ಜಿಲ್ಲಾ ಸುದ್ದಿಶಿವಮೊಗ್ಗ

ಶಿಕಾರಿಪುರದಲ್ಲಿ ಸಂಭ್ರಮದಿಂದ ರಂಜಾನ್‌ ಆಚರಣೆ ಭಗವಂತನಿಗೆ ಪ್ರಿಯವಾದ ಕೆಲಸ ಮಾಡಬೇಕು : ಹಾಫಿಜ್‌ ಕರ್ನಾಟಕಿ

ಶಿಕಾರಿಪುರ: ನಗರದಲ್ಲಿ ಇಂದು ಮುಸ್ಲಿಂ ಸಮುದಾಯದ ಸಮಸ್ತ ಬಾಂಧವರು ಸಂಭ್ರಮ ದಿಂದ ರಂಜಾನ್‌ ಹಬ್ಬ ಆಚರಿಸಿ ದರು ನಗರದ ಶಿರಾಳಕೊಪ್ಪ ರಸ್ತೆಯಲ್ಲಿರುವ ಈದ್ಗಾ ಮೈದಾನದ ಆವರಣದಲ್ಲಿ ನೆರೆದಿದ್ದ ಸಾವಿರಾರು ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಶುಭ ಹಾರೈಸಿದ ಸಮಾಜದ ಅಧ್ಯಕ್ಷರಾದ ಡಾಕ್ಟರ್‌ ಹಾಫೀಜ್‌ ಕರ್ನಾಟಕಿ ಮಾತನಾಡಿ ಎಲ್ಲರೂ ಪ್ರೀತಿಯಿಂದ ಬದುಕುವಂತ ವಾತಾವರಣ ನಿರ್ಮಾಣವಾಗ ಬೇಕಾಗಿದೆ ಹಿಂದೂ ಮುಸ್ಲಿಂ ಕ್ರೈಸ್ತ ಎಂಬ ಭೇದಭಾವ ತೊರೆದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಾಗಿದೆ. ಹಸಿದವರಿಗೆ ಕೈಲಾದಷ್ಟು ನೆರವು ನೀಡುವ ಕಾರ್ಯ ಮಾಡಿದಾಗ ಮಾತ್ರ ಅದು ಭಗವಂತನಿಗೆ ಪ್ರಿಯವಾಗುತ್ತದೆ. ರಂಜಾನ್‌ ಹಬ್ಬದ ಉಪವಾಸದ ಸಂದೇಶವ ಕೂಡ ಇದೆ ಆಗಿದ್ದು ಇಲ್ಲದವರಿಗೆ ಇರುವವರು ದಾನ ಧರ್ಮ ಮಾಡುವ ಮೂಲಕ ಸಹಕರಿಸ ದಾಗ ಮಾತ್ರ ಹಬ್ಬ ಸಾರ್ಥಕವಾ ಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಸಮಾಜದ ಕಾರ್ಯದರ್ಶಿಗಳಾದ ಮಕ್ಬುಲ್‌ ಸಾಬ್‌, ಉಪಾಧ್ಯಕ್ಷ ರುಗಳಾದ ಕರೀಂ ಸಾಬ್‌, ಹಬೀಬುಲ್ಲ ಸಾಬ್‌, ಖಜಾಂಚಿ ಅಶ್ರ್‌‍ ಉಲ್ಲಾ, ಸಮಾಜದ ಮುಖಂಡರುಗಳಾದ ಜಾರ್‌ ಅಲಿಖಾನ್‌, ವಜೀರ್‌ ಸಾಬ್‌, ಕಾಸಿಂಸಾಬ್‌, ಕರೀಂ ಸಾಬ್‌, ಯಾಜ್‌ ಅಹ್ಮದ್‌ ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.