ಜಿಲ್ಲಾ ಸುದ್ದಿ

ಮತದಾನ ನಮ್ಮೆಲ್ಲರ ಕರ್ತವ್ಯ, ತಪ್ಪದೇ ಮತ ಚಲಾಯಿಸಿ

ಶಿವಮೊಗ್ಗ: ಮತದಾನ ನಮ್ಮೆಲ್ಲರ ಕರ್ತವ್ಯ ಆಗಿದ್ದು, ಮತದಾರರು ಪ್ರತಿಯೊಬ್ಬರು ನಿರ್ಭೀತಿಯಿಂದ ತಪ್ಪದೇ ಮತ ಚಲಾಯಿಸಬೇಕು. ಪ್ರತಿನಿ ಆಯ್ಕೆಯ ಪ್ರಕ್ರಿಯೆಯಲ್ಲಿ ನಾವೆ ಲ್ಲರೂ ಪಾಲ್ಗೊಳ್ಳಬೇಕು ಎಂದು ಚುನಾವಣಾ ರಾಜ್ಯ ಸಂಪನ್ಮೂಲ ವ್ಯಕ್ತಿ ನವೀದ್‌ ಅಹಮದ್‌ ಪರ್ವೇಜ್‌ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಹಾಗೂ ಇನ್ನರ್‌ವ್ಹೀಲ್‌ ಶಿವಮೊಗ್ಗ ಪೂರ್ವ ಸಂಸ್ಥೆ ಆಶ್ರಯದಲ್ಲಿ ಶಿವ ಮೊಗ್ಗ ರಾಜೇಂದ್ರ ನಗರದ ಸಭಾಂ ಗಣದಲ್ಲಿ ಆಯೋಜಿಸಿದ್ದ ಮತ ದಾನ ಜಾಗೃತಿ ಕಾರ್ಯ್ಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾ ಡಿದರು.

ಹದಿನೆಂಟು ವಯಸ್ಸು ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಯುವ ಜನರು ಉತ್ಸಾಹದಿಂದ ಮತದಾನ ದಲ್ಲಿ ಭಾಗವಹಿಸಿ ಉತ್ತಮ ಪ್ರತಿ ನಿಗಳ ಆಯ್ಕೆ ಮಾಡಬೇಕು. ಚುನಾವಣಾ ಆಯೋಗವು ಮತ ದಾನ ಪ್ರಮಾಣ ಹೆಚ್ಚಳ ಮಾಡು ವಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಆಯೋಗವು ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದೂರು ನೀಡಬಹುದು. ಸಾರ್ವಜನಿಕರು ಮತದಾನ ಪ್ರಕ್ರಿಯೆಯಲ್ಲಿ ಭಾಗ ವಹಿಸಿ ತಪ್ಪದೇ ಮತ ಚಲಾಯಿ ಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರ ಸ್ವಾಮಿ ಮಾತನಾಡಿ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಮಾಜದಲ್ಲಿ ಮತದಾನದ ಬಗ್ಗೆ ಸದಾ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇದರಿಂದ ಮತ ದಾನ ಪ್ರಮಾಣ ಹೆಚ್ಚಿಸಲು ಸಹ ಕಾರಿ ಆಗಲಿದೆ. ಉತ್ತಮ ರಾಜ್ಯ ನಿರ್ಮಾಣ ಮಾಡಲು ಜನಪ್ರ ತಿನಿಗಳ ಆಯ್ಕೆ ಪ್ರಕ್ರಿಯು ಮಹ ತ್ವದ್ದಾಗಿದೆ ಎಂದು ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ಇನ್ನರ್‌ವ್ಹೀಲ್‌ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಮಧುರಾ ಮಹೇಶ್‌, ಮಾಜಿ ಸಹಾಯಕ ಗವರ್ನರ್‌ ಜಿ.ವಿಜಯ್‌ಕುಮಾರ್‌, ಚಂದ್ರಹಾಸ ಪಿ ರಾಯ್ಕರ್‌, ಮಾಜಿ ಅಧ್ಯಕ್ಷ ಎನ್‌.ಎಚ್‌.ಶ್ರೀಕಾಂತ್‌, ಡಾ. ಪರಮೇಶ್ವರ್‌, ಎಸ್‌. ಗಣೇ ಶ್‌, ಅರುಣ ದೀಕ್ಷಿತ್‌, ಕೇಶವಪ್ಪ, ಮುಕುಂದ್‌ಗೌಡ, ಎ.ಒ. ಮಹೇಶ್‌, ಕೃಷ್ಣಮೂರ್ತಿ, ನಾಗ ವೇಣಿ, ಬಿಂದು ವಿಜಯ್‌ ಕುಮಾರ್‌ ಉಪಸ್ಥಿತರಿದ್ದರು.