ಜಿಲ್ಲಾ ಸುದ್ದಿ

ಪ್ರತಿಯೊಂದು ಕ್ಷೇತ್ರ, ಉದ್ಯೋಗದಲ್ಲಿ ಯಶಸ್ಸಿಗೆ ಕೌಶಲ್ಯ ಮುಖ್ಯ

ಶಿವಮೊಗ್ಗ: ಪ್ರತಿಯೊಂದು ಕ್ಷೇತ್ರ ಹಾಗೂ ಉದ್ಯೋಗದಲ್ಲಿ ಯಶಸ್ಸು ಸಾಸಲು ಕೌಶಲ್ಯ ಅತ್ಯಂತ ಮುಖ್ಯ ಆಗುತ್ತದೆ. ಕೌಶ ಲ್ಯಗಳು ವೃತ್ತಿಯಲ್ಲಿ ಹಂತ ಹಂತ ವಾಗಿ ಪ್ರಗತಿ ಸಾಸಲು ನೆರವಾ ಗುತ್ತದೆ ಎಂದು ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆಯ ಸಿಇಒ ಡಿ. ಸುರೇಶ್‌ ಕುಮಾರ್‌ ಹೇಳಿದರು.

ನಗರದ ರೋಟರಿ ಮಿಡ್‌ ಟೌನ್‌ ಸಭಾಂಗಣದಲ್ಲಿ ಕ್ಯಾಲೈ ಟೆಕ್‌್ಸ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಕೌಶಲ್ಯ ಅಭಿವದ್ಧಿ ಹಾಗೂ ವೃತ್ತಿ ಸೇವಾ ಅವಕಾಶಗಳ ಬಗ್ಗೆ ತರಬೇತಿ ಹಾಗೂ ಮಾರ್ಗದರ್ಶನದ ಪ್ರವೇಶ ಪರೀಕ್ಷೆ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಅಧ್ಯಯನದಲ್ಲಿ ಮುಂದಿದ್ದರೂ ಕೌಶಲ್ಯಗಳ ವಿಷಯದಲ್ಲಿ ಉದ್ಯೋಗ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯವು ತುಂಬಾ ಮುಖ್ಯವಾ ಗುತ್ತದೆ. ಕೌಶಲ್ಯಗಳ ಕಲಿಕೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಉದ್ಯೋಗ ಬಯಸುವ ಎಲ್ಲರೂ ಶಿಕ್ಷಣದ ಜತೆಯಲ್ಲಿ ಕಂಪ್ಯೂ ಟರ್‌ ಜ್ಞಾನ

ಬೆಳೆಸಿಕೊಳ್ಳ ಬೇಕು. ಶ್ರದ್ಧೆ ಹಾಗೂ ಆತ್ಮವಿಶ್ವಾಸದಿಂದ ತಾವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರಕ್ಕೆ ಅವಶ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ರೋಟರಿ ವಲಯ ಮಾಜಿ ಸಹಾಯಕ ಗವರ್ನರ್‌ ಜಿ. ವಿಜ ಯಕುಮಾರ್‌ ಮಾತನಾಡಿ, ರೋಟರಿ ಸಂಸ್ಥೆಯ ಮಾರ್ಗ ದರ್ಶನ ಹಾಗೂ ಅಂತರಾಷ್ಟ್ರೀಯ ರೋಟರಿ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಅವಕಾಶಗಳಲ್ಲಿ ವಂಚಿತರಾದ ಹಾಗೂ ಆರ್ಥಿಕ ವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌಶಲ್ಯ ತರಬೇತಿ ನೀಡುವ ಕೆಲಸ ಮಾಡುತ್ತಿರು ವುದು ಶ್ಲಾಘನೀಯ ಎಂದು ಹೇಳಿ ದರು.

ರೋಟರಿ ಮಿಡ್‌ ಟೌನ್‌ ಕ್ಲಬ್‌ ಅಧ್ಯಕ್ಷೆ ವೀಣಾ ಸುರೇಶ್‌ ಮಾತ ನಾಡಿ, ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯ ಚಟುವಟಿಕೆ ಗಳನ್ನು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಸಂವಹನ ಕೌಶಲ್ಯ, ಕಂಪ್ಯೂಟರ್‌ ವಿಜ್ಷಾನದ ಮೂಲ ಆಶಯ, ಸಾಪ್ಟವೇರ್‌ಗಳ ಪರಿಚಯ, ಕಾರ್ಯಕ್ರಮ ನಿರೂ ಪಣೆ, ಪರೀಕ್ಷೆ ಸಿದ್ಧತೆಗಳ ಬಗ್ಗೆ ಮಾ ಹಿತಿ ನೀಡಲಾಗುತ್ತದೆ ಎಂದರು.

ತರಬೇತುದಾರರಾದ ರಘುಪತಿ, ಸುಜಾತಾ ಉದಯ್‌, ವೀಣಾ ಸುರೇಶ್‌, ವಿಜಯ್‌ ಕುಮಾರ್‌, ಉದಯ್‌, ಸುರೇಶ್‌ ಕುಮಾರ್‌ ಉಪಸ್ಥಿತರಿದ್ದರು.