೊಗ್ಗ ನಗರ

ವೈದ್ಯಕೀಯ ತಂತ್ರವಿಧಾನಗಳ ದುರ್ಬಳಕೆ ಬೇಡ

ಶಿವಮೊಗ್ಗ : ಯಾರೂ ಕೂಡ ಲಿಂಗಪತ್ತೆಗಾಗಿ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ನ್ನು ಮಾಡಿಸಬಾರದು ಮತ್ತು ಮಾಡಬಾರದು. ಆಧುನಿಕ ವೈದ್ಯಕೀಯ ತಂತ್ರವಿಧಾನಗಳ ಸರಿಯಾದ ಬಳಕೆ ಆಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽೕಶರಾದ ಮಲ್ಲಿಕಾ ರ್ಜುನ ಗೌಡ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽ ಕಾರಿಗಳ ಕಚೇರಿ, ಜಿಲ್ಲಾ ಕಾನೂನು ಸೇವಾ ಪ್ರಾಽ ಕಾರ ಇವರ ಸಂಯು ಕ್ತಾಶ್ರಯದಲ್ಲಿ ಗುರುವಾರ ಡಿಹೆಚ್‌ಓ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗರ್ಭ ಪೂರ್ವ ಮತ್ತು ಪ್ರಸವಪೂರ್ವ, ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ ಕಾಯ್ದೆ- 1994 ಜಿಲ್ಲಾ ಮಟ್ಟದ ಕಾರ್ಯ್ ಗಾರ ಉದ್ಘಾಟಿಸಿ ಮಾತನಾಡಿ ದರು.
ಮಕ್ಕಳಿಗೆ ಜನ್ಮ ನೀಡುವ ಮಹಿಳೆಯನ್ನು ತುಚ್ಚವಾಗಿ ಕಾಣುವುದು ಸರಿಯಲ್ಲ. ಪುರುಷ ಮಕ್ಕಳಿಗೆ ಜನ್ಮ ನೀಡಲು ಬರು ವುದಿಲ್ಲ. ಪ್ರಕೃತಿ ಮಹಿಳೆಗೆ ನೀಡಿ ರುವ ವಿಶೇಷ ಕೊಡುಗೆ ಜನ್ಮ ನೀಡುವುದು. ಇಂತಹ ಜನ್ಮದಾ ತೆಯನ್ನು ಹೆಣ್ಣೆಂದು ತುಚ್ಚೀಕರಿ ಸಬಾರದು. ಹೆಣ್ಣೇ ಹೆಣ್ಣಿಗೆ ಶತ್ರು ಎಂಬ ಮಾತಿದ್ದು, ಅದು ಆಗಬಾ ರದು. ಕುಟುಂಬದ ಹಂತದಿಂ ದಲೇ ಗಂಡು-ಹೆಣ್ಣು ಇಬ್ಬರೂ ಸರಿ ಸಮಾನರನ್ನಾಗಿ ಕಾಣಬೇಕು ಎಂದರು.
ಪ್ರಸ್ತುತ ಮಹಿಳೆ ಎಲ್ಲ ಕ್ಷೇತ್ರ ದಲ್ಲಿ ಪುರುಷರಿಗೆ ಸರಿ ಸಮಾನ ಳಾಗಿ ಸ್ಪರ್ಽಸುತ್ತಿದ್ದಾಳೆ. ದುಡಿ ಯುತ್ತಿದ್ದಾಳೆ. ಸಮಾಜ ಹಾಗೂ ಸಂಸಾರದಲ್ಲಿ ಹೆಣ್ಣಿನ ಪಾತ್ರ ಮಹ ತ್ತರದ್ದಾಗಿದ್ದು ಅದನ್ನು ಎಲ್ಲರೂ ಅರಿತುಕೊಳ್ಳಬೇಕು. ಯಾರೂ ಕೂಡ ಲಿಂಗಬೇಧ ಮಾಡಬಾ ರದು.
ಕಾನೂನುಗಳ ಸಮರ್ಪಕ ಪಾಲನೆಯಾಗಬೇಕು. ವೈದ್ಯಕಿ ೕಯ ಸೌಲಭ್ಯಗಳ ಸದ್ಬಳಕೆ ಆಗ ಬೇಕು. ಭ್ರೂಣ ಹತ್ಯೆಯಂತಹ ಪ್ರಕರಣಗಳು ಕಂಡುಬಂದರೆ ಪೊಲೀಸ್‌ ಅಥವಾ ಕಾನೂನು ಸೇವಾ ಪ್ರಾಽ ಕಾರಕ್ಕೆ ತಿಳಿಸಬೇಕು. ಅದರ ವಿರುದ್ದ ಕ್ರಮ ಕೈಗೊಳ್ಳಲಾ ಗುವುದು ಎಂದು ತಿಳಿಸಿದರು.
ಪಿಸಿಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ. ವೀಣಾ ಭಟ್‌ ಮಾತನಾಡಿ, ಇಂದಿಗೂ ಸಮಾಜದಲ್ಲಿ ಹೆಣ್ಣಿಗೆ ಎರಡನೇ ದರ್ಜೆ ಪ್ರಜೆಯ ಸ್ಥಾನವಿದೆ. ಹೆಣ್ಣಿಗೆ ಹೆಣ್ಣು ಶತ್ರು ಎಂಬ ಭಾವನೆ ಹುಟ್ಟಿಹಾಕಿ ರುವುದು ಸಮಾಜ. ಸಮಾಜದಲ್ಲಿ ಹೆಣ್ಣು ಅನುಭವಿಸುವ ನೋವು, ಬವಣೆಯಿಂದ ಮತ್ತೊಂದು ಹೆಣ್ಣು ಬೇಡವೆನ್ನುತ್ತಾಳೆಯೇ ಹೊರತು ಆಕೆಗೆ ಹೆಣ್ಣು ಮಗು ಕಷ್ಟವಲ್ಲ.
ಹೆಣ್ಣು ಮನೆಯಲ್ಲಿ ನಿರಂತರ ವಾಗಿ ಕಾಯಕದಲ್ಲಿ ನಿರತಳಾಗಿರು ತ್ತಾಳೆ. ಬಹುಕಾರ್ಯಗಳ ನಿರ್ವ ಹಣೆಯಲ್ಲಿ ನಿಷ್ಣಾತಳು. ಪರಂ ಪರೆಯ ನಿರಂತರತೆಯನ್ನು ಕಾಪಾ ಡಿಕೊಂಡು ಬರುತ್ತಿರುವ ಈಕೆಗೆ ಪ್ರಸ್ತುತ ಮನೆ ಮತ್ತು ಹೊರಗಡೆ ದುಡಿಮೆಯಲ್ಲಿ ಸಮತೋಲನ ಸಾಽಸುವುದು ಕಷ್ಟವಾಗುತ್ತಿದೆ. ಆರೋಗ್ಯ ಹದಗೆಡುತ್ತಿದೆ. ಇದರ ಬಗ್ಗೆ ಗಮನ ಬೇಕು. ಹಾಗೂ ಸುಧಾರಣೆಯಾಗಬೇಕೆಂದರು.
ಹೆಣ್ಣು ಎಲ್ಲ ಕ್ಷೇತ್ರದಲ್ಲಿ ಇದ್ದಾಳೆಯಾದರೂ ರಾಜಕೀಯ, ಅಽ ಕಾರ ಹಂಚುವಿಕೆಯಲ್ಲಿ ಅವರ ಸಂಖ್ಯೆ ಕಡಿಮೆಯೇ. ಹಾಗೂ ಇನ್ನೂ ಕೂಡ ಗಂಡಸರ ಸಂತಾನ ಹರಣ ಶಸಚಿಕಿತ್ಸೆ ವ್ಯಾಸಕ್ಟಮಿ ಶೇ.2 ಸಾಧ್ಯವಾಗುತ್ತಿಲ್ಲವೆಂದರು.
ಇದೇ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 24 ವೈದ್ಯರಿಗೆ ಬಿ.ಸಿ.ರಾಯ್‌ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಡಿಖಹೆಚ್‌ಓ ಡಾ.ರಾಜೇಶ್‌ ಸುರಗಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಽೕಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಽ ಕಾರದ ಸದಸ್ಯ ಕಾರ್ಯ ದರ್ಶಿ ರಾಜಣ್ಣ ಸಂಕಣ್ಣನವರ್‌, ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆ ವೈದ್ಯ ಕೀಯ ಅಽೕಕ್ಷಕ ಡಾ.ಶ್ರೀಧರ್‌, ಶಸಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್‌, ಐಎಂಎ ಅಧ್ಯಕ್ಷ ಡಾ.ಅರುಣ್‌ ಎಂ.ಎಸ್‌, ಜಿಲ್ಲಾ ಮಟ್ಟದ ಕಾರ್ಯಕ್ರಮ ಅನು ಷ್ಟಾನಾಽ ಕಾರಿಗಳು, ಸಂಪನ್ಮೂಲ ವ್ಯಕ್ತಿಗಳಾದ ಡಾ.ಶಿವಾನಂದ, ವೆಂಕಟೇಶ್‌ ರಾವ್‌ ಹಾಜರಿದ್ದರು.