ಜಿಲ್ಲಾ ಸುದ್ದಿ

ಕ್ರಿಶ್ಚಿಯನ್‌ ಸಮುದಾಯವು ತುಂಬಾ ಶಾಂತಿಯುತ ಸಮುದಾಯ : ಕೆಎಸ್‌ಈ

ಶಿವಮೊಗ್ಗ : ಸೋಮವಾರ ಸಂಜೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯ್ಲಯದಲ್ಲಿ ಕ್ರೈಸ್ತ ಸಮಾಜದ ಮುಖಂಡರೊಂದಿಗೆ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕ  ಕೆ.ಎಸ್‌. ಈಶ್ವರಪ್ಪನವರು ಹಾಗೂ ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಗಳಾದ ಎ.ಎನ್‌.ನಟರಾಜ್‌ ರವರು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತ ನಾಡಿದ ಈಶ್ವರಪ್ಪರವರು  ಕ್ರಿಶ್ಚಿಯನ್‌ ಸಮುದಾಯವು ತುಂಬಾ ಶಾಂತಿಯುತ ಸಮು ದಾಯವಾ ಗಿದ್ದು ಹಲವಾರು ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತವಾ ಗಿದೆ.

ನಮ್ಮ ಡಬಲ್‌ ಇಂಜಿನ್‌ ಸರ್ಕಾರವು ಕ್ರೈಸ್ತರ ಶ್ರೇಯೋ ಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಕೊಟ್ಟಿದೆ ಎಂದು ಹೇಳುತ್ತಾ, ಕ್ರಿಶ್ಚಿಯನ್‌ ಸಮುದಾ ಯದ ಮುಖಂಡರುಗಳು ರಾಜ ಕೀಯದಲ್ಲಿ ಅಪಾರ ಪ್ರಮಾಣದಲ್ಲಿ ಬಂದು ತೊಡಗಿಸಿಕೊ ಳ್ಳಬೇಕು ಹೇಳಿದರು.

 ಕ್ರಿಶ್ಚಿಯನ್‌ ಸಮುದಾಯದ ಪರವಾಗಿ ಬಿಜೆಪಿ ಸರ್ಕಾರಗಳು ಸದಾಕಾಲ ಇರುತ್ತದೆ ಎಂದು ಹೇಳಿದರು. ಹಾಗೂ ನಿಮ್ಮ ಜೊತೆಯಲ್ಲಿ ಸದಾಕಾಲ ನಾನು ಕೂಡ ಇರುತ್ತೇನೆ ಎಂದರು.

ನಟರಾಜ್‌ ರವರು ಮಾತನಾಡಿ ಕ್ರಿಶ್ಚಿಯನ್‌  ಸಮುದಾಯದ ಪ್ರಮುಖರು ಬಿಜೆಪಿ ಸಂಘಟ ನೆಯ ಕಾರ್ಯಕರ್ತರಾಗಿ ನಾಯ ಕರಾಗಿ ಹೊರಹೊಮ್ಮಬೇಕು ಗೋವಾದಲ್ಲಿ  ಹಾಗೂ ಈಶಾನ್ಯ ರಾಜ್ಯಗಳಲ್ಲಿ ಹಲವಾರು ಕ್ರಿಶ್ಚಿಯನ್‌ ಮುಖಂಡರುಗಳು ಬಿಜೆಪಿಯ ಶಾಸಕರು ಹಾಗೂ ಮಂತ್ರಿಗಳಾಗಿದ್ದಾರೆ ಅದೇ ರೀತಿಯಲ್ಲಿ ಕರ್ನಾಟಕದಲ್ಲಿಯೂ ಆಗಬೇಕು  ಎಂದು ಹೇಳಿದರು.

ಸಮಾಜದ ಪ್ರಮುಖರಾದ ವಿನ್ಸೆಂಟ್‌ ರೋಡ್ರಿಗಸ್‌ ಮಾತ ನಾಡಿ ರಾಜ್ಯದಲ್ಲಿ ಕ್ರಿಶ್ಚಿಯನ್‌ ಅಭಿವೃದ್ಧಿ ಪರಿಷತ್‌ ಸ್ಥಾಪನೆ ಮಾಡಿದ್ದ ಬಿಎಸ್‌ ಯಡಿಯೂರಪ್ಪ ನವರನೇತೃತ್ವದ ಬಿಜೆಪಿ ಸರ್ಕಾರ ಎಂದು ನೆನಪಿಸಿದರು.

 ಕ್ರೈಸ್ತರಿಗೆ ಪ್ರತ್ಯೇಕವಾದ ಬಜೆಟ್ಟನ್ನು ಮಾಡಿ ನಿಗಮವನ್ನು ಸ್ಥಾಪಿಸಿದ್ದು ಬಿಜೆಪಿ ಸರ್ಕಾರ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರುಗಳಾದ ಕ್ಲೆಮೆಂಟ್‌ ರಾಯನ್‌,ಅರ್ಪುದ ಸ್ವಾಮಿ (ಬಬ್ಬಾ ),ನಿತಿನ್‌, ಸಿ.ಜೆ. ಕುಮಾರ್‌,ಅಲೋನ್ಸ, ಮಚ್ಚಾದೋ, ಪರ್ಸಿ ಡಿಸೋಜಾ, ಉರ್ಬನ್‌ ರ್ನಾಂಡಿಸ್‌,ಸನ್ನಿ ಮಾರ್ಶೀಲಾಮಣಿ,ಮೇಲ್ವಿನ್‌ ಸಂಜಯ್‌,ಆಂಟೊ ಜೋಸೆ್‌‍ ಸಜಯ್‌ ರೋಷನ್‌ ಉಪಸ್ಥಿತರಿದ್ದರು.